ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಎಸ್ ಎಸ್ ಎಫ್ ಬೆಳ್ಳಾರೆ ಶಾಖೆಯ ವಾರ್ಷಿಕ ಮಹಾ ಸಭೆಯು ಡಿ.15 ರಂದು ಶಾಖಾ ಅಧ್ಯಕ್ಷರಾದ ರಾಶಿದ್ ಅಹ್ಸನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಬೆಳ್ಳಾರೆ ಸುನ್ನೀ ಸೆಂಟರ್ ನಲ್ಲಿ ನಡೆಯಿತು.
ಬೆಳ್ಳಾರೆ ಶಾಖಾ ಕಾರ್ಯದರ್ಶಿ ಸಾಬೀತ್ ಬೆಳ್ಳಾರೆ ರವರು ಸ್ವಾಗತಗೈದರು. ಶಾಖಾ ವೀಕ್ಷಕರಾಗಿ ಆಗಮಿಸಿದ ಎಸ್ಎಸ್ಎಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷರಾದ ಮುನೀರ್ ಹನೀಫಿ ಉಸ್ತಾದರು ಸಭೆಯನ್ನು ಔಪಚಾರಿಕವಾಗಿ ಉದ್ಘಾಟಿಸಿ ಸಂಘಟನೆಯ ಮಹತ್ವದ ಕುರಿತು ವಿವರಿಸಿದರು. ಕಾರ್ಯದರ್ಶಿ 2020 ಸಾಲಿನ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಎಸ್ಎಸ್ಎಫ್ ಸುಳ್ಯ ಡಿವಿಷನ್ ಬ್ಲಡ್ ಸೈಭೋ ನಾಯಕರಾದ ಸಿದ್ದೀಕ್ ಗೂನಡ್ಕ ಸಂಘಟನೆಯ ಬಗ್ಗೆ ವಿವರಿಸಿದರು. ನಂತರ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಅಧ್ಯಕ್ಷರು:- ನೌಶಾದ್ ಬೆಳ್ಳಾರೆ ಕಾರ್ಯದರ್ಶಿ:- ನವಾಝ್ ಬೆಳ್ಳಾರೆ ಕೋಶಾಧಿಕಾರಿ:- ಅನ್ಸಾಫ್ ಉಮಿಕ್ಕಳ ಉಪಾಧ್ಯಕ್ಷರು:- ಅಝೀಝ್ ಕುರಿಯಾಜೆ, ಶಾಕಿರ್ ಬೆಳ್ಳಾರೆ
ಕಾರ್ಯದರ್ಶಿಗಳು:- ಇರ್ಷಾದ್ ಬೆಳ್ಳಾರೆ, ಶಮ್ಮಾಸ್ ಪೆರುವಾಜೆ, ಸಾಬಿತ್ ಬೆಳ್ಳಾರೆ, ಝಾಹಿದ್ ಮಾಸ್ತಿಕಟ್ಟೆ, ಅಲ್ಫಾಜ್ ಕೆಎಮ್, ಶಫೀಕ್ ಕೆಎಚ್ ಇವರನ್ನು ಆರಿಸಲಾಯಿತು.
ಸಭೆಯಲ್ಲಿ ಎಸ್ ವೈ ಎಸ್ ಬ್ರಾಂಚ್ ಅಧ್ಯಕ್ಷರಾದ ಸತ್ತಾರ್ ಸಖಾಫಿ ಶುಭ ಹಾರೈಸಿ ದುಆ ಗೈದರು.ಹಾಗೂ ಶಂಸುದ್ದೀನ್ ಝಂಝಂ,ಅಬೂಬಕ್ಕರ್ ಸೆಲೆಕ್ಟ್ ,ಕಲಾಂ ಝುಹ್ರಿ ಬೆಳ್ಳಾರೆ ಉಪಸ್ಥಿತರಿದ್ದರು.
ನೂತನ ಕಾರ್ಯದರ್ಶಿ ನವಾಜ್ ಬೆಳ್ಳಾರೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.