ಜೆದ್ದಾ(www.vknews.in): ಹಲವಾರು ವರ್ಷಗಳ ಅನಿವಾಸಿ ಭಾರತೀಯರ ಬೇಡಿಕೆಯೊಂದು ಈಡೇರುವ ಹಂತಕ್ಕೆ ತಲುಪಿದ್ದು, ಸೌದಿಯಲ್ಲಿರುವ ಅನಿವಾಸಿ ಭಾರತೀಯರ ಸಂಭ್ರಮ ಮುಗಿಲುಮುಟ್ಟಿದೆ.
ಭಾರತ ಹಾಗೂ ಸೌದಿ ನಡುವಿನ ಏರ್ ಬಬ್ಬಲ್ ಜನವರಿ 1 ರಿಂದ ಜಾರಿಗೆ ಬರಲಿದ್ದು ಈ ಒಪ್ಪಂದವು ಉಭಯ ರಾಷ್ಟ್ರಗಳ ನಡುವೆ ಮತ್ತಷ್ಟು ನೇರ ವಿಮಾನಗಳು ಹಾರಾಟ ನಡೆಸಲಿದ್ದು, ಅನಿವಾಸಿ ಭಾರತೀಯರ ಪಾಲಿಗೆ ಇದು ವರದಾನವಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಭಾರತೀಯರಿಗೆ ಸೌದಿ ಪ್ರವೇಶಿಸಲು ಚಾರ್ಟರ್ಡ್ ವಿಮಾನಗಳನ್ನು ಅವಲಂಬಿಸಬೇಕಾಗಿದ್ದು , ಇದು ದುಬಾರಿ ಮಾತ್ರವಲ್ಲ ಅನಿಶ್ಚಿತತೆಯಿಂದಲೂ ಕೂಡಿದ ಪ್ರಯಾಣವಾಗಿದೆ. ಏರ್ ಬಬ್ಬಲ್ ಒಪ್ಪಂದ ಜಾರಿಗೆ ಬಂದ ನಂತರ ಭಾರತ ಸೌದಿ ನಡುವೆ ವಾರದಲ್ಲಿ ಕನಿಷ್ಠ 10 ರಿಂದ ಇಪ್ಪತ್ತು ನೇರ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಇದರಿಂದಾಗಿ ಭಾರತ ಸೌದಿ ನಡುವಿನ ಪ್ರಯಾಣದ ಟಿಕೆಟ್ ದರ ಕಡಿಮೆಯಾಗುವ ಮೂಲಕ ಅನಿವಾಸಿಗಳ ಮೇಲಿನ ಹೊರೆಯು ಗಣನೀಯವಾಗಿ ಇಳಿಯಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.