ಜೆದ್ದಾ(ವಿಶ್ವ ಕನ್ನಡಿಗ ನ್ಯೂಸ್): 74 ನೇ ಭಾರತೀಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಇಂಡಿಯಾ ಫ್ರಾಟರ್ನಿಟಿ ಫೋರಮ್ ಜೆದ್ದಾದಲ್ಲಿ ಪ್ಲಾಸ್ಮಾ ದಾನ ಅಭಿಯಾನವನ್ನು ಪ್ರಾರಂಭಿಸಿತು. ಇಂಡಿಯನ್ ಕಾನ್ಸುಲೇಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ, ಆಕ್ಟಿಂಗ್ ಕಾನ್ಸುಲ್ ಜನರಲ್ ವೈ. ಸಬೀರ್ ಅಧಿಕೃತವಾಗಿ ಅಭಿಯಾನವನ್ನು ಉದ್ಘಾಟಿಸಿದರು.
ಕೋವಿಡ್ 19 ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ಚಿಕಿತ್ಸೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಮಾನವೀಯತೆಗೆ ಉತ್ತಮ ಉದಾಹರಣೆಗಳನ್ನು ತೋರಿಸಿರುವ ಈ ದೇಶಕ್ಕೆ ನಾವು ಮಾಡುವ ಪ್ಲಾಸ್ಮಾ ದಾನವು ಅತ್ಯುತ್ತಮ ಕೊಡುಗೆಯಾಗಿದೆ ಎಂದು ಹೇಳಿದರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಈ ಅಭಿಯಾನವನ್ನು ಉದ್ಘಾಟಿಸಲು ಸಾಧ್ಯವಾದುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು.
ಸೌದಿ ಸೊಸೈಟಿ ಆಫ್ ಟ್ರಾನ್ಸ್ಫ್ಯೂಷನ್ ಮೆಡಿಸಿನ್ನ ಅಧ್ಯಕ್ಷೆ ಡಾ.ಸಲ್ವಾ ಹಿಂದಾವಿ ಈ ಸಂದರ್ಭದಲ್ಲಿ ಶುಭ ಕೋರಿದರು. ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಇಂಡಿಯಾ ಫ್ರಾಟರ್ನಿಟಿ ಫೋರಮ್ ನಡೆಸುವ ಸಾಂದರ್ಭಿಕ ರಕ್ತದಾನ ಶಿಬಿರಗಳನ್ನು ಅವರು ಶ್ಲಾಘಿಸಿದರು. ಸ್ವಯಂ ಸೇವಾ ಸಂಘಟನೆಯೊಂದು ಸ್ವಯಂಪ್ರೇರಿತವಾಗಿ ಪ್ಲಾಸ್ಮಾ ದಾನ ಮಾಡುವ ಆಲೋಚನೆಯೊಂದಿಗೆ ಬರುತ್ತಿರುವುದು ಇದೇ ಮೊದಲು ಎಂದು ಅವರು ಹೇಳಿದರು. ಬ್ಲಡ್ ಟ್ರಾನ್ಸ್ಫ್ಯೂಷನ್ ಸೆಂಟರ್ ನ ಸಲಹೆಗಾರ ಡಾ.ನಿಹಾಲ್ ಯಾಕೂಬ್ ಮತ್ತು ಇಂಡಿಯನ್ ಪಿಲ್ಗ್ರಿಮ್ಸ್ ವೆಲ್ಫೇರ್ ಫೋರಮ್ ನ ಅಧ್ಯಕ್ಷ ಅಯೂಬ್ ಹಕೀಮ್ ಅವರು ಸಮಾರಂಭಕ್ಕೆ ಶುಭ ಹಾರೈಸಿದರು. ಇಂಡಿಯಾ ಫ್ರಾಟರ್ನಿಟಿ ಫೋರಮ್ ಇದರ ಪಚ್ಚಿಮ ವಲಯದ ಅಧ್ಯಕ್ಷ ಫಯಾಜುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ಇಕ್ಬಾಲ್ ಚೆಂಬನ್ ಕಾರ್ಯವನ್ನು ನಿರೂಪಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.