(www.vknews.com) : ದೇಶದ ಯಾವುದೇ ಭಾಗದಲ್ಲಿ ನಡೆಯುವ ಪ್ರಾಕೃತಿಕ ವಿಕೋಪಗಳು ಯಾವುದೇ ಮುನ್ಸೂಚನೆ ನೀಡದೆ ಬರುವುದಿಲ್ಲ. ಈ ಸಂದರ್ಭದಲ್ಲಿ ಜನರ ಜೀವ ಉಳಿಸಲು ಪ್ರಾಕೃತಿಕ ವಿಕೋಪದ ಬಗ್ಗೆ ಜ್ಞಾನ ಅಗತ್ಯವಾಗಿ ಬೇಕಾಗಿದೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಗುಂಟೂರು ಇಲ್ಲಿನ ಕಮಾಂಡೆಂಟ್ ಗೋಪಾಲ್ ಮೀನಾರವರು ಹೇಳಿದರು. ದಿನಾಂಕ ದಿನಾಂಕ 26-06-2020 ರಂದು ನಾಗರಿಕ ರಕ್ಷಣಾ ಪಡೆ ಪುತ್ತೂರು ಇದರ ಸಹಯೋಗದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇವುಗಳ ಸಹಭಾಗಿತ್ವದಲ್ಲಿ ಜೂನ್ 26 ರಂದು ವಿವೇಕಾನಂದ ಪಾಲಿಟೆಕ್ನಿಕ್ನಲ್ಲಿ ನಡೆದ ರಕ್ಷಣಾ ಕಾರ್ಯ ಮತ್ತು ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುಗದಲ್ಲಿ ದೇಶದ ಯಾವುದೇ ಭಾಗದಲ್ಲಿ ಸೈಕ್ಲೋನ್, ಪ್ರಳಯ, ತೂಫಾನ್, ಮುಂತಾದ ವಿಪತ್ತು ನಡೆಯಬಹುದು. ಈ ಸಂದರ್ಭದಲ್ಲಿ ಜನರ ಜೀವ ಉಳಿಸಲು ನಾವುಗಳು ಪ್ರಯತ್ನ ಪಡುವುದರ ಜೊತೆಗೆ ನಮ್ಮ ಸ್ವಯಂ ರಕ್ಷಣೆಯೂ ಬಹಳ ಮುಖ್ಯವಾಗಿರುತ್ತದೆ. ಪ್ರಾಕೃತಿಕ ವಿಕೋಪ ಆದಂತಹ ಸಂದರ್ಭದಲ್ಲಿ ಮನುಷ್ಯ ಮತ್ತೊಬ್ಬರ ಜೀವ ಉಳಿಸಲು ಹೋಗಬೇಕಾದರೆ ಅದಕ್ಕೆ ಪೂರಕವಾದ ತರಬೇತಿ ಬಹಳ ಅಗತ್ಯವಾಗಿ ಬೇಕಾಗುತ್ತದೆ ಜೊತೆಗೆ ಇದು ಪುಣ್ಯದ ಕೆಲಸವಾಗಿರುತ್ತದೆ ಎಂದ ಅವರು ಪ್ರಸ್ತುತ ವಿಶ್ವವೇ ಎದುರಿಸುವ ಮಾರಾಣಾಂತಿಕ ರೋಗವೆನಿಸಿದ ಕೋವಿಡ್ನ್ನು ಎದುರಿಸಲು ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವ ಮೂಲಕ ಕೋರೋನಾ ವೈರಸ್ (ಕೋವಿಡ್) ರೋಗದಿಂದ ರಕ್ಷಣೆ ಹೊಂದಬೇಕಾಗಿದೆ ಎಂದರು.
ಪ್ರಸ್ತುತ ನಾವು ಎದುರಿಸುವ ವಿಕೋಪಗಳು ಮಾನವ ನಿರ್ಮಿತ ವಿಪತ್ತುಗಳಾಗಿದ್ದು, ಇವನ್ನು ಎದುರಿಸಲು ಮಾನಸಿಕವಾಗಿ ಸಿದ್ದಗೊಳ್ಳಬೇಕಾಗಿದೆ. ಪ್ರಾಕೃತಿಕ ವಿಕೋಪ ನಡೆದ ಸಂದರ್ಭದಲ್ಲಿ ನಾವುಗಳು ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜದಲ್ಲಿ ಸೈನಿಕರಾಗಿ ಕೆಲಸ ಮಾಡುತ್ತಾ ಓರ್ವ ಸತ್ಪ್ರಜೆಯಾಗಿ ಬದುಕುವ ಮೂಲಕ ಸದೃಡ ಸಮಾಜವನ್ನು ನಿರ್ಮಿಸಬೇಕಾಗಿದೆ. ವಿದ್ಯುತ್ ಶಾಕ್ ಹೃದಯಾಘಾತ, ನೀರಿನ ಅವಘಡದ ಸಂದರ್ಭದಲ್ಲಿ ಯಾವ ರೀತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎನ್ನುವುದನ್ನು ಇಲ್ಲಿ ಕಲಿಸಿ ಕೊಡಲಾಗುತ್ತದೆ ಕಷ್ಟಕಾಲದಲ್ಲಿ ಮಾನವನನ್ನು ಉಳಿಸಲು ವೈದ್ಯರೇ ಆಗಬೇಕೆಂದಿಲ್ಲ ಓರ್ವ ಸಾಮಾನ್ಯ ಮನುಷ್ಯನಿಂದಲೂ ಸಾಧ್ಯವಿದೆ. ಸಮಾಜದಲ್ಲಿ ಯಾರು ತೊಂದರೆಗೆ ಒಳಪಡುತ್ತಾರೋ, ಅವರ ಜೀವ ಉಳಿಸುವ ಕಾರ್ಯ ಮಾಡಿದಾಗ ಪೌರರಕ್ಷಣಾ ಪಡೆಗೆ ನಿಜವಾದ ಅರ್ಥ ಬರುತ್ತದೆ ಎಂದು ಪೌರರಕ್ಷಣಾ ಪಡೆಯ ಚೀಫ್ ವಾರ್ಡನ್ರಾದ ಡಾ: ಮುರಲೀ ಮೋಹನ್ ಚೂಂತಾರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ: ಕೆ.ಎಂ.ಕೃಷ್ಣ ಭಟ್ರವರು ಮಾತನಾಡಿ, ಯಾವುದೇ ಮುನ್ಸೂಚನೆ ನೀಡದೆ ವಿಪತ್ತು ಬರುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಏನು ಮಾಡಬೇಕು ಎನ್ನುವುದು ತೋಚುವುದಿಲ್ಲ. ಇದೆಲ್ಲಾ ಗೊತ್ತಾಗಬೇಕಾದರೆ ವಿಪತ್ತು ನಿರ್ವಹಣೆ ಹೇಗೆ ಎಂಬುದರ ಬಗ್ಗೆ ಸರಿಯಾದ ತರಬೇತಿ ಅಗತ್ಯ. ಹಲವಾರು ಸಂದರ್ಭದಲ್ಲಿ ಮಾಡಬಾರದ್ದನ್ನು ಮಾಡಿದಾಗ ಆಗಬಾರದ್ದು ಆಗುತ್ತದೆ ಎನ್ನುವುದಕ್ಕೆ ಸರಿಯಾದ ತರಬೇತಿ ಇಲ್ಲದಿರುವುದೇ ಕಾರಣವಾಗುತ್ತದೆ. ವಿಪತ್ತು ಬಂದಾಗ ಹಿಂಜರಿಯದೆ ಮುನ್ನುಗ್ಗುವಾಗ ಅವರವರ ಜೀವದ ಬಗ್ಗೆಯೂ ಎಚ್ಚರಿಕೆ ಇರುವುದು ಒಳಿತು ಎಂದರು.
ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಸಮಿತಿಯ ಸಂಚಾಲಕ ಮಹಾದೇವ ಶಾಸ್ತ್ರಿ ಮಣಿಲ, ವಿವೇಕಾನಂದ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ ಎಂ., ಸದಸ್ಯ ಕೆ.ಟಿ.ಮುರಳಿ, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲಕ ಡಾ: ಪೀಟರ್ ವಿಲ್ಸನ್ ಪ್ರಭಾಕರ್, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾಯದರ್ಶಿ ರಫೀಕ್ ರೋಯಲ್, ವೈಎಂಸಿಎ ಸದಸ್ಯ ವಿಕ್ಟರ್ ಮಾರ್ಟಿಸ್, ರೋಟರಿ ಎಲೈಟ್ ಸದಸ್ಯ ಮೌನೇಶ್ ವಿಶ್ವಕರ್ಮ, ವಿವೇಕಾನಂದ ಪಾಲಿಟೆಕ್ನಿಕ್ನ ಯೂತ್ ರೆಡೆಕ್ರಾಸ್ ಸಿವಿಲ್ ಡಿಫೆನ್ಸ್ನ ಸಂಯೋಜಿಕ ಗುರುಪ್ರಸನ್ನರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಎಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕಿ ಜಯಲಕ್ಷ್ಮಿ ಪ್ರಾರ್ಥಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ ಆಡಳಿತ ಸಮಿತಿಯ ಅಧ್ಯಕ್ಷ ಪ್ರಸನ್ನ.ಎನ್.ಭಟ್ ಸ್ವಾಗತಿಸಿದರು, ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಚೇರ್ಮ್ಯಾನ್ ಆಸ್ಕರ್ ಆನಂದ್ ವಂದಿಸಿದರು. ವಿವೇಕಾನಂದ ಪಾಲಿಟೆಕ್ನಿಕ್ನ ಎಲೆಕ್ಟ್ರಾನಿಕ್ಸ್ ವಿಭಾಗದ ಉಪನ್ಯಾಸಕಿ ಉಷಾಕಿರಣ್ ಕಾರ್ಯಕ್ರಮ ನಿರೂಪಿಸಿದರು.
ಕಟ್ಟಡದಲ್ಲಿ ಶಾರ್ಟ್ಸಕ್ರ್ಯೂಟ್ ಆಗಿ ಬೆಂಕಿ ಬಿದ್ದ ಸಂದರ್ಭದಲ್ಲಿ ಕಟ್ಟಡದಲ್ಲಿರುವವರನ್ನು ಹೇಗೆ ರಕ್ಷಣೆ ಮಾಡಬಹುದು. ನೀರಿನಲ್ಲಿ ಸಿಲುಕಿದವರನ್ನು ಹೇಗೆ ರಕ್ಷಣೆ ಮಾಡಬಹದು ಎಂಬುದರ ಬಗ್ಗೆ ಒದು ದಿನದ ತರಬೇತಿಯನ್ನು ಈ ಸಂದರ್ಭದಲ್ಲಿ ಪೌರರಕ್ಷಣಾ ದಳದ ಕಾರ್ಯಕರ್ತರಿಗೆ ಎನ್ಡಿಆರ್ಏಫ್ನ ಕಾನ್ಸ್ಠೆಬಲ್ ವಿ.ವಿ.ಎಸ್. ನಾರಾಯಣರವರು ಪ್ರಾಯೋಗಿಕವಾಗಿ ಮಾಹಿತಿ ಮತ್ತು ತರಬೇತಿ ನೀಡಿದರು. ಪುತ್ತೂರಿನ ಪೌರರಕ್ಷಣಾ ದಳದ ಸುಮಾರು 40 ಮಂದಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.