ನೆಲ್ಲಿಯಹುದಿಕೇರಿ(www.vknews.in): SKSSF ನೆಲ್ಲಿಯಹುದಿಕೇರಿ ಶಾಖೆಯ ವತಿಯಿಂದ ಅಗಲಿದ ಸಮಸ್ತದ ನಾಯಕರ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ ದಿನಾಂಕ 09/11/2021 ರ ಮಂಗಳವಾರ ಶಾಖಾ ಕಛೇರಿಯಲ್ಲಿ ನಡೆಯಿತು.
ಶೈಖುನಾ ಶಂಸುಲ್ ಉಲಮಾ ಹಾಗೂ ಅಗಲಿದ ನೇತಾರರನ್ನು ಸ್ಮರಿಸಿ ಸ್ಥಳೀಯ ಖತೀಬರಾದ ಹಾರಿಸ್ ರಹ್ಮಾನಿ ಮಾತನಾಡಿದರು. SKSSF ನೆಲ್ಲಿಯಹುದಿಕೇರಿ ಶಾಖಾಧ್ಯಕ್ಷರಾದ ಮೋಯಿನುದ್ದೀನ್ ಕೆ ಎಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಮ್ಮದ್ ಅಲಿ ಉಸ್ತಾದ್, ಹಾರಿಸ್ ಬಾಖವಿ, ಕಾರ್ಯದರ್ಶಿ ಶಂಸುದ್ದೀನ್, ಕೋಶಾಧಿಕಾರಿ ಜಂಶೀರ್, ಕೆ ಎಂ ಬಶೀರ್ ,ಮುಹಮ್ಮದ್ ಅಲಿ , ಜಿಸಿಸಿ ಕೊಡಗು ಮಾಧ್ಯಮ ವಿಭಾಗದ ಅಧ್ಯಕ್ಷರಾದ ಶಫೀಕ್ ಹಾಗೂ ಶಾಖೆಯ ಹಲವು ಸದಸ್ಯರುಗಳು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.