ನೆಲ್ಲಿಯಹುದಿಕೇರಿ(www.vknews.com): ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಸ್ಥಾಪನಾ ದಿನದ ಅಂಗವಾಗಿ SKSSF ನೆಲ್ಲಿಯಹುದಿಕೇರಿ ಶಾಖೆಯ ವತಿಯಿಂದ ಆನ್ಲೈನ್ ಮೂಲಕ ಕಾರ್ಯಕ್ರಮ ನಡೆಯಿತು.
ಅಗಲಿದ ಸಮಸ್ತ ನೇತಾರರ ಅನುಸ್ಮರಣೆಯನ್ನು ಇರ್ಷಾದ್ ಹುದವಿ ಮಲೇಷಿಯಾ ಹಾಗೂ ಸಮಸ್ತ ನಡೆದು ಬಂದ ಹಾದಿಯ ಬಗ್ಗೆ SKSSF ಕೊಡಗು ಜಿಲ್ಲಾಧ್ಯಕ್ಷರಾದ ತಮ್ಲೀಕ್ ದಾರಿಮಿ ವಿವರಿಸಿದರು. ಸ್ಥಳೀಯ ಜಮಾಅತ್ ಖತೀಬರಾದ ಹಾರಿಸ್ ರಹ್ಮಾನಿ ಕೋಲ್ಪೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ SKSSF ಜಿಸಿಸಿ ಕೊಡಗು ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್, ಜಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಶಫೀಕ್ ನೆಲ್ಲಿಯಹುದಿಕೇರಿ ಹಾಗೂ ಶಾಖೆಯ ಹಲವು ನಾಯಕರುಗಳು, ಸದಸ್ಯರು ಭಾಗವಹಿಸಿದ್ದರು.
ಖಿರಾಅತ್ ಸಹದ್ ಪಠಿಸಿದರು. SKSSF ನೆಲ್ಲಿಯಹುದಿಕೇರಿ ಶಾಖೆಯ ಕಾರ್ಯದರ್ಶಿ ಶಂಸುದ್ದೀನ್ ಸ್ವಾಗತಿಸಿ, ಶಾಖಾ ಕೋಶಾಧಿಕಾರಿ ಶಂಸು ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.