ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ದೇಶಾದ್ಯಂತ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಿಂದಿನ ವರ್ಷಗಳಲ್ಲಿ ವಿಜೃಂಭಣೆಯಿಂದ ನಡೆಯುತ್ತಿದ್ದ ಸ್ವಾತಂತ್ರ ದಿನಾಚರಣೆ ಈ ಬಾರಿ ಕೊರೋನ ಬಿಕ್ಕಟ್ಟಿನಿಂದ ಕಳೆಗುಂದಿದೆ ಅಂತಲೇ ಹೇಳಬಹುದು.
ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಆಕರ್ಷಣೆ ಎಂದರೆ ಅದು ಅಂದಿನ ಭಾಷಣ. ಸಾಮಾನ್ಯವಾಗಿ ಶಾಲೆಗಳಲ್ಲಿ ರಾಷ್ಟ್ರ ಹಬ್ಬಕ್ಕೆ ಹತ್ತು-ಹದಿನೈದು ದಿನಗಳಿರುವಾಗಲೇ ತಯಾರಿಗಳೆಲ್ಲ ಪ್ರಾರಂಭವಾಗುತ್ತಿದ್ದವು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾಷಣ, ದೇಶಭಕ್ತಿಗೀತೆ ಹೀಗೆ ಹಲವು ಕಾರ್ಯಕ್ರಮಗಳು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸಿ ಕೊಡುತ್ತಿದ್ದರು.
ಆದರೆ ಇಂದು ಕೊರೋನ ಸಂಕಷ್ಟದಿಂದ ಶಾಲೆಗಳೆಲ್ಲವೂ ಬಂದ್. ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನ ಆಚರಿಸಲು ಮರೆಯಲಿಲ್ಲ. ಅಕ್ಕ – ಪಕ್ಕದ ಮನೆಯಲ್ಲಿರುವ ಸ್ನೇಹಿತರೆಲ್ಲರನ್ನೂ ಸೇರಿಸಿ ಒಂದು ಸಣ್ಣ ವೇದಿಕೆಯ ಮೂಲಕ ತಮಗೆ ತಿಳಿದಿರುವ ಭಾಷಣ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡುವುದರ ಮೂಲಕ ಸರಳವಾಗಿ ಸ್ವಾತಂತ್ರ ದಿನಾಚರಣೆ ಆಚರಿಸಿದರು. ವಿದ್ಯಾರ್ಥಿಗಳಲ್ಲಿನ ಈ ಮನೋಭಾವನೆ ಅವರ ದೇಶಪ್ರೇಮ, ರಾಷ್ಟ್ರೀಯ ಹಬ್ಬದ ಆಚರಣೆಯ ಮಹತ್ವ ತಿಳಿಯಬಹುದು. ಮುಂದಿನ ದಿನಗಳಲ್ಲಿ ಭವ್ಯ ಭಾರತಕ್ಕಾಗಿ ಉತ್ತಮ ಕೊಡುಗೆಗಳು ನಿಮ್ಮದಾಗಲಿ… ಭವಿಷ್ಯ ಉಜ್ವಲವಾಗಲಿ…
ನಮ್ಮಯ ತನವನು ನಾವು ಮರೆಯದೆ, ಯೋಧರಂತೆ ನಾವು ಹೋರಾಡೋಣ, ದೇಶಕ್ಕಾಗಿ ಎದೆ ತಟ್ಟೋಣ.
✍🏻ASPHAK MOHAMMAD
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.