ವಿಶ್ವ ಕನ್ನಡಿಗ ನ್ಯೂಸ್ : ಸಮಾಧಿ ಕಟ್ಟಿ ಬಿಡಿ ಸಮಾಧಿ ಕಟ್ಟಿ ಬಿಡಿ ನನಗೊಂದು ಸಮಾಧಿ ಕಟ್ಟಿ ಬಿಡಿ
ಬದಲಾಗದ ಸಮಾಜದಲ್ಲಿ ಸತ್ಯ ಸತ್ಯತ್ತೆಗಳ ಕಗ್ಗೊಲೆಯಾಗಿ ಅಸತ್ಯ ತಾಂಡವಾಡುವ ಜಗದಲ್ಲಿ ಆಸೆ ಆಮಿಷಗಳಿಗೆ ಖಡಿವಾಣವಿರದ ಸ್ವಾರ್ಥವೆ ತುಂಬಿರುವ ಜನರೋಳಗೆ ಒಳ್ಳೆಯವನಾಗಿ ಬಾಳುವುದು ಕಷ್ಟ ಒಳ್ಳೆಯ ತನಕೆ ಬೆಲೆ ಸಿಗದ ಜಗದಲ್ಲಿ ಸತ್ಯವಂತರಿಗೊಂದು ಸಮಾಧಿ ಕಟ್ಟಿ ಬಿಡಿ ಸಮಾಧಿ ಕಟ್ಟಿ ಬಿಡಿ…………..
ದುಡ್ಡಿನ ಅಮಲೇರಿ ಮೌಢತ್ಯೆಯ ತುಳಿತದಲ್ಲಿ ಜಗಕ್ಕೆ ಬೆಳಕಾಗದೆ ಜನರ ನೋವಿನ ದಾಹಕ್ಕೆ ನೀರಾಗದೆ ದಾಸ್ಯವೆ ತುಂಬಿರುವ ಜಗದಲ್ಲಿ ಜ್ಞಾನಕ್ಕೆ ಬೆಲೆಯಿಲ್ಲದ ನಾಡಲ್ಲಿ ಜ್ಞಾನ ವಂತರಿಗೊಂದು ಸಮಾಧಿ ಕಟ್ಟಿ ಬಿಡಿ ಸಮಾಧಿ ಕಟ್ಟಿ ಬಿಡಿ……………..
ಅಸಡ್ಡೆ ಭಾವನೆಗಳ ಹೇಗಲಿರಿಸಿಕೊಂಡು ಕೆಟ್ಟ ಕೆಲಸಗಳ ಮಾಡುತ್ತ ಮೋಸ ವಂಚನೆ ,ಕಾಮ ಕ್ರೋಧ , ಮದ ಮತ್ಸರ ತಾಂಡವಾಡುವ ಜಗದಲ್ಲಿ ಒಳ್ಳೆಯವರಿಗೆ ಬೆಲೆ ಎಲ್ಲಿದೆ ಕೆಟ್ಟವರಿಗೆ ಮಾತ್ರ ಉಳಿಗಾಲ ಎನ್ನುವಂತ ಜಗದಲ್ಲಿ ಉತ್ತಮ ಗುಣವಂತರ ಗುಣಕ್ಕೆ ಸಮಾಧಿ ಕಟ್ಟಿ ಬಿಡಿ ಸಮಾಧಿ ಕಟ್ಟಿ ಬಿಡಿ…………..
ಸೃಷ್ಟಿಕರ್ತನ ಕಣ್ಣಿಗೆ ಮಣ್ಣೆರೆಚ್ಚಿ ಜೀವ ಸಂಕೋಲೆಗಳ ನಾಶ ಪಡಿಸಿ ಮಣ್ಣಿನ ಮಕ್ಕಳ ಪಾಲಿಗೆ ದಾರಿದೀಪವಾಗದೆ ತನ್ನ ಬದುಕಿಗಾಗಿ ಬದುಕುವ ಜನರ ಮಧ್ಯೆ ನೊಂದು ಬೆಂದು ನಶಿಸಿ ಹೋಗುತ್ತಿರುವ ಬಡಜೀವಗಳ ಉಸಿರಿಗೊಂದು ಸಮಾಧಿ ಕಟ್ಟಿಬಿಡಿ ಸಮಾಧಿ ಕಟ್ಟಿ ಬಿಡಿ………….
ದುಚಟಗಳ ದಾಸರಾಗಿ ಕ್ರೌರ್ಯದ ಹುತ್ತಗಳ ಮೂಟೆ ಕಟ್ಟಿ ಅತ್ಯಾಚಾರ ಆಕ್ರಂದನಗಳಿಂದ ಸಮಾಜದಸ್ವಾಸ್ಥ್ಯಕ್ಕೆ ಮಸಿ ಬಳಿದು ಹಾಳು ಮಾಡುವ ನರಹಂತಕರ ಅಮಾನವಿಯತೆಯ ಖಂಡಿಸದ ಜಗದಲ್ಲಿ ಮಾನವಿಯತೆಗೆ ಸಮಾಧಿ ಕಟ್ಟಿ ಬಿಡಿ ಸಮಾಧಿ ಕಟ್ಟಿ ಬಿಡಿ…………….
ಅನ್ಯಾಯದ ಅಮುಲು ಜಾಸ್ತಿಯಾಗಿ ನ್ಯಾಯಕ್ಕೆ ಜಯ ಸಿಗದ ಸಮಾಜದಲ್ಲಿ ಭ್ರಷ್ಟತೆ ತುಂಬಿರುವ ನಾಡಲಿ ನ್ಯಾಯಯುತವಾಗಿ ನಡೆಯುವ ಜನರ ನ್ಯಾಯಕ್ಕೆ ಸಮಾಧಿ ಕಟ್ಟಿ ಬಿಡಿ ಸಮಾಧಿ ಕಟ್ಟಿ ಬಿಡಿ…………….
ಬದಲಾಗಬೇಕು ಸಮಾಜ ನಾವು ಬದಲಾಯಿಸಬೇಕು ಬದಲಾವಣೆಯಾಗದ ಸಮಾಜದಲ್ಲಿ ನನಗೊಂದು ಸಮಾಧಿ ಕಟ್ಟಿ ಬಿಡಿ ಸಮಾಧಿ ಕಟ್ಟಿ ಬಿಡಿ………………
ದೇವರಾಜ್ ತಂಬಿಹಳ್ಳಿ ಮಾಲೂರು ತಾಲ್ಲೂಕು ಕೋಲಾರ ಜಿಲ್ಲೆ 563130 7204641488
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.