ಉತ್ತರಪ್ರದೇಶ(ವಿಶ್ವ ಕನ್ನಡಿಗ ನ್ಯೂಸ್):ಕಳೆದ ವಾರವಷ್ಟೇ (ಆಗಸ್ಟ್ ಐದರಂದು) ನಡೆದಿದ್ದ ವಿವಾದಿತ ಅಯೋಧ್ಯಾ ರಾಮ ಮಂದಿರದ ಭೂಮಿ ಪೂಜೆಯಲ್ಲಿ ಸಕ್ರಿಯವಾಗಿ ಭಾಗವಾಗಿದ್ದ “ರಾಮ್ ಜನ್ಮಭೂಮಿ ನ್ಯಾಸ್ ಟ್ರಸ್ಟ್”ನ ಮುಖ್ಯಸ್ಥರಾದ ನೃತ್ಯ ಗೋಪಾಲ್ ದಾಸ್ ರಿಗೆ ಕೋವಿಡ್ ಪಾಸಿಟಿವ್ ಆಗಿದ್ದು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್,ಪ್ರಧಾನಿ ಮೋದಿ,ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊದಲಾದವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.82 ವರ್ಷ ಪ್ರಾಯದ ದಾಸ್ ರ ಆರೋಗ್ಯ ಹದೆಗೆಟ್ಟಿದ್ದು ಗುರ್ಗಾಂವ್ ನ ಪ್ರಸಿದ್ದ ಆಸ್ಪತ್ರೆ ಮೇದಾಂತದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವಿಶ್ವ ಹಿಂದೂ ಪರಿಷದ್ ಅಧೀನದಲ್ಲಿರುವ ರಾಮ್ ಜನ್ಮಭೂಮಿ ನ್ಯಾಸ್ ಟ್ರಸ್ಟ್ ನ ಮುಖ್ಯಸ್ಥರಾಗಿ 2003 ರಿಂದ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.