ಲಿಬರಲ್ ಆಶಯಗಳ ಮರೆಯಲ್ಲಿ ಸಾಂಸ್ಕೃತಿಕ ಫ್ಯಾಶಿಸಂಗೆ ಶ್ರಮಿಸುವವರು ಎಚ್ಚರಿಕೆಯಿಂದಿರಿ: ಎಸ್ ಎಸ್ ಎಫ್
ಮಂಜೇಶ್ವರ (www.vknews.com) : ಸಮಾಜದಲ್ಲಿ ಯಾವುದೇ ಗೊಂದಲವಿಲ್ಲದೆ ನಡೆದು ಕೊಂಡು ಬರುತ್ತಿರುವ ಒಳಿತುಗಳನ್ನು ಇಲ್ಲವಾಗಿಸಿ ಲಿಬರಲ್ ಕಪಟ ಮೌಲ್ಯಗಳನ್ನು ಅನುಷ್ಠಾನಗೊಳಿಸುವ ನಡೆಯನ್ನು ಎಚ್ಚರಿಕೆಯಿಂದಲೇ ಕಾಣಬೇಕೆಂದು ಎಸ್ ಎಸ್ ಎಫ್ ಮಾಜಿ ರಾಜ್ಯಾಧ್ಯಕ್ಷರಾದ ಸಿಕೆ ರಾಶಿದ್ ಬುಖಾರಿ ಹೇಳಿದರು.
ಅವರು ಎಸ್ ಎಸ್ ಎಫ್ ಕಾಸರಗೋಡ್ ಜಿಲ್ಲಾ ಸಮಿತಿ ಆಯೋಜಿಸಿದ್ದ ಕ್ಯಾಂಪಸ್ ಅಸೆಂಬ್ಲಿಯಲ್ಲಿ ಸಂದೇಶ ಭಾಷಣ ಮಾಡಿದರು. ಧಾರ್ಮಿಕತೆಯೊಂದಿಗೆ ವಕ್ರ ಬಂಧವನ್ನು ಹೊಂದಿರುವ ಲಿಬರಲ್ ಚಿಂತಾಧಾರೆಗಳು ನಮ್ಮ ರಾಷ್ಟ್ರದ ವಿವಿಧತೆಗೂ ಸಂಸ್ಕೃತಿಗೂ ಮಾರಕವಾಗಿದೆ. ಸಾಂಸ್ಕೃತಿಕ ಫ್ಯಾಶಿಸಂಗೆ ದಾರಿ ಉಂಟುಮಾಡುವ ಲಿಬರಲ್ ಅಜಂಡಗಳಿಗೆ ಸಹಾಯಕವಾಗುವ ರೀತಿಯಲ್ಲಿ ಸರಕಾರಗಳು ವರ್ತಿಸಬಾರದೆಂದೂ ಅವರು ಕೇಳಿಕೊಂಡರು.
ಎರಡು ದಿನಗಳಲ್ಲಾಗಿ ನಡೆದ ಕ್ಯಾಂಪಸ್ ಅಸೆಂಬ್ಲಿಯಲ್ಲಿ ಜಿಲ್ಲೆಯ ಪ್ರೊಫೆಷನಲ್, ಆರ್ಟ್ಸ್&ಸೈನ್ಸ್ ಕಾಲೇಜುಗಳ ಸಾವಿರದಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಸಮಾರೋಪ ಸಮ್ಮೇಳನವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ತೃಕರಿಪ್ಪೂರ್ ಮುಹಮ್ಮದಲಿ ಸಖಾಫಿ ಉದ್ಘಾಟಿಸಿದರು.ಸಿಕೆ ರಾಶಿದ್ ಬುಖಾರಿ ಸಂದೇಶ ಭಾಷಣ ನಡೆಸಿದರು.ಅಬ್ದುಲ್ ರಹ್ಮಾನ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಸಯ್ಯಿದ್ ಜಲಾಲ್ ಬುಖಾರಿ, ಸಯ್ಯಿದ್ ಶಹೀರ್ ಅಲ್ ಬುಖಾರಿ, ಸಯ್ಯಿದ್ ಝೈನುಲ್ ಆಬಿದೀನ್ ಕಣ್ಣವಂ, ಸಯ್ಯಿದ್ ಮುನೀರುಲ್ ಅಹ್ದಲ್, ಸುಲೈಮಾನ್ ಕರಿವೆಳ್ಳೂರ್, ಪಿಬಿ ಬಶೀರ್ ಪುಳಿಕ್ಕೂರ್ ಮುಂತಾದವರು ಭಾಗವಹಿಸಿದ್ದರು.
ವಿದ್ಯಾರ್ಥಿ ಜಾಥಾದೊಂದಿಗೆ ಕ್ಯಾಂಪಸ್ ಅಸೆಂಬ್ಲಿ ಸಮಾಪ್ತಿಗೊಂಡಿತು.
ಫಾರೂಕ್ ಪೊಸೋಟ್ ಸ್ವಾಗತ ಹಾಗೂ ರಈಸ್ ನಈಮಿ ಧನ್ಯವಾದ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.