ರಮಳಾನ್ ವಿಶೇಷ(ವಿಶ್ವಕನ್ನಡಿಗ ನ್ಯೂಸ್): ಈ ಜಗತ್ತಿನಲ್ಲಿರುವ ವಸ್ತುಗಳೆಲ್ಲವೂ ಒಂದೇ ರೀತಿಯದ್ದೋ, ಸಮಾನ ಮಹತ್ವದಿಂದ ಕೂಡಿದ್ದೋ ಅಲ್ಲ. ಪ್ರತಿಯೊಂದು ಕೂಡಾ ಅನೇಕ ವಿಧ ವಿಧ ಮಹತ್ವಗಳನ್ನೊಳಗೊಂಡಿವೆ. ದಿನಗಳಾಗಲಿ, ಮಾಸಗಳಾಗಲಿ ಅವುಗಳಿಗೆ ಅದರದ್ದೇ ಆದ ವಿಶೇಷತೆಗಳಿವೆ. ದಿನಗಳ ಪೈಕಿ ಅತ್ಯಂತ ಮಸತ್ವ ಶುಕ್ರವಾರಕ್ಕಾದರೆ ಮಾಸಗಳ ಪೈಕಿ ರಮಳಾನ್ ತಿಂಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ ಗೌರವಿಸಲಾಗಿದೆ. ವರ್ಷಕೊಮ್ಮೆ ಬರುವ ಭಕ್ತಿಯ ವಸಂತ ಮಾಸವೇ ರಮಳಾನ್.
ವೃತ ಇಸ್ಲಾಮಿನ ಪಂಚ ಸ್ಥಂಭಗಳಲ್ಲೊಂದು. ವೃತಾಚರಣೆಯನ್ನು ಹಿಜರಿ ಎರಡನೇ ವರ್ಷದಲ್ಲಿ ಕಡ್ಡಾಯ ಮಾಡಲಾಯಿತು. ಉಪವಾಸವೆಂದರೆ ಬೆಳಗಿನ ಅದ್ಸಾನ್ ಕರೆಗೆ ಮುಂಚಿತವಾಗಿ ಆಹಾರ ಪಾನೀಯಗಳನ್ನು ಸೇವಿಸಿ ಮತ್ತೆ ವೃತಧಾರಿಯು ಮುಸ್ಸಂಜೆಯ ಮಗ್ರಿಬ್ ಅದ್ಸಾನ್ ತನಕ ಅಲ್ಲಾಹನ ತೃಪ್ತಿಗಾಗಿ ಅನ್ನ ಪಾನೀಯಗಳನ್ನು ಸೇವಿಸದೇ ಇರುವುದಾಗಿದೆ. ಇಲ್ಲಿ ಅಲ್ಲಾಹನ ತೃಪ್ತಿ ಹಾಗೂ ಅವನಿರುವ ಇಬಾದತ್ ಆಗಿದೆ ಮುಖ್ಯವಾದದ್ದು. ಇಲ್ಲದಿದ್ದರೆ ನಿಷ್ಫಲ. ಪ್ರವಾದಿ ﷺರವರು ಹೇಳುತ್ತಾರೆ : ಅದೆಷ್ಟೋ ಮಂದಿ ಉಪವಾಸಿಗಳಾಗಿದ್ದು ಅವರಿಗೆ ಉಪವಾಸಗಳಿಂದ ಹಸಿವು ಮತ್ತು ದಾಹದ ಹೊರತು ಬೇರೇನೂ ಪ್ರಾಪ್ತವಾಗುವುದಿಲ್ಲ.
ವೃತಾಚರಣೆ ಅಲ್ಲಾಹನಿಗಾಗಿ ಮಾತ್ರ. ಪ್ರವಾದಿ ﷺರವರು ಹೇಳುತ್ತಾರೆ : ರಮಳಾನ್ ತಿಂಗಳಲ್ಲಿ ವಿಶ್ವಾವಿರುವವನಾಗಿಯೂ ಪ್ರತಿಫಲ ಆಗ್ರಹಿಸಿ ವೃತಾನುಷ್ಠಾನ ಮಾಡಿದರೆ ಕಳೆದು ಹೋದ ತಪ್ಪುಗಳೆಲ್ಲವೂ ಮನ್ನಿಸಲ್ಪಡುತ್ತದೆ. ಅಲ್ಲಾಹನು ಪರಿಶುದ್ಧ ಖುರ್’ಆನ್ ನಲ್ಲಿ ಹೇಳಿದ್ದಾನೆ شَهْرُ رَمَضَانَ الَّذِي أُنْزِلَ فِيهِ الْقُرْآنُ هُدًى لِلنَّاسِ وَبَيِّنَاتٍ مِنَ الْهُدَىٰ وَالْفُرْقَانِ ۚ فَمَنْ شَهِدَ مِنْكُمُ الشَّهْرَ فَلْيَصُمْهُ ಮಾನವರಿಗೆ ಸನ್ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ ಖುರ್ಯ’ಆನ್ ಅವತೀರ್ಣಗೊಂಡ ತಿಂಗಳು ರಮಳಾನ್ ಆಗಿರುತ್ತದೆ. ಆದುದರಿಂದ ನಿಮ್ಮಲ್ಲಿ ಯಾರಾದರು ಆ ತಿಂಗಳಲ್ಲಿ ಸಾಕ್ಷಿಯಾಗುವುದೋ ಅವರು ಆ ದಿನದಲ್ಲಿ ವೃತ ಕೈಗೊಳ್ಳಲಿ.
ರಮಳಾನ್ ತಿಂಗಳು ಬಂದಾಗಲಂತೂ ಶೈತಾನ್ ಬಹಳ ಚುರುಕಾಗಿ ಬಿಡುತ್ತಾನೆ. ಆತ ಭಾರೀ ಸಿದ್ಧತೆಯೊಂದಿಗೆ ಬಿರುಸಿನ ಚಟುವಟಿಕೆ ಆರಂಭಿಸುತ್ತಾನೆ. ಆತನು ಉಪವಾಸಿಗರ ಮೇಲೆ ಎಂತಹ ಯೋಜನಾ ಬದ್ಧ ತಯಾರಿ ನಡೆಸುತ್ತಾನೆ ಎಂದರೆ, ಆ ಅಕ್ರಮಣಗಳನ್ನು ಎದುರಿಸಲು ಉಪವಾಸಿಗರು ಸಾಕಷ್ಟು ತಯಾರಿ ನಡೆಸದಿದ್ದರೆ ಮತ್ತು ಎಚ್ಚರ ವಹಿಸದಿದ್ದರೆ ಅವರ ಉಪವಾಸದಿಂದ ಹಸಿವು ದಾಹಗಳ ಹೊರತು ಬೆರೇನು ಸಿಗುವುದಿಲ್ಲ. ಎಲ್ಲಾ ಉಪವಾಸಗಳನ್ನೂ ಆಚರಿಸಿದ ಬಳಿಕವೂ ಅಂತಹವರ ಜೀವನದಲ್ಲಿ ಉಪವಾಸದ ಯಾವುದೇ ಪರಿಣಾಮ ಗೋಚರಿಸುವುದಿಲ್ಲ.
ನಾಲಗೆಯು ಯಾವ ರೀತಿಯಲ್ಲೂ ದುರುಪಯೋಗಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಮಾತುಕತೆಗಳ ಮಧ್ಯೆ ಹಳೆಯ ಅಭ್ಯಾಸದಿಂದಾಗಿ ನಾಲಗೆಯಿಂದ ಕೆಟ್ಟ ಮಾತೇನಾದರು ಹೊರಟು ಈ ತಪ್ಪು ಗಮನಕ್ಕೆ ಬಂದೊಡನೆ ಅಲ್ಲಾಹನೊಂದಿಗೆ ಕ್ಷಮೆ ಯಾಚಿಸಬೇಕು ಮತ್ತು ಮಾತುಕತೆಗಳನ್ನು ನಿಲ್ಲಿಸಿ ಅಲ್ಲಾಹನ ದ್ಸಿಕ್ರ್ ಗಳಲ್ಲಿ ತೊಡಗಬೇಕು. ಅಲ್ಲಾಹನು ಹೇಳುತ್ತಾನೆ. يَا أَيُّهَا الَّذِينَ آمَنُوا كُتِبَ عَلَيْكُمُ الصِّيَامُ كَمَا كُتِبَ عَلَى الَّذِينَ مِنْ قَبْلِكُمْ لَعَلَّكُمْ تَتَّقُونَ. ಓ ಸತ್ಯ ವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದಂತೆಯೇ ನಿಮ್ಮ ಮೇಲೂ ಉಪವಾಸ ವೃತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣ ವಿಶೇಷವಾಗಿ ಉಂಟಾಗುವುದೆಂದು ಆಶಿಸಲಾಗಿದೆ. ಅಲ್ಲಾಹನು ಈ ರಮಳಾನ್ ಅನುಕೂಲವಾಗಿ ಸಾಕ್ಷಿ ನಿಲ್ಲುವವರ ಸಾಲಿನಲ್ಲಿ ನಮ್ಮೆಲ್ಲರನ್ನೂ ಸೇರಿಸಿ ಅನುಗ್ರಹಿಸಲಿ, ಆಮೀನ್.
ರಮಳಾನ್ ಪ್ರಥಮ ಹತ್ತರಲ್ಲಿ :
اَللَّهُمَّ ارْحَمْنِي يَاأَرْحَمَ الرَّاحِمِينَ۞
ದ್ವಿತೀಯ ಹತ್ತರಲ್ಲಿ: اَللَّهُمَّ اغْفِرْلِى ذُنُوبِي يَارَبَّ الْعَالَمِينَ۞
ಕೊನೆಯ ಹತ್ತರಲ್ಲಿ: اَللَّهُمَّ أَعْتِقْنِي مِنَ النَّارِ وَأَدْخِلْنِي الْجَنَّةَ يَا رَبَّ الْعَالَمِينََ۞ اَللَّهُمَّ اِنَّكَ عَفُوٌّ تُحِبُ الْعَفْوَ فَاعْفُ عَنِّيَ۞
DARUNNAJATH HADIYA SHAREE’ATH COLLEGE Nellihudhikeri 571253 Kodagu
✍️ಫಸೀಲಾ ಸಿರಾಜ್ (ವಿದ್ಯಾರ್ಥಿನಿ, ದಾರುನ್ನಜಾತ್ ಹಾದಿಯಾ ನೆಲ್ಲಿಹುದಿಕೇರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.