ಲಕ್ಕೂರು (ವಿಶ್ವ ಕನ್ನಡಿಗ ನ್ಯೂಸ್): ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಎಚ್.ಹೊಸಕೋಟೆ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ನಾಗರಾಜ್ ಹಾಗೂ ಸದಸ್ಯರು, ಪುರ ಗ್ರಾಮಸ್ಥರ ಸಹಕಾರದಲ್ಲಿ ಇಂದು ಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಮುಂಭಾಗದಲ್ಲಿ ಆಹಾರದ ದಿನಸಿ ಕಿಟ್, ಮಾಸ್ಕ್, ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಹುಲಿಮಂಗಲ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ನಾಗರಾಜ್ ರವರು ಚಾಲನೆ ನೀಡಿ ಮಾತನಾಡಿ “ವಿಶ್ವದ್ಯಾಂತ ಆವರಿಸಿರುವ ಮಹಾಮಾರಿ ಕೊರೋನಾದಿಂದ ಗ್ರಾಮೀಣ ಪ್ರದೇಶದಲ್ಲಿನ ರೈತರು, ಹೂ ಕಟ್ಟುವ ವ್ಯಾಪಾರಿಗಳು, ಹಾಗೂ ಬಡವರು ಇಂದು ಬಹಳ ಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಹಾಲು ಉತ್ಪಾದಕರ ಸಹಕಾರ ಸಂಘದ ಸಹಕಾರದಲ್ಲಿ ಇಂದು 400-500 ಆಹಾರದ ದಿನಸಿ ಕಿಟ್ ವಿತರಿಸಿ ಅವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ, ಇದಕ್ಕೆ ಎಲ್ಲಾರೂ ಸಹಕರಿಸಿ” ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾದ ನಾರಾಯಣಸ್ವಾಮಿ ರವರು ಮಾತನಾಡುತ್ತಾ”ಕಷ್ಟಕಾಲದ ಸಂದರ್ಭದಲ್ಲಿ ಜೀವನ ನಿರ್ವಹಣೆ ಇಂದು ತತ್ತರಿಸಿದೆ. ಪ್ರತಿಯೋಬ್ಬ ಜನಪ್ರತಿನಿಧಿಗಳು ಕೇವಲ ಆಡಂಬರದ ಪ್ರಚಾರ ಮಾಡುವುದನ್ನು ಬಿಟ್ಟು ಕರೋನಾ ವೈರಸ್ ನಿಂದ ತತ್ತರಿಸುವ ಬಡ ಕುಟುಂಬಗಳಿಗೆ ಸಹಾಯಹಸ್ತ ಚಾಚಿ ಅವರ ಕಷ್ಟದಲ್ಲಿ ಭಾಗಿಯಾಗುವ ಕೆಲಸ ಮಾಡಬೇಕು, ಪ್ರತಿಯೊಬ್ಬರೂ ಸಹ ನಮ್ಮಿಂದಾಗುವ ಸಹಾಯವನ್ನು ಬಡ ಜನರಿಗೆ ಮಾಡಿ” ಎಂದರು.
ಪುರ ಗ್ರಾಮದ ಸರಿಸುಮಾರು 400-500 ಜನ ಬಡವರಿಗೆ ಆಹಾರದ ದಿನಸಿ ಕಿಟ್ ವಿತರಿಸಲಾಯಿತು.
ಆಹಾರದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಹುಲಿಮಂಗಲ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರಾಧಮ್ಮ ನಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ನಾರಾಯಣಸ್ವಾಮಿ, ಶ್ರೀಮತಿ ತಾರಾ ಅಶ್ವಿನಿ ಶ್ರೀನಾಥ್, ಶ್ರೀಮತಿ ಮೀನಾಕ್ಷೀ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ರಾಜಣ್ಣ, ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಗಣೇಶ್, ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ಸಂಪಗೆರೆ ಅಶ್ವಥ್, ವಿನೋದ್ ಹಾಗೂ ಆಹಾರ ದಿನಸಿ ಕಿಟ್ ಪಡೆಯಲು ಅನೇಕ ಮಹಿಳೆಯರು, ಗ್ರಾಮಸ್ಥರು ಹಾಜರಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.