www.vknews.com : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬಿರುವ ಕೋವಿಡ್-19 ವೈರಸ್’ನಿಂದಾಗಿ ಬಳಲುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬದ ಪರವಾಗಿ ಕೊರೋನ ವಾರಿಯರ್ಸ್ ಆಗಿ ಕಳೆದ ಎರಡೂವರೆ ತಿಂಗಳಿಂದ ಹಗಲಿರುಲೆನ್ನದೆ ನಿರಂತರವಾಗಿ ಕಾರ್ಯಪ್ರವರ್ತರಾಗಿರುವ ಕಾಂಗ್ರೆಸ್ ಯುವ ನಾಯಕ ಸುಹೈಲ್ ಕಂದಕ್ ಬಂಧನ ನಾಚಿಕೆಗೇಡು ಹಾಗೂ ತೀರಾ ರಾಜಕೀಯ ಪ್ರೇರಿತವೆಂದು ಜೆಡಿಎಸ್ ನಾಯಕ ರಿಯಾಝ್ ಹೆಚ್. ಕಾರ್ನಾಡ್ ಕೆಂಡಕಾರಿದ್ದಾರೆ.
ಮಂಗಳೂರಿನ ಅಷ್ಪತ್ರೆಯಲ್ಲಿ ಕೋವಿಡ್-19 ವೈರಸ್ ನಿಂದ ಬಳಲುತ್ತಿರುವ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೋಗಿಗಳಿಗೆ ತನ್ನ ತಂಡದ ಸದಸ್ಯರೊಂದಿಗೆ ಸೇರಿಕೊಂಡು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುತ್ತಾ, ಜಾತಿ-ಮತ-ಭೇದವಿಲ್ಲದೆ ಮರಣ ಹೊಂದಿದ ಕೋವಿಡ್ ರೋಗಿಗಳ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಡುತ್ತಾ ಹಾಗೂ ಅಷ್ಪತ್ರೆಗಳು ಕೋವಿಡ್-19 ರೋಗಿಗಳಿಗೆ ಮಾಡುವ ದುಬಾರಿ ಶುಲ್ಕವನ್ನು ವಿರೋಧಿಸಿ ಅದರ ವಿರುದ್ದ ಪ್ರತಿಭಟಿಸುತ್ತಿದ್ದ ಸುಹೈಲ್ ಕಂದಕ್ ರವರ ಸೇವೆ ಪ್ರಶಂಸನೀಯವಾಗಿದೆ. ತನ್ನ ಸೇವೆಯ ಮೂಲಕ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಆಶಾಕಿರಣವಾಗಿ ಹೊರಹೊಮ್ಮಿದ್ದರು, ಮಾತ್ರವಲ್ಲದೆ ಆ ಮೂಲಕ ಜನರೆಡೆಗೆ ಆಕರ್ಷಿಸಿತರಾಗತೊಡಗಿದರು. ಅಂಥವರನ್ನು ಅಷ್ಪತ್ರೆಯ ಹಾಕಿದ ದುಬಾರಿ ಬಿಲ್ಲಿನ ಬಗ್ಗೆ ವಿಚಾರಿಸಿದ್ದೆ ಮಹಾಪಾರಾದ ಎಂಬಂತೆ ಬಿಂಬಿಸಿ ಬಂಧಿಸಿರುವುದು ಅಮಾನವೀಯವೆಂದು ಕಾರ್ನಾಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ, ಹಾಗೂ ಸುಹೈಲ್ ಕಂದಕ್ ರವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಅಗ್ರಹಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.