ಕಾಪು (www.vknews.com) : ಒಂದು ಕಡೆ ಕೊರೋನ ಪಿಡುಗು ಮತ್ತೊಂದು ಕಡೆ ಅಗತ್ಯ ವಸ್ತುಗಳಾದ ಡೀಸೆಲ್ , ಪೆಟ್ರೋಲ್ , ಗ್ಯಾಸ್ , ವಿದ್ಯುತ್ ಹಾಗೂ ಇನ್ನಿತರ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೆ ಏರಿ, ಜನರು ಜೀವನ ಸಾಗಿಸುವುದು ದುಸ್ತರವಾಗಿದೆ.
2014 ರಲ್ಲಿ ಅಚ್ಚೇ ದಿನ್ ಗಳ ಕನಸನ್ನು ಬಿತ್ತಿ ಅಧಿಕಾರಕ್ಕೆ ಬಂದ ಸರಕಾರ ಇಂದು ಈ ರೀತಿ ಜನರನ್ನು ದೋಚುವುದು ಸರಿಯಲ್ಲ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ ಮಾಜಿ ರಾಜ್ಯ ಕಾರ್ಯದರ್ಶಿ ಅನ್ವರ್ ಅಲಿ ಯವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯಧ್ಯಾಂತ ಪಕ್ಷವು ಹಮ್ಮಿಕೊಂಡ ಕಾರ್ಯಕ್ರಮದ ಪ್ರಕಾರ ಕಾಪು ಹೃದಯ ಭಾಗದಲ್ಲಿ ಪಕ್ಷದ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ ಸಂದರ್ಭದಲ್ಲಿ ಅವರು ಮಾತಾಡಿದರು. 2014 ರ ದಿನಗಳು ಕೆಟ್ಟ ದಿನಗಳು , ಈಗಿನ ದಿನಗಳು ಅಚ್ಚೇ ದಿನ್ ಗಳು ಎಂದು ಈಗಿನ ಆಡಳಿತ ಪಕ್ಷವು ತಿಳಿದಿದ್ದರೆ ನಮಗೆ ಅಂದಿನ ಕೆಟ್ಟ ದಿನಗಳೇ ಇರಲಿ ಎಂದು ಸರಕಾರದ ಮುಂದೆ ಬೇಡಿಕೆ ಇಟ್ಟರು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರು ಅಬ್ದುಲ್ ಅಜೀಜ್ ಉದ್ಯಾವರ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾರುಖ್ ತೀರ್ಥಹಳ್ಳಿ , ರಾಜ್ಯ ಮಾಜಿ ಕಾರ್ಯದರ್ಶಿ ರಿಯಾಜ್ ಕುಕ್ಕಿಕಟ್ಟೆ , ಅಬ್ದುರ್ರಹಮಾನ್ ಉದ್ಯಾವರ , ಮುಹಮ್ಮದ್ ಇಕ್ಬಾಲ್ ಮಜೂರ್ , ಮುಹಮ್ಮದ್ ಅಲಿ ಕಾಪು , ಫಾರಿಸ್ , ಆರೀಫ್ , ಸಾಹಿಲ್ , ಅಬ್ದುಲ್ ಸತ್ತಾರ್ ಅಬ್ದುಲ್ ಅಹದ್, ಮುಹಮ್ಮದ್ ಅವೇಜ್ ಉಪಸ್ಥಿತರಿದ್ದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.