ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯ ಎಂಬಲ್ಲಿನ ಆರ್ಥಿಕ ದುಸ್ಥಿತಿಯಲ್ಲಿರುವ ಅಸಹಾಯಕ ವ್ಯಕ್ತಿಯೊಬ್ಬರ ಮನೆಯ ಛಾವಣಿ ಕುಸಿದು ಸೋರುತ್ತಿರುವ ಮಾಹಿತಿಯನ್ನು ಪಡೆದ ವೆಲ್ಫೇರ್ ಪಾರ್ಟಿ ಇಂಡಿಯಾ ಇದರ ಸೇವಾ ವಿಭಾಗದ ಕಾರ್ಯಕರ್ತರು, ತಕ್ಷಣ ಸ್ಪಂದಿಸಿ ದುರಸ್ತಿ ಕಾರ್ಯವನ್ನು ಕೈಗೊಳ್ಳುವ ಮೂಲಕ ಸಂತ್ರಸ್ತ ಕುಟುಂಬವು ಸದ್ರಿ ವಸತಿಯಲ್ಲೇ ನೆಲೆಸುವಷ್ಟರ ಮಟ್ಟಿಗೆ ತಾತ್ಕಾಲಿಕವಾಗಿರುವ ನೆರವನ್ನು ನೀಡಿ ಸಮಸ್ಯೆಯನ್ನು ಬಗೆಹರಿಸಿದ್ದು, ಪ್ರಸ್ತುತ ಸೇವಾ ಕಾರ್ಯವನ್ನು ಅಬ್ಬಾಸ್ ಮಲಾರ್ ಮತ್ತು ರಝಾಕ್ ಅಮ್ಮುಂಜರವರ ನೇತೃತ್ವದಲ್ಲಿ ನೆರವೇರಿಸಿಕೊಡಲಾಯಿತೆಂಬುವುದಾಗಿ, ಡಬ್ಲ್ಯು. ಪಿ. ಐ. ಇದರ ದ.ಕ. ಜಿಲ್ಲಾ ಸಮಿತಿಯು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.