ಜೆದ್ದಾ(www.vknews.in): ಇಂಡಿಯನ್ ಸೋಷಿಯಲ್ ಫಾರಂ ಜೆದ್ದಾ ವಲಯದ ಅಧೀನದಲ್ಲಿನರುವ ತಾಯಿಫ್ ನ ನೂತನ ಐಎಸ್ಎಫ್ ಘಟಕವು ನವೆಂಬರ್ 26ರಂದು ಅಸ್ತಿತ್ವಕ್ಕೆ ಬಂದಿದೆ.
ಶುಕ್ರವಾರ ಮಧ್ಯಾಹ್ನ ತಾಯಿಫ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಎಸ್ಎಫ್ ರಾಜ್ಯಾಧ್ಯಕ್ಷರಾದ ಜನಾಬ್ ಆಸಿಫ್ ಗಂಜಿಮಠ ಅವರು ತಾಯಿಫ್ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಐಎಸ್ಎಫ್ ಎಂಬ ಸಂಘಟನೆಯು ಅನಿವಾಸಿ ಭಾರತೀಯರ ಸಂಘಟನೆಯಾಗಿದ್ದು, ಕಳೆದ ಹತ್ತು ವರ್ಷಗಳಿಂದ ಇದು ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ದೆಹಲಿ ಸ್ಟೇಟ್ ಎಂಬ ನಾಲ್ಕು ವಿಭಾಗಗಳಲ್ಲಿ ಕಾರ್ಯಾಚರಿಸುತ್ತಿದ್ದು, ಅನಿವಾಸಿ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಅನಿವಾಸಿಗಳ ಕಷ್ಟಗಳಿಗೆ ಸ್ಪಂದಿಸುವುದು ಮಾತ್ರವಲ್ಲದೇ ಅನಿವಾಸಿ ಭಾರತೀಯರೆಡೆಯಲ್ಲಿ ರಾಜಕೀಯ ಪ್ರಜ್ಞೆಯನ್ನೂ ಮೂಡಿಸುವುದು ನಮ್ಮ ಪ್ರಮುಖ ಧ್ಯೇಯವಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ರಾಜ್ಯದಲ್ಲಿ 14% ಜನಸಂಖ್ಯೆಯನ್ನು ಹೊಂದಿರುವ ಲಿಂಗಾಯಿತರಿಗೆ ಹಾಗೂ 12% ಒಕ್ಕಲಿಗರಿಗೆ ತಮ್ಮದೇ ಜಾತಿಯ ಮುಖ್ಯಮಂತ್ರಿಯನ್ನು ಮಾಡಲು ಸಾಧ್ಯವಾದರೆ, ರಾಜ್ಯದಲ್ಲಿ ಶೇಖಡಾ 13ರಷ್ಟಿರುವ ಮುಸಲ್ಮಾನರಿಗೆ ಬಿಡಿ ಕನಿಷ್ಠಪಕ್ಷ ಒಂದು ಸಂಸದರನ್ನೂ ಕೂಡ ಆಯ್ಕೆ ಮಾಡಲು ಯಾಕೆ ಸಾಧ್ಯವಾಗುತ್ತಿಲ್ಲ?. ಈ ಕುರಿತು ನಾವು ಚಿಂತಿಸಬೇಕಿದೆ. ನಮ್ಮಲ್ಲಿ ರಾಜಕೀಯವಾದ ದೂರದೃಷ್ಟಿ ಇಲ್ಲದಿರುವುದೇ ಇದಕ್ಕೆ ಕಾರಣ. ಮುಂದೆ ನಾವು ರಾಜಕೀಯವಾಗಿ ಮುನ್ನಲೆಗೆ ಬರಬೇಕಿದೆ’ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಐಎಸ್ಎಫ್ ಜಿಲ್ಲಾಧ್ಯಕ್ಷರಾದ ಜನಾಬ್ ಅರಿಫ್ ಬಜ್ಪೆ ಮಾತನಾಡಿ “ಪ್ರಸಕ್ತ ಸನ್ನಿವೇಶದಲ್ಲಿ ದೇಶದಲ್ಲಿ ಮುಸಲ್ಮಾನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಪರಿಗಣಿಸಲಾಗುತ್ತಿದ್ದು, ಈ ಬೆಳವಣಿಗೆಗೆ ಮುಸಲ್ಮಾನರಲ್ಲಿ ರಾಜಕೀಯ ಮುತುವರ್ಜಿ ಇಲ್ಲವಾಗಿರುವುದೇ ಕಾರಣ. ದೇಶದಲ್ಲಿ ನಮ್ಮ ಹಕ್ಕನ್ನು ಪಡೆಯಬೇಕಿದ್ದರೆ ಮುಂದೆ ನಾವು ರಾಜಕೀಯ ಪಕ್ವತೆಯನ್ನು ಪ್ರದರ್ಶಿಸಬೇಕಿದೆ. ಈ ನಿಟ್ಟಿನಲ್ಲಿ ಐಎಸ್ಎಫ್ ನ ಎಲ್ಲಾ ಸದಸ್ಯರು ಪ್ರಯತ್ನಿಸಬೇಕಾಗಿದೆ’ ಎಂದರು. ವಲಯಾಧ್ಯಕ್ಷರಾದ ಜನಾಬ್ ಹಮೀದ್ ವಿಟ್ಲ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತೌಸೀಫ್ ಕಾರ್ಯಕ್ರಮ ನಿರೂಪಿಸಿದರು. ರಫೀಕ್ ಬುಡೋಳಿ ನೂತನ ಸಮಿತಿಯನ್ನು ಪರಿಚಯಿಸಿದರು.
ತಾಯಿಫ್ ಘಟಕದ ನೂತನ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.ಅಧ್ಯಕ್ಷರು: ಸಾಜಿದ್ ಗಂಜಿಮಠಉಪಾಧ್ಯಕ್ಷ: ಝುಬೈರ್ ತುಂಬೆಪ್ರಧಾನ ಕಾರ್ಯದರ್ಶಿ: ಮಾಲಿಕ್
ಕಾರ್ಯದರ್ಶಿಗಳಾಗಿ ಮೊಯ್ದಿನ್ ಶಿವಮೊಗ್ಗ ಹಾಗೂ ಇರ್ಫಾನ್ ಶಿವಮೊಗ್ಗ ಹಾಗೂ ಪತ್ರಿಕಾ ಸಲಹೆಗಾರರಾಗಿ ರಹಿಮಾನ್ ಮಿತ್ತೂರು ಇವರುಗಳನ್ನು ಸರ್ವಾನುಮತದಿಂದ ಆರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.