(ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯದ) ವತಿಯಿಂದ ಅನೇಕಲ್ ತಾಲ್ಲೂಕಿನಲ್ಲಿ ಕರೋನಾ ಮಹಾಮಾರಿ ಲಾಕ್ ಡೌನ್ ಪರಿಣಾಮದಿಂದಾಗಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಈ ಉತ್ತಮ ಕಾರ್ಯ ಮಾಡುತ್ತಿರುವ ಕರವೇ ಅನೇಕಲ್ ಪ್ರಚಾರ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ವಿಶ್ವನಾಥ್ ರವರು ಮಾತನಾಡುತ್ತಾ “ಕರವೇ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್ ಅಣ್ಣ ರವರ ಪ್ರೇರಣೆಯೋಂದಿಗೆ , ಕಡು ಬಡ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೇರವಾಗಿ ಮನೆಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೀವಿ, ಕಾರಣ ಕರವೇ ಕನ್ನಡ ನಾಡು ನುಡಿಯ ಸಂರಕ್ಷಣೆಯ ಜೊತೆಗೆ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯವನ್ನು ಇಂದು ನಮ್ಮ ಕರವೇ ಪದಾಧಿಕಾರಿಗಳ ಸಹಕಾರದಿಂದ ಕುಟುಂಬಗಳಿಗೆ ನೇರ ದಿನಸಿ ಕಿಟ್ ವಿತರಿಸಿ ಅವರಿಗೆ ಶುಭ ಹಾರೈಸಿದ್ದೀವಿ” ಎಂದರು.
ಇದೆ ಸಂಧರ್ಭದಲ್ಲಿ ಕರವೇ ತಾಲ್ಲೂಕು ಕಾರ್ಯಾಧ್ಯಕ್ಷರಾದ ಬಾಲು, ಹಾಗು ವಿಶ್ವ, ಶಶಿ ಹಾಗೂ ಅನೇಕಲ್ ಕರವೇ ಮುಖಂಡರು ಭಾಗಿಯಾಗಿದ್ದರು
ನಮ್ಮ ಮೂಲ ಉದ್ದೇಶ ಒಂದೇ… ಪ್ರಚಾರದ ಉದ್ದೇಶ ನಮ್ಮದಲ್ಲ , ನಾವು ಮಾಡೋ ಕೆಲಸ ನೋಡಿ ಹತ್ತು ಜನ ಪ್ರೇರಣೆಗೊಂಡು ಬಡವರಿಗೆ ಸಹಾಯ ಮಾಡಲಿ ಹಾಗೂ ಸಹಾಯ ಮಾಡಿದವರಿಗೆ ಇನ್ನು ಹೆಚ್ಚು ಸಹಾಯ ಮಾಡುವ ಮನಸ್ಸಾಗಲಿ ಮತ್ತು ಇನ್ನು ಹೆಚ್ಚು ಜನ ಸಹಾಯ ಮಾಡಲು ಮುಂದೆ ಬರಲಿ ಎಂಬುದೇ ನಮ್ಮ ಆಶಯ .
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.