(www.vknews.in).
ತುಳುನಾಡಿನ ವರ್ಷಗಳ ಹನ್ನೆರಡು ತಿಂಗಳನ್ನು ತುಳು ಬಾಷೆಯಲ್ಲಿ ಪಗ್ಗು,ಬೇಸ,ಕಾರ್ತೇಲ್,ಆಟಿ,ಸೋನ,ನಿರ್ನಾಲ,ಬೊಂತೆಲ್,ಜಾರ್ತೆ,ಪೆರಾರ್ತೇ,ಪೊನ್ನಿ,ಮಾಯಿ,ಸುಗ್ಗಿ ,ಹೀಗೆ ಕರೆಯುತ್ತಾರೆ ಹೀಗೆ ಆಟಿ ನಾಲ್ಕನೇ ತಿಂಗಳು ಜುಲಾಯಿ ತಿಂಗಳ ಸಂಕ್ರಾಂತಿ ನಂತರ ಜುಲಾಯಿ 17 ರಿಂದ ಅಗೋಸ್ಟ16 ರವರೆಗೆ ತುಳುನಾಡಿನಲ್ಲಿ ಈ ತಿಂಗಳನ್ನು ಆಟಿ ತಿಂಗಳು ಎಂದು ಪರಿಗಣಿಸುತ್ತಾರೆ .
ಈ ತಿಂಗಳನ್ನು ಹಿಂದಿನ ಕಾಲದಲ್ಲಿ ತುಳುವರು ಬಹಳಷ್ಟು ಕಠಿಣ ತಿಂಗಳು ಎಂದು ಕರೆಯುತ್ತಿದ್ದರು ಆಟಿ ತಿಂಗಳಲ್ಲಿ ಯಾವುದೇ ಶುಭಕಾರ್ಯ ನಡೆಯುತ್ತಿರಲಿಲ್ಲ. ಕಷ್ಟ ಪಟ್ಟು ಕೂಡಿಟ್ಟ ಧಾನ್ಯಗಳೆಲ್ಲ ಖಾಲಿಯಾಗಿ ಅಟ್ಟ ಗುಡಿಸುವ ತಿಂಗಳು. ಬಹಳಷ್ಟು ಉತ್ತಮ ಮಳೆ ಬರುವ ಕಾಲ. ಈ ತಿಂಗಳಲ್ಲಿ ಪುಷ್ಯ,ಆಶ್ಲೇಷ, ಮೇಘ, ಈ ಮೂರು ನಕ್ಷತ್ರಗಳು ಅತೀ ಹೆಚ್ಚು ಮಳೆ ಸುರಿಯುವ ನಕ್ಷತ್ರ ಎಂದು ಕರೆಯಲಾಗುತ್ತದೆ ಅದಲ್ಲದೆ ತುಳುನಾಡಿನ ರೈತರಿಗೆ ಬಹಳಷ್ಟು ಕಠಿಣ ತಿಂಗಳು ಹಾಗೂ ತುಳುನಾಡಿನ ರೈತರು ಕೃಷಿ ಚಟುವಟಿಕೆ ಮುಗಿಸಿ ಎತ್ತು ಹಾಗೂ ದನಗಳನ್ನು ಸಾಕಿ ಕೊಂಡು ವಿಶ್ರಾಂತಿಯಲ್ಲಿ ಇರುವ ತಿಂಗಳು ಈ ತಿಂಗಳಲ್ಲಿ ಬತ್ತ ನಾಟಿ ಇರುತ್ತದೆ ಇತರ ಫಲ ವಸ್ತು ತೆಂಗು, ಅಡಿಕೆ,ಬಾಲೆ, ಗಿಡಗಳನ್ನು ನೆಡುವುದು ನಿಷೇಧ ವಿರುತ್ತದೆ .
ಹೊಸತಾಗಿ ಮದುವೆಯಾದ ಹೆಣ್ಣು ಮಗಳನ್ನು ತನ್ನ ತವರು ಮನೆಗೆ ಕರೆದುಕೊಂಡು ಬರುವುದು ಹಾಗೂ ತನ್ನ ಸೊಸೆಯನ್ನು ತವರು ಮನೆಗೆ ಕಳುಹಿಸುವ ಪದ್ಧತಿ ಇವರಿಗೆ ನಾಟಿ ಕೋಳಿ ಔತಣ ಕೂಟ ತುಳುನಾಡಿನ ಬಾಷೆಯಲ್ಲಿ(ಆಟಿ ತಮ್ಮಣ) ಏರ್ಪಡಿಸುವ ಪದ್ಧತಿ ತುಳು ಬಾಷೆಯಲ್ಲಿ (ಆಟಿ ಕುಳ್ಳುನ ಪದ್ಧತಿ) ಎಂದು ಕರೆಯುತ್ತಾರೆ ಪ್ರಸ್ತುತ ಕೆಲವು ಕಡೆಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ*
*ಆಟಿ ತಿಂಗಳಲ್ಲಿ ತುಳುನಾಡಿನ ಆಟಗಳು*:- ಸಾಮಾನ್ಯ ವಾಗಿ ಆಟಿ ತಿಂಗಳಲ್ಲಿ ಭಾರೀ ಮಳೆಬರುವ ಸಮಯದಲ್ಲಿ ಮನೆಯವರೆಲ್ಲ ಸೇರಿ ಚೆನ್ನೆಮನೆ,ಅರಸು ಆಟ, ಇತ್ಯಾದಿ ಆಟಗಳನ್ನು ಆಡುವ ಪದ್ಧತಿ ಹಿಂದೆ ರೂಡಿಯಲ್ಲಿತ್ತು ಹಾಗೂ ಮನೆಯಲ್ಲಿ ಇರುವ ಮಕ್ಕಳಿಗೆ ತುಳುನಾಡಿನ ವೀರ ಪುರುಷರ ಕಥೆಗಳನ್ನು ಹೇಳುತ್ತಿದ್ದರರು
*ತಿಂಗಳ ಆಟಿ ಕಳೆಂಜ*:- ಆಟಿ ತಿಂಗಳ ಆರಂಭದಲ್ಲಿ ಮನೆಮನೆಗೆ ತೆರಳಿ ತನ್ನ ನರ್ತನದ ಮೂಲಕ ತೋರಿಸುತ್ತಿದ್ದ ಆಟಿ ಕಳೆಂಜರು ಬರುತ್ತಿದ್ದರು ಈಗೆಲ್ಲಾ ಈ ಪದ್ಧತಿ ಮರೆಯಂಚಿನಲ್ಲಿ ಸಾಗುತ್ತಿದೆ
*ಆಟಿ ತಿಂಗಳ ತಿನಿಸುಗಳು*:- ಚೇಟ್ಲ ಕೆಸುವಿನ ಎಳೆಯಿಂದ ತಯಾರಿಸುವ ಒಂದು ಪದಾರ್ಥ, ತಜಂಕ್ ಪಲ್ಯ,ಕನಿಲೆ, ಮಳೆಗಾಲದ ಆರಂಭಕ್ಕೂ ಮುನ್ನ ಹಲಸಿನ ಹಣ್ಣುಗಳನ್ನು ಉಪ್ಪು ನೀರಿನಲ್ಲಿ ಸಂಗ್ರಹಿಸಿದ ಉಪಡ್ ಪಚ್ಚಿಲ್, ತಿಮರೆ ಚಟ್ನಿ, ಇತ್ಯಾದಿ ಇವು ಆಟಿ ತಿಂಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದರು
*ಆಟಿ ತಿಂಗಳಲ್ಲಿ ಬರುವ ಆಟಿ ಅಮಾವಾಸ್ಯೆ*:- ತುಳು ತಿಂಗಳ ಆಟಿಯಲ್ಲಿ ಬರುವ ಮೊದಲ ಹಬ್ಬ ಆಟಿ ಅಮಾವಾಸ್ಯೆ ತುಳುವರಿಗೆ ಆ ದಿನ ಸಂತಸದ ದಿನ ಎಂದರು ತಪ್ಪಿಲ್ಲ ಅಮಾವಾಸ್ಯೆ ಹಿಂದಿನ ದಿನ ಮನೆಯ ಹಿರಿಯರು ತೆರಳಿ ಮರಕ್ಕೆ ನೂಲು ಕಟ್ಟಿ”ನಾಳೆ ಬರುತ್ತೆನೆ ಮದ್ದು ಸಿದ್ಧ ಮಾಡಿ ಇಡು”ಎಂದು ವನದೇವತೆಯಲ್ಲಿ ಪ್ರಾರ್ಥನೆ ಮಾಡಿ ಬರುವುದು ನಂತರ ಮರುದಿನ ಮುಂಜಾನೆ ನಸುಕಿನ ವೇಳೆ ಕೋಳಿ ಕೂಗುವ ಮೊದಲು ಹಾಳೆಯ ಮರದ (ಪಾಳೆದ ಮರ) ಬಳಿ ತೆರಳಿ ಕಲ್ಲಿನ ಮೊಲಕ ಹಾಳೆಯ ಮರದ ತೊಗಟೆಯ ಕೆತ್ತೆಯನ್ನು ಜಜ್ಜಿ ಮನೆಗೆ ತಂದು ಅರೆಯುವ ಕಲ್ಲಿನಲ್ಲಿ ಮರದ ಕೆತ್ತೆಯೊಂದಿಗೆ ಶುಂಠಿ, ಬೆಳ್ಳುಳ್ಳಿ, ಜೀರಿಗೆ ಹಾಕಿ ಹರೆದು ಅದರ ರಸವನ್ನು ಬೆಳಿಗ್ಗೆ ಮನೆಯವರೆಲ್ಲ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಪದ್ಧತಿ .
ಅಮಾವಾಸ್ಯೆ ದಿನ ಹಾಳೆಯ ಮರಕ್ಕೆ ಒಂದು ಸಾವಿರ ಔಷಧಿಯ ಗುಣ ಮರದಲ್ಲಿ ಇರುತ್ತದೆ ಎಂದು ನಂಬಿಕೆ. ಈ ರಸವನ್ನು ಸೇರಿಸಿದರೆ ಒಂದು ವರ್ಷಗಳ ಕಾಲ ಯಾವುದೇ ರೋಗ ರೂಜಿನಗಳು ಬರುವುದಿಲ್ಲ ಎಂಬುದು ಹಿರಿಯರ ಮಾತು.
ಆ ದಿನ ಹಾಳೆಯ ಮರದ ರಸ ಕುಡಿದ ನಂತರ ಹತ್ತಿರದ ತೀರ್ಥಸ್ತಾನ ದೇವಾಲಯಗಳಾದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ನರಹರಿ ಪರ್ವತ, ಕಾರಿಂಜ,ಧರ್ಮಸ್ಥಳ, ಮುಂತಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ಕೊಟ್ಟು ಧವಸ ಧಾನ್ಯಗಳನ್ನು ತರ್ಪನ ಬಿಟ್ಟು ಮನೆಗೆ ಬಂದು ಮನೆಯಲ್ಲಿ ಮಾಡಿದ ಪತ್ರೂಡೇ (ಕೆಸುವಿನ ಎಳೆಯಿಂದ ಮಾಡಿದ ಒಂದು ಖಾದ್ಯ) ಸೇವಿಸುವುದು.
ಅ ದಿನ ತುಳುವರ ಮನೆಯಲ್ಲಿ ಹೆಚ್ಚಾಗಿ ಮಾಂಸದ ಅಡುಗೆ ಮಾಡುವ ಪದ್ಧತಿಗಳು ಇದೆ ಈ ಎಲ್ಲಾ ಆಚರಣೆಗಳು ತುಳುನಾಡಿನಲ್ಲಿ ಮಾತ್ರ ನೋಡಲು ಸಾದ್ಯ ಇತ್ತಿಚಿನ ಈ ರೀತಿಯ ಪದ್ಧತಿಯನ್ನು ಕೆಲವು ಸಂಘ ಸಂಸ್ಥೆಗಳಲ್ಲಿ ಮತ್ತು ಶಾಲೆಗಳಲ್ಲಿ ಆಟಿಡೊಂಜಿದಿನ ಎನ್ನುವಂತಹ ಕಾರ್ಯಕ್ರಮಗಳನ್ನು ಮಾಡಿ ತೋರಿಸಿ ಕೊಡುತ್ತಾರೆ ಪುರಾತನ ವಾದ ,ಹಿರಿಯರು ನಡೆಸಿ ಬಂದಂತಹ ಹಲವು ಕಾರ್ಯಕ್ರಮಗಳು ತೆರೆಮರೆಗೆ ಹೋಗುತ್ತಿದ್ದು ಮುಂದಿನ ತಲೆಮಾರಿಗೆ ಕಣ್ಮರೆಯಾಗಲೂ ಬಹುದು
ಲೇಖಕರು:-ದಿನೇಶ್.ಬಿ.ಬೊಳ್ಳಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.