(www.vknews.com) ; ಉಡುಪಿ ಜಿಲ್ಲೆಯ ಕಾಪು ಪುರಸಭಾ ಚುನಾವಣೆ ಡಿಸೆಂಬರ್ ತಿಂಗಳ ಕೊನೆಗೆ ನಡೆಯಲಿರುವುದರಿಂದ ಎಸ್ಡಿಪಿಐ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿ ಅಧಿಕ್ರತ ಅಭ್ಯರ್ಥಿಯನ್ನು ಘೋಷಿಸಿದೆ.
ಕಾಪು ಕೊಂಬಗುಡ್ಡೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಅಧಿಕ್ರತ ಅಭ್ಯರ್ಥಿಗಳ ಪ್ರಥಮ ಪಟ್ಟಿಯ ಹೆಸರನ್ನು ಘೋಷಿಸಿದರು.ಅಭ್ಯರ್ಥಿಗಳ ಪಟ್ಟಿ ಹೀಗಿದೆ1)ದುಗನ್ ತೋಟ-ಹನೀಫ್ ಮೂಳೂರು2) ಮಂಗಳಪೇಟೆ-ವಹೀದಾ ಷರೀಪ್3) ಬಡಗರಗುತ್ತು-ನಿಯಾನ್ ಪರ್ವೀನ್4) ಕೊಂಬಗುಡ್ಡೆ-ನಝೀರ್ ಅಹ್ಮದ್5) ಗುಜ್ಜಿ-ಸರಿತ ಶಿವ6) ಜನರಲ್ ಶಾಲೆ-ರುಬೀನ ಶಹಬಾನ್7) ಗರಡಿ- ಅಬ್ದುಲ್ ಖಾದರ್8) ಕುಡ್ತಿಮಾರ್-ನಝ್ನೀನ್ ಇರ್ಫಾನ್
ಅಭ್ಯರ್ಥಿ ಘೋಷಣೆ ಮಾಡಿ ಮಾತಾಡಿದ ಶಾಫಿ ಬೆಳ್ಳಾರೆಯವರು ಓಟು ಪಡೆಯುವಾಗ ಕಾಂಗ್ರೆಸ್ ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳುವ ಈ ಸಂದರ್ಭದಲ್ಲಿ ಜನತೆ ಪ್ರಜ್ಙಾವಂತಿಕೆಯಿಂದ ಮತ ಚಲಾಯಿಸಲು ಮತ್ತು ಈ ದೇಶದ ಅಲ್ಪಸಂಖ್ಯಾತ,ದಲಿತ ಸಮುದಾಯದಕ್ಕೆ ಕಾಂಗ್ರೆಸ್ ನಡೆಸಿದ ಅನ್ಯಾಯಗಳನ್ನು ಮರೆಯಬಾರದು ಎಂದು ತಿಳಿಹೇಳಿದರು.ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಮಾತನಾಡಿ ಅಲ್ಪಸಂಖ್ಯಾತರು ಚುನಾವಣೆಗೆ ನಿಂತರೆ ಯಾರೂ ಮತ ಹಾಕುವುದಿಲ್ಲ ಎಂಬ ಕಾಂಗ್ರೆಸ್ ನಾಯಕರೋರ್ವರ ಮಾತನ್ನು ಪ್ರಸ್ತಾಪಿಸಿ ಅದೇ ಅಲ್ಪಸಂಖ್ಯಾತರ ಮತಗಳು ನೀವುಗಳು ಗೆಲ್ಲಲು ಬೇಕಾ ಎಂದು ಪ್ರಶ್ನಿಸಿದರು,
ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲೀ ರವರು ಸಂದರ್ಭೋಚಿತವಾಗಿ ಮಾತನಾಡಿದರು.ಕಾರ್ಯಕ್ರದ ಅಧ್ಯಕ್ಷತೆಯನ್ನು ಕಾಪು ವಿಧಾನ ಸಭಾ ಅಧ್ಯಕ್ಷ ಹನೀಫ್ ಮೂಳೂರ್ ವಹಿಸಿದ್ದರು.ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್,ಫಹೀಮ್, ಇಬ್ರಾಹಿಂ ಉಚ್ಚಿಲ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.