ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರಿನ ತಾಲ್ಲೂಕು ಕಚೇರಿಗೆ ಸಾರ್ವಜನಿಕರು ಒಳ ಪ್ರವೇಶ ಮಾಡುವ ಪ್ರಾರಂಭದ ಗೇಟ್ ನ ಬಳಿ ಸ್ವಾಗತ ಕೋರುತ್ತಾ, ರಾರಾಜಿಸುತ್ತಿರುವ ಕಾಂಗ್ರೇಸ್ ಪಕ್ಷದ ಬಾವುಟವನ್ನು ಕಂಡು ಮಾಲೂರಿನ ಮಾಜಿ ಪುರಸಭಾ ಅಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಎಂ.ರಾಮಮೂರ್ತಿ ರವರು ಬೇಸರ ವ್ಯಕ್ತಪಡಿಸಿರುವ ಘಟನೆ ಮಾಲೂರಿನಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ತಾಲ್ಲೂಕು ಕಚೇರಿಗೆ ಸಾವಿರಾರು ಮಂದಿ, ವಿವಿಧ ಪಕ್ಷದ ಮುಖಂಡರು ಸೇರಿದಂತೆ ಅನೇಕ ಪ್ರಮುಖ ಅಧಿಕಾರಿಗಳು ವಿವಿಧ ಕಾರ್ಯಗಳಿಗಾಗಿ ಕಚೇರಿಗೆ ಪ್ರಾರಂಭದ ಗೇಟಿನ ಮೂಲಕವೇ ಪ್ರವೇಶ ಮಾಡಬೇಕು. ಮೂರು ದಿನಗಳ ಹಿಂದೆ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೇಸ್ ಮುಖಂಡರು, ನಾಯಕರು, ಪ್ರತಿಭಟನೆ ಮಾಡಿ ಪಕ್ಷದ ಬಾವುಟವನ್ನು ಬಿಟ್ಟು ಹೋಗಿರುವುದರಿಂದ ನೋಡಿಯೂ ನೋಡದಂತೆ ಇದ್ದು, ಈ ಬಾವುಟ ಮೂರು ದಿನಗಳಿಂದ ಇದ್ದರೂ ಯಾರೂ ಇದನ್ನು ತೆಗೆಯುವ ಗೋಜಿಗೆ ಹೋಗದೇ ಇರುವುದು ಬಹಳ ಬೇಸರ ತರಿಸಿದೇ. ಈ ಬಗ್ಗೆ ಅಧಿಕಾರಿಗಳ ಅಸಡ್ಡೆತನ ಪ್ರದರ್ಶಿಸುತ್ತಿರುವುದು ಗೋತ್ತಾಗುತ್ತಿದೆ.
ಈ ರೀತಿಯ ಘಟನೆಗಳಿಂದ ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವ ಹಾಗೇ ಉದ್ಬವಿಸಿದೆ. ಇದು ಕಾಂಗ್ರೇಸ್ ಪಕ್ಷದ ಕಚೇರಿಯೋ ಅಥವಾ ಸಾರ್ವಜನಿಕರ ಚಟುವಟಿಕೆಗಳನ್ನು ನಡೆಸುವ ದಂಡಾಧಿಕಾರಿಗಳ ಕಚೇರಿಯೋ ಎಂಬುದು ತಿಳಿಯುತ್ತಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕಿನ ತಾಲ್ಲೂಕು ಕಚೇರಿಯ ಅಧಿಕಾರಿಗಳು ಈ ಕೂಡಲೇ ಈ ಬಾವುಟ ತೆರೆವುಗೋಳಿಸಬೇಕು. ಸ್ವಾಸ್ಥ್ಯ ಸಮಾಜದ ನಿರ್ಮಾಣ ಆಗಬೇಕು. ಈ ರೀತಿಯ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದರೆ. ಅಸಡ್ಡೆಯನ್ನು ಪ್ರದರ್ಶಿಸಿ ತೆರವುಗೋಳಿಸದೇ ಇದ್ದಲ್ಲಿ ಬಿಜೆಪಿ ಪಕ್ಷ ಹೋರಾಟದ ಹಾದಿಯನ್ನು ತುಳಿಯಬೇಕಾಗುತ್ತದೆ ಎಂದಿದ್ದಾರೆ.
ಮಾಲೂರಿನ ಪುರಸಭೆಯ ಅಧಿಕಾರಿಗಳು ಬೇರೆ ಪಕ್ಷದ ಮುಖಂಡರುಗಳು ಹಾಕುವ ಪ್ಲೇಕ್ಸ್ ಗಳನ್ನು ಎರಡು-ಮೂರು ದಿನಗಳಲ್ಲಿ ತೆರವುಗೋಳಿಸುತ್ತಾರೆ ಆದರೆ ಕಾಂಗ್ರೇಸ್ ಪಕ್ಷದವರು ಅಳವಡಿಸಿರುವ ಫ್ಲೇಕ್ಸಗಳನ್ನು ಎರಡು ವಾರವಾದರೂ ತೆಗೆಯದೇ ಇರುವುದು ಸಹ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.