ಮಂಜೇಶ್ವರ(ವಿಶ್ವಕನ್ನಡಿಗ ನ್ಯೂಸ್): ವಿಧಾನಸಭಾ ಚುನಾವಣೆ ಫಲವನ್ನು ಬುಡಮೇಲುಗೊಳಿಸಲು ಬಿಜೆಪಿಯು ರಾಜ್ಯದಲ್ಲಿ ಕೋಟಿಗಟ್ಟಲೆ ಕಪ್ಪುಹಣದ ವ್ಯವಹಾರ ನಡೆಸಿದ್ದಾರೆಂಬ ಪ್ರಕರಣದಲ್ಲಿ ಮಂಜೇಶ್ವರದ ಬಿಎಸ್ಪಿ ಅಭ್ಯರ್ಥಿಯ ಹೇಳಿಕೆಯಲ್ಲಿ ಸಮಗ್ರ ತನಿಖೆ ನಡೆಸಬೇಕು.
ಬಿಎಸ್ಪಿ ಅಭ್ಯರ್ಥಿ ಚುನಾವಣಾ ಕಣದಿಂದ ಹಿಂದೆ ಸರಿಯಲು 2.5 ಲಕ್ಷ ಹಾಗೂ ಬೆಲೆ ಬಾಳುವ ಮೊಬೈಲ್ ಫೋನ್ ನೀಡಿದ್ದರು.ಬಿಜೆಪಿಯ ಸುರೇಂದ್ರನ್ ಗೆಲ್ಲುವುದಾದರೆ ಮಂಗಳೂರಿನಲ್ಲಿ ವೈನ್ ಪಾರ್ಲರ್ ಮಾಡಿಕೊಡುವ ಭರವಸೆಯನ್ನೂ ನೀಡಲಾಗಿತ್ತು.
ಚುನಾವಣಾ ಕಣದಿಂದ ಹಿಂದೆ ಸರಿಯಲು ಬಿಜೆಪಿ ನಾಯಕರು ಒತ್ತಡ ಹಾಕಿದರೆಂದೂ ಬಿಜೆಪಿ ಮಂಜೇಶ್ವರ ಕ್ಷೇತ್ರದ ನಾಯಕರಾಗಿದ್ದಾರೆ ಹಣ ನೀಡಿದವರು ಎಂದೂ ರಹಸ್ಯ ಬಹಿರಂಗ ಪಡಿಸಿದ ಹಿನ್ನಲೆಯಲ್ಲಿ ಅಭ್ಯರ್ಥಿ ಸುರೇಂದ್ರನ್, ಮಂಡಲದ ಅಧ್ಯಕ್ಷ ಸೇರಿದಂತೆ ಉಳಿದ ಮುಖಂಡರನ್ನು ಪ್ರಕರಣದ ತನಿಖೆಯಲ್ಲಿ ಒಳಪಡಿಸಬೇಕೆಂದೂ ಕರ್ನಾಟಕದ ಆರ್ ಎಸ್ ಎಸ್ ನಾಯಕರು ನಡೆಸಿದ ಹಣ ವ್ಯವಹಾರದ ಭಾಗೀದಾರಿಕೆಯಲ್ಲಿ ಪ್ರಾದೇಶಿಕ ನಾಯಕರುಗಳ ದೂರವಾಣಿ ಕರೆಗಳ ತುಣುಕುಗಳನ್ನು ತನಿಖೆಯ ಪರಿಧಿಗೆ ಒಳಪಡಿಸಬೇಕೆಂದೂ ಎಸ್ಡಿಪಿಐ ಮಂಡಲ ಅಧ್ಯಕ್ಷ ಅನ್ಸಾರ್ ಹೊಸಂಗಡಿ , ಪ್ರಧಾನ ಕಾರ್ಯದರ್ಶಿ ಮುಬಾರಕ್ ಕಡಂಬಾರ್ ಮುಂತಾದವರು ಆಗ್ರಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.