ಬೆಂಗಳೂರು(ವಿಶ್ವ ಕನ್ನಡಿಗ ನ್ಯೂಸ್): ಅನಿವಾಸಿ ಕನ್ನಡಿಗರ ಕಾಳಜಿ ವಹಿಸೋರೂ ಈ ಹಿಂದಿನಿಂದಲೂ ಯಾರೂ ಇರಲಿಲ್ಲ.ಡಾ.ಆರತಿ ಕೃಷ್ಣ ರವರು ಉಪಾಧ್ಯಕ್ಷೆಯಾಗಿದ್ದಾಗ ಕಾರ್ಯಸೂಚಿ ಹಾಗು ಕಾರ್ಯಕ್ರಮಗಳಾಗಿದ್ದು ಬಿಟ್ಟರೆ ಇನ್ನುಳಿದ ನೇಮಕಾತಿಗಳು ಬರೇ ನಾಮಕಾವಸ್ಥೆ.!ಈ ಮೂಲಕವೇ ಸರಕಾರಕ್ಕೆ ಅನಿವಾಸಿಗಳ ಕಷ್ಟ ಸುಖಗಳನ್ನು ಕೇಳಿಕೊಳ್ಳುವ ಇರಾದೆ ಎಷ್ಟಿದೆ ಎನ್ನುವುದನ್ನು ಕಾಣಬಹುದಾಗಿದೆ.
ಅದರಲ್ಲೂ ಕೋವಿಡ್ ಕಾರಣದಿಂದ ವಿದೇಶಗಳಲ್ಲಿ ಅನೇಕ ಯೋಜನೆಗಳು ಸ್ಥಗಿತಗೊಂಡು ಉದ್ಯೋಗ ಕಳೆದುಕೊಂಡವರು,ಕುಟುಂಬದವರೊಡನೆ ಕಾಲ ಕಳೆಯುವ ಆಸೆಯಲ್ಲಿ ಆಗಮಿಸಿ ಇಲ್ಲೇ ಬಾಕಿಯುಳಿದವರು,ರಾಜತಾಂತ್ರಿಕ ಸಮಸ್ಯೆಯಿಂದ ಬಾಕಿಯುಳಿದವರು ಹೀಗೆ ಅನೇಕ ಕಾರಣಗಳಿಂದ ತಾಯ್ನಾಡಲ್ಲಿ ನಿರುದ್ಯೋಗಿಯಾಗಿ ತತ್ವಾರಪಡುವವರಿಗೆ ಸ್ಪಂದಿಸಲು ನಮ್ಮಲ್ಲಿ ಒಂದು ಇಲಾಖೆಯೇ ಇಲ್ಲ.!ಅನಿವಾಸಿಗಳ ಅಹವಾಲಿಗೆ ಕಿವಿಯಾಗುವ ಫಾರಂ ಒಂದು ಇರುವುದು ಕೂಡ ಮಖಾಡೆ ಮಲಗಿದೆ.ವಿಶ್ವ ಕನ್ನಡಿಗ ನ್ಯೂಸ್ ಅನಿವಾಸಿ ಫಾರಂ ನ ಪುನಶ್ಚೇತನಕ್ಕೆ ಅಭಿಯಾನವನ್ನು ನಡೆಸುತ್ತಿದೆ.ನಿಮ್ಮೆಲ್ಲರ ಬೆಂಬಲವನ್ನು ನಾವು ನಿರೀಕ್ಷಿಸುತ್ತಿದ್ದೇವೆ.!
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.