ಮಾಲೂರು (ವಿಶ್ವಕನ್ನಡಿಗ ನ್ಯೂಸ್):
ಮಾಲೂರು ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯ) ವತಿಯಿಂದ ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಕರವೇ ರಾಜ್ಯ ಅಧ್ಯಕ್ಷ ಹೆಚ್.ಶಿವರಾಮೇಗೌಡ ರವರಿಗೆ ಗೌರವಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು.
ಮಾಲೂರು ತಾಲ್ಲೂಕು ಕರವೇ ನೂತನ ಘಟಕಗಳಿಗೆ ಆಯ್ಕೆಯಾದ ಪದಾಧಿಕಾರಿಗಳಿಗೆ ರಾಜ್ಯ ಅಧ್ಯಕ್ಷರು ಆದೇಶ ಪತ್ರ, ಗುರುತಿನ ಚೀಟಿ ನೀಡಿ ಸಂಘಟನೆಯನ್ನು ಬಲಪಡಿಸುವಂತೆ ಶುಭ ಹಾರೈಸಿದರು.
ಕರವೇ ರಾಜ್ಯ ಅಧ್ಯಕ್ಷರಾದ ಹೆಚ್.ಶಿವರಾಮೇಗೌಡ ರವರು ಮಾತನಾಡುತ್ತಾ “ಚಿನ್ನದ ಜಿಲ್ಲೆ ಕೋಲಾರದಲ್ಲಿ ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆಯ ಉಳಿವಿಗಾಗಿ ಸದಾ ದನಿ ಎತ್ತುವ, ಹೋರಾಟದ ಕಿಚ್ಚಿನ ಮೂಲಕ ಸಮಸೈಗಳಿಗೆ ಪರಿಹಾರ ದೊರಕಿಸುವ ಕೆಲಸವನ್ನು ಕರವೇ ಮಾಡುತ್ತಿರುವುದು ಶ್ಲಾಘನೀಯ, ಆ ಹಾದಿಯಲ್ಲಿ ಮಾಲೂರಿನ ಲಕ್ಕೂರು ಎಂ.ನಾಗರಾಜ್ ಹಾಗೂ ತಾಲ್ಲೂಕು ಅಧ್ಯಕ್ಷರಾದ ದೊಡ್ಡಕಲ್ಲಹಳ್ಳಿ ಮಂಜುನಾಥ್ ಹಾಗೂ ಪದಾಧಿಕಾರಿಗಳು ಉತ್ತಮ ತಂಡ ಕಟ್ಟಿ ಸಮಾಜದ ಒಳಿತಿಗೆ ಶ್ರಮಿಸುವ ಮೂಲಕ ಕನ್ನಡ ಕಟ್ಟುವ ಕೆಲಸ ಆಗಲಿ” ಎಂದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಲಕ್ಕೂರು ಎಂ, ನಾಗರಾಜ್, ತಾಲ್ಲೂಕು ಅಧ್ಯಕ್ಷ ದೊಡ್ಡಕಲ್ಲಹಳ್ಳಿ ಮಂಜುನಾಥ್, ಮಹಿಳಾ ಘಟಕದ ಗೌರವ ಅಧ್ಯಕ್ಷರಾದ ಶ್ರೀಮತಿ ವನಿತ ಅರವಿಂದ್, ಮಹಿಳಾ ಘಟಕದ ಅಧ್ಯಕ್ಷರಾದ ಶೋಭಾ ಕೃಷ್ನ, ಗಂಗಾಭವನಿ, ರತ್ಮಮ್ಮ, ಹೇಮಾವತಿ ಶಶಿಕಲಾ, ವಿದ್ಯಾರ್ಥಿನಿ ಘಟಕದ ಅಧ್ಯಕ್ಷರಾದ ಉಷಾ, ಪವಿತ್ರ, ನದೀಯಾ, ಗುಣಶ್ರೀ, ನಗರ ಘಟಕದ ಅಧ್ಯಕ್ಷರಾದ ಮೌಲಾ ಆಲಿ, ಕರವೇ ನಿರ್ದೇಶಕರಾದ ದೊಂಬರಹಳ್ಳಿ ಶಿವಕುಮಾರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ದೊಡ್ಡಿ ಪ್ರವೀಣ್, ಸಾಂಸ್ಕೃತಿಕ ಘಟಕದ ಪ್ರಧಾನ ಕಾರ್ಯದರ್ಶಿ ನಳೀನಾಕ್ಷಿ, ರಂಗನಾಥ್, ಕರವೇ ಕಾರ್ಯ ಅಧ್ಯಕ್ಷ ಸಲ್ಮಾನ್ ಖಾನ್, ರಹೀಮ್ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.