ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ಪಟ್ಟಣ್ಣದ ತಾಲ್ಲೂಕುಕಚೇರಿಯ ಮುಂಭಾಗದ ಪ್ರಮುಖ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಅಕ್ಟಿಯ್ ಹೋಂಡಾ ದ್ವಿಚಕ್ರ ವಾಹನ ಸವಾರನ ಬಲಕಾಲಿನ ಮೂಳೆ ಸಂಪೂರ್ಣ ಮೂರಿಯುವ ಮೂಲಕ ಚಿಂತಾಜನಕ ಪರಿಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಮಾಲೂರು ಪಟ್ಟಣ್ಣದ ಈ ಒಂದು ಪ್ರಮುಖ ರಸ್ತೆಯಲ್ಲಿ ತಾಲ್ಲೂಕಿನ ಹುರುಳಗೆರೆ ಭಾಗದ ಕಾವೇರಪ್ಪ (45 ವರ್ಷದ) ವ್ಯಕ್ತಿ ಆಕ್ಟಿವ್ ಹೋಂಡಾ ವಾಹನದಲ್ಲಿ ತಾಲ್ಲೂಕು ಕಚೇರಿಯಿಂದ ರಸ್ತೆಯಲ್ಲಿ ಹೋರಹೋಗುವ ಸಮಯದಲ್ಲಿ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಬರುತ್ತಿದ್ದ ಬುಲೇಟ್ ವಾಹನ ಸವಾರ ಡಿಕ್ಕಿ ಹೋಡೆದ ಪರಿಣಾಮ ವಯಸ್ಸಾದ ವೃದ್ದ ಸ್ಥಳದಲ್ಲೇ ಕುಸಿದು ಬಿದ್ದ ಕಾವೇರಪ್ಪನ ಬಲಗಾಲು ಮುರಿದು ಹೋಗಿದ್ದು ಬಹಳಷ್ಟು ಆಕ್ರಂದನ ಅನುಭವಿಸಿದ್ದಾರೆ. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಅವರ ಕಷ್ಟಕ್ಕೆ ಧಾವಿಸುವ ಮೂಲಕ ಅಂಬ್ಯೂಲೇನ್ಸ್ ಗೆ ಕರೆಮಾಡಿ ಅಬ್ಯೂಲೇನ್ಸ್ ಕರೆಸಿ ಅವರನ್ನು ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ಬಗ್ಗೆ ಮಾಲೂರು ಪೊಲೀಸ್ ಠಾಣೆ ಯಲ್ಲಿ ದೂರದಾರರು ಇನ್ನೂ ದೂರು ದಾಖಲಿಸಲ್ಲಿಲ್ಲ. ದಾಖಲಿಸಿದರೆ ಅವರ ಮೇಲೆ ನಾವು FIR ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.