ಶಿವಮೊಗ್ಗದ ಸ್ಕೌಟ್ಸ್ ಗೈಡ್ಸ್ ಸ್ವಯಂ ಸೇವಕರುಗಳು
(ವಿಶ್ವ ಕನ್ನಡಿಗ ನ್ಯೂಸ್),ಶಿವಮೊಗ್ಗ: ದಿನಾಂಕ: 19 ಹಾಗೂ 22 ಜುಲೈ 2021 ರಂದು ರಾಜ್ಯಾದ್ಯಂತ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 150 ಕೇಂದ್ರಗಳಿದ್ದು ಪ್ರತಿ ಕೇಂದ್ರಕ್ಕೆ 2 (ಇಬ್ಬರಂತೆ) ಸ್ಕೌಟ್ಸ್ ಗೈಡ್ಸ್ನ ಸ್ವಯಂ ಸೇವಕರುಗಳು ಸೇವೆ ಸಲ್ಲಿಸಿರುತ್ತಾರೆ.
ರಾಜ್ಯ ಮುಖ್ಯ ಆಯುಕ್ತರಾದ ಮಾನ್ಯ ಶ್ರೀ ಪಿ.ಜಿ.ಆರ್.ಸಿಂಧ್ಯ ರವರ ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಮಾನ್ಯ ಶ್ರೀ ಹೆಚ್.ಡಿ.ರಮೇಶಶಾಸ್ತ್ರಿ ರವರ ಮಾರ್ಗದರ್ಶನದಂತೆ ಜಿಲ್ಲಾ ಪದಾಧಿಕಾರಿಗಳು ಏಳು ತಾಲ್ಲೂಕಿನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.
ಶಿವಮೊಗ್ಗ ತಾಲ್ಲೂಕಿನಲ್ಲಿ ಎರಡು ತಂಡಗಳಾಗಿ ವಿಗಂಡಿಸಿ ಒಂದೊಂದು ಮಾರ್ಗವನ್ನು ತೆಗೆದುಕೊಂಡು ಪ್ರತಿ ಕೇಂದ್ರಗಳಿಗೆ ಭೇಟಿ ನೀಡಲಾಯಿತು. ಮೊದಲ ತಂಡ ಜಿಲ್ಲಾ ಕಾರ್ಯದರ್ಶಿ ಶ್ರೀ ಹೆಚ್. ಪರಮೇಶ್ವರ್, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ, ಎ.ಎಸ್.ಒ.ಸಿ ಶ್ರೀಮತಿ ಭಾರತಿ ಡಾಯಸ್ ಹಾಗೂ 2ನೇ ತಂಡದಲ್ಲಿ ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಇ ಪವಾರ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶ್ರೀ ನೂರ್ ಅಹಮದ್, ಎಲ್.ಎ. ಸಹ ಕಾರ್ಯದರ್ಶಿ ಶ್ರೀ ರಾಜೇಶ ವಿ. ಅವಲಕ್ಕಿ, ಪಿ.ಆರ್.ಒ ಶ್ರೀ ವಿಜಯಕುಮಾರ, ಎಸ್.ಜಿ.ವಿ. ಕುಮಾರಿ ಸುಮಲತಾ ಇದ್ದು ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಕರುಗಳಿಗೆ ಮಾತನಾಡಿಸಿ ಅವರ ಆರೋಗ್ಯ, ಸೇವಾಕಾರ್ಯದ ಬಗ್ಗೆ ವಿಚಾರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.