ಮಂಜೇಶ್ವರ (www.vknews.com) : ಸಿ.ಎಂ.ನಗರ ಚಿನಾಲ ದಾರುನ್ನಜಾತ್ ಎಜುಕೇಷನಲ್ ಸೆಂಟರ್ ನ 13 ನೇ ವಾರ್ಷಿಕೋತ್ಸವದ ಅಂಗವಾಗಿ ಮಂಕೂಸ್ ಮೌಲಿದ್ ವ್ಯಾಖ್ಯಾನ ನಡೆಸುತ್ತಿರುವ ಮತ್ತು ಪ್ರತಿದಿನ ಹದೀಸ್,ಕರ್ಮಶಾಸ್ತ್ರ,ಪ್ರವಾದಿ ಕೀರ್ತನೆಯ “ಅನ್ನಜಾತ್ ” ಪೋಸ್ಟರ್ ಮೂಲಕ ಸಮಾಜಕ್ಕೆ ಒಳಿತಿನ ಸಂದೇಶ ಸಾರುತ್ತಿರುವ ದಾರುನ್ನಜಾತ್ ಎಜುಕೇಷನಲ್ ಸೆಂಟರ್ ಜತೆ ಕಾರ್ಯದರ್ಶಿ, ಚಿನಾಲ,ಚಿಗುರುಪಾದೆ ಸಿ.ಎಂ.ನಗರ ಖತೀಬ್ ಶಬೀರ್ ಅಶ್ಅರಿ ಕೆ.ಸಿ.ರೋಡ್ ಅವರನ್ನು ಸಂಸ್ಥೆಯ ಜಲಾಲಿಯ್ಯ ರಾತೀಬ್ ಮಜ್ಲಿಸ್ ನಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ದಾರುನ್ನಜಾತ್ ಎಜುಕೇಷನಲ್ ಸೆಂಟರ್ ಶಿಲ್ಪಿ ಅಬ್ದುಲ್ ಖಾದರ್ ಸಕಾಫಿ ಮೋಂಟುಗೋಳಿ,ಚೇರೂರು ಮೊಯ್ದು ಸಅದಿ,ಅಬ್ದುಲ್ ಖಾದರ್ ಮುಸ್ಲಿಯಾರ್ ಬಟ್ಟಿಪದವು,ಅಹ್ಮದ್ ಮದನಿ ಮೀಯಪದವು,ರಫೀಖ್ ಇಂದಾದಿ ಚಿಗುರುಪಾದೆ,ಅಬ್ದುಲ್ಲಾ ಮುಸ್ಲಿಯಾರ್ ಮೀಯಪದವು,ಇಬ್ರಾಹಿಂ ಮುಸ್ಲಿಯಾರ್ ಬೆಜ್ಜಂಗಳ,ಹುಸೈನ್ ಮುಸ್ಲಿಯಾರ್ ಅಡಂತರಕ್ಕಾಡು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎಸ್ ವೈ ಎಸ್ ಎಸ್ಸೆಸ್ಸೆಫ್ ಹಿದಾಯತ್ ನಗರ ಇದೇ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತದೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.