ಲಂಡನ್ (www.vknews.com) : ಸಾಗರೋತ್ತರ ಕನ್ನಡಿಗರು, ಜಾಗತಿಕ ಪರಿಸರ ದಿನದ ಅಂಗವಾಗಿ, ಕನ್ನಡ ನಾಡಿನ ಮೇರು ವ್ಯಕ್ತಿತ್ವ, ಹಿರಿಯ ಪರಿಸರವಾದಿ ನಮ್ಮೆಲ್ಲರ ಹೆಮ್ಮೆಯ ಪದ್ಮಶ್ರೀ ಪುರುಸ್ಕೃತ ಸಾಲುಮರದ ತಿಮ್ಮಕ್ಕ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಕಾರ್ಯಕ್ರಮದ ಕೇಂದ್ರಬಿಂದು ಸಾಲುಮರದ ತಿಮ್ಮಕ್ಕ ಸಾಗರೋತ್ತರ ಕನ್ನಡಿಗರನ್ನ ಉದ್ದೇಶಿಸಿ ಮಾತನಾಡುತ್ತ, ತಮ್ಮ ಮಹಾನ್ ಕಾರ್ಯದ ಬಗ್ಗೆ ತಮ್ಮ ನೆನಪಿನಾಳದಿಂದ, ನೆನಹೂವಿನ ಬುತ್ತಿ ಬಿಚ್ಚಿ ನಮಗೆಲ್ಲ “ಪ್ರೇರಣೆಯ” ಊಟ ಉಣಬಡಿಸಿದರು. ತಾವು ತಮ್ಮ ಪತಿ ಮಾಡಿದ ಶ್ರಮವನ್ನ ಎಳೆ ಎಳೆಯಾಗಿ ವಿವರಿಸುತ್ತಾ, ತಾವು ಬೆಳೆದ ಮರಗಳು “ಆನಂದವಾಗಿದ್ದವೇ ಅನ್ನುವ ಮಾತು ಹೇಳಿದಾಗ ನೆರೆದ ಸಾಗರೋತ್ತರ ಕನ್ನಡಿಗರು ಭಾವುಕರಾದರು.
ಸಾಲುಮರದ ತಿಮ್ಮಕ್ಕ, ಮುಂದುವರೆದು ಎಲ್ಲ ಭಾಗವಹಿಸಿದ ಸಾಗರೋತ್ತರ ಕನ್ನಡಿಗರ ಜೊತೆ ಮಾತನಾಡುತ್ತ, ತಾಯಿಯ ಹಾಗೆ ಮನದುಂಬಿ ಹಾರೈಸಿ “ಸತಿ ಪತಿಗಳೊಂದಾಗಿ, ಮಕ್ಕಳ್ಳಿಗೆ ಎಸ್ಕೊಲ್ಲ್ಗೆ ಕಳಿಸಿ, ದೇಶಕ್ಕ ಒಳ್ಳೆದ ಮಾಡರಿ, ನಿಮಗ ಎಲ್ಲ ಭಾಗ್ಯ ಸಿಗಲಿ ಅಂತ ಪಾರ್ವತಿ ಪರಮೇಶ್ವರನಲ್ಲಿ ಬೇಡಿಕೊಳ್ಳುತ್ತೇನೆ” ಎಂದರು.
ನನಗೆ ಅನೇಕ ಪ್ರಶಸ್ತಿಗಳು ಪುರಸ್ಕಾರಗಳು ಸಿಕ್ಕಿವೆ, ಅವುಗಳನ್ನು ಇಡಲು ಜಾಗ ಇಲ್ಲ ಸಾಗರೋತ್ತರ ಕನ್ನಡಿಗರೆಲ್ಲಾ ಸೇರಿ ಒಂದು ಮ್ಯೂಸೀಯಮ್ ಕಟ್ಟಸರಿ ಅಂದರು, ನೆರೆದ ಅನೇಕ ಜನ ಸಹಮತ ವ್ಯಕ್ತ ಪಡಿಸಿದರು, ಸಾಗರೋತ್ತರ ಕನ್ನಡಿಗರ ಸಂಘದ ಜಂಟಿ ಕಾರ್ಯದರ್ಶಿ ರವಿ ಮಹಾದೇವ ಅವರು ನಮ್ಮ ಸಂಘದಲ್ಲಿ ಚರ್ಚಿಸಿ ಪೂರಕವಾದ ಕೆಲಸ ಮಾಡಲು ಪ್ರಯತ್ನ ಮಾಡುತ್ತೇವೆ ಅಂತ ಹೇಳಿದರು.
ಹಾಗೆಯೇ, ಸಾಗರೋತ್ತರ ಕನ್ನಡಿಗರು ಸಂಘ ಪರಿಸರ ಪರ ಕೆಲಸ ಮಾಡಿದ ಯುವ ಪರಿಸರವಾದಿ ವಿನೋದ ಕರ್ತವ್ಯ ಅವರಿಗೆ ಪ್ರಶಸ್ತಿ ಪತ್ರ ಮಾಡಿ ಸನ್ಮಾನಿಸಿ, ಯುವಕರು ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು ಅಂತ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮಕ್ಕೆ, ಮುಖ್ಯ ಅಥಿತಿಗಳಾಗಿ ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ನಿರ್ದೇಶಕರಾದ ಡಾ ಎಸ್ ಗೌರಿ ಶಂಕರ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು, ಅವರು ಸಾಲುಮರದ ತಿಮ್ಮಕ್ಕನವರ ಸಾಧನೆಯ ಬಗ್ಗೆ ಮಾತನಾಡುತ್ತ, ಅವರ ಕಾಯಕ ನನಗೆ ಚಿರಪರಿಚಿತ, ಇಂತಹ ಅಮ್ಮನ ಉಪಸ್ಥಿತಿಯಲ್ಲಿ ನಾನು ಭಾಗವಹಿಸಿದ್ದು ನನ್ನ ಭ್ಯಾಗ್ಯ ಮತ್ತು ಅವರಲ್ಲಿ ನನ್ನ ಅಮ್ಮನನ್ನು ಕಾಣುತ್ತಿದ್ದೇನೆ ಅಂತ ಹೇಳಿದರು.
ಅನೇಕ ದೇಶಗಳಲ್ಲಿ ವಾಸವಿರುವ ಸಾಗರೋತ್ತರ ಕನ್ನಡಿಗರು, ಸಂವಾದದಲ್ಲಿ ಭಾಗವಹಿಸಿ ಡಾ ಎಸ್ ಗೌರಿ ಶಂಕರ ಅವರಲ್ಲಿ ತಮಗಿರುವ ಪರಿಸರ ಕಾಳಜಿ, ಸರಕಾರದ ನೀತಿಗಳು, ಮತ್ತು ಸಲಹೆಗಳನ್ನ ಮುಕ್ತವಾಗಿ ಹಂಚಿಕೊಂಡರು. ಹಾಗೆಯೇ, ಸಾಗರೋತ್ತರ ಕನ್ನಡಿಗರು ಸಂಘದ ಕಾರ್ಯಕ್ರಮಗಳ ಬಗ್ಗೆ ಮುಕ್ತ ಕಂಠದಿಂದ ಶ್ಲ್ಯಾಘಿಸಿ ಇನ್ನಷ್ಟು ಜನ ಭಾಗವಹಿಸಿಬೇಕು, ಇಂತಹ ಜನ ಪರ ವಿಚಾರಗಳು ಹೆಚ್ಚು ಹೆಚ್ಚು ಜನರಿಗೆ ಮುಟ್ಟಿಸಬೇಕು, ನಾಗರಿಕ ಪ್ರಜ್ಞೆ ಬೆಳಿಸಬೇಕು ಅನ್ನುವ ಮಾತು ಒಕ್ಕೋರಿಲಿಂದ ವ್ಯಕಪಡಿಸಿದರು.
ಕಾರ್ಯಕ್ರಮದ ರೂವಾರಿ ರವಿ ಮಹಾದೇವ, ಜಂಟಿ ಕಾರ್ಯದರ್ಶಿ ಸಾಗರೋತ್ತರ ಕನ್ನಡಿಗರು, ಅವರು ಸಾಲುಮರದ ತಿಮ್ಮಕ್ಕನವರ ಮಾನಸಪುತ್ರ ಉಮೇಶ ಅವರ ಸಹಯಾದ ಬಗ್ಗೆ ಕೊಂಡಾಡಿದರು, ಅವರೇ ಈ ಕಾರ್ಯಕ್ರಮವನ್ನ ನಿರೂಪಿಸಿ ಅವರ ಸ್ನೇಹಿತ ದೊರೆಸ್ವಾಮಿ ಸಿದ್ಧಿಗೌಡ ರಚಿತ ಕವನ ಸಾಲುಮರದ ತಿಮ್ಮಕ್ಕ ಅತ್ಯಂತ ಸುಲಲಿತವಾಗಿ ಓದಿ ನುಡಿ ನಮನ ಅರ್ಪಿಸಿದರು.
ಬಸವ ಪಾಟೀಲ್, ಖಜಾಂಚಿ ಸಾಗರೋತ್ತರ ಕನ್ನಡಿಗರು, ಪ್ರಸ್ತವಾವಿಕ ಮಾತನಾಡುತ್ತ ಕನ್ನಡನಾಡಿನ ಐತಿಹಾಸಿಕ ಪರಿಸರ ಕ್ರಾಂತಿ ಮಾಡಿದ ತಿಮಕ್ಕನ ಜೀವನ ಜಗತ್ತಿಗೆ ಮಾದರಿ, ಅಕ್ಷರ ಕಲಿಯದ ಅಕ್ಕ ಪರಿಸರವನ್ನು ಕಾಪಾಡಿದ ವಿಶ್ವ ವಿದ್ಯಾಲಯ, ನಾವೆಲ್ಲಾ ವಿದ್ಯಾರ್ಥಿಗಳಾಗಿ ಅವಳ ಮನದ ದನಿಗೆ ಕಿವಿಯಾಗೋಣ ಅಂತ ನಿವೇದನೆ ಮಾಡಿಕೊಂಡರು ಹಾಗೆಯೇ ಕೊನೆಗೆ ವಂದನಾರ್ಪಣೆ ಸಲ್ಲಿಸಿದರು.
ಗೋಪಾಲ ಕುಲಕರ್ಣಿ, ಉಪಾಧ್ಯಕ್ಷರು ಸಾಗರೋತ್ತರ ಕನ್ನಡಿಗರು, ಅವರು ಪ್ರಶಸ್ತಿ ಪುರಸ್ಕೃತ ವಿನೋದ ಕರ್ತವ್ಯ ಅವರ ಬಗ್ಗೆ ವಿಸ್ತೃತ ಪರಿಚಯ ಮಾಡಿ ಪ್ರಶಸ್ಥಿ ಪ್ರಧಾನ ಕಾರ್ಯಕ್ರಮ ನಡಿಸಿಕೊಟ್ಟರು.
ಚಂದ್ರಶೇಖರ್ ಲಿಂಗದಳ್ಳಿ ಅಧ್ಯಕ್ಷರು ಸಾಗರೋತ್ತರ ಕನ್ನಡಿಗರು, ಅಥಿತಿ ಡಾ ಎಸ್ ಗೌರಿಶಂಕರ್ ಅವರನ್ನು ಆಮಂತ್ರಿಸಿ ಸಂವಾದಕ್ಕೆ ಅಘಾದವಾದ ಮೌಲ್ಯ ತುಂಬಿದರು.
ಹೇಮೇಗೌಡ ಮಧು, ಸಂಘಟನಾ ಕಾರ್ಯದರ್ಶಿ ಸಾಗರೋತ್ತರ ಕನ್ನಡಿಗರು ಅವರು ಅನೇಕ ದೇಶಗಳಲ್ಲಿ ವಾಸವಿರುವ ಸಾಗರೋತ್ತರ ಕನ್ನಡಿಗರನ್ನ ಆಮಂತ್ರಿಸಿದರು.
ಹೀಗೆ ಸುಮಾರು ಮೂರು ತಾಸು ನಡೆದ ಕಾರ್ಯಕ್ರಮ ಹಿರಿಯ ಪರಿಸರವಾದಿ ನಮ್ಮೆಲ್ಲರ ಹೆಮ್ಮೆಯ ಪದ್ಮಶ್ರೀ ಪುರುಸ್ಕೃತ ಸಾಲುಮರದ ತಿಮ್ಮಕ್ಕ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆದಿದ್ದು ನಮ್ಗೆಲ್ಲಾ ಒಂದು ಪ್ರೇರಣೆ, ಉತ್ಸಾಹ ಮತ್ತು ಪರಿಸರ ಪ್ರಜ್ಞೆಗೆ ಸಾಕ್ಷಿ ಆಯಿತು. .
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.