ವಿಟ್ಲ (www.vknews.com) : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಡಿವಿಷನ್ ನಿಯೋಗದಿಂದ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬಾತನು ವಿಟ್ಲದ ಸಾಲೆತ್ತೂರ್ ಎಂಬಲ್ಲಿ ನಡೆದ ಘಟನೆಯನ್ನು ಉಲ್ಲೆಖಿಸುತ್ತಾ , ಗೋದ್ರಾ ಷಡ್ಯಂತ್ರದ ನಂತರ ನಡೆದ ಗುಜರಾತ್ ಗಲಭೆ ಮಂಗಳೂರಲ್ಲೂ ನಡೆಸಬೇಕು. ಆಗಷ್ಟೇ ಮುಸ್ಲಿಮರು ಸುಮ್ಮನಾಗುತ್ತಾರೆ. ಗುಜರಾತ್ ಗಲಭೆ ಯಾವಾಗ ಹೇಗೆ ನಡೆಯಿತೆಂದು ಮುಸ್ಲಿಮರು ಯೋಚಿಸುದು ಒಳಿತು ಎಂದು ಬರೆದು ಶಾಂತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಗಲಭೆಗೆ ಕುಮ್ಮಕ್ಕು ನೀಡಿರುತ್ತಾನೆ ಆದುದರಿಂದ ಈ ದುಸ್ಕರ್ಮಿಯ ವಿರುದ್ದ ವಿಟ್ಲ ಠಾಣೆಯಲ್ಲಿ ದೂರು ನೀಡಲಾಯಿತು.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಜಿಲ್ಲಾ ಸಮಿತಿ ಸದಸ್ಯರಾದ ಅಝೀಝ್ ಕಡಂಬು P.F. I. ಡಿವಿಷನ್ ಸಮಿತಿ ಸದಸ್ಯರಾದ ಮಹಮ್ಮದ್.ಎಮ್. ಸಾಲೆತ್ತೂರ್, ರಹೀಮ್ ಕಂಬಳಬೆಟ್ಟು, P. F. I.ಕಡಂಬು ವಲಯ ಕಾರ್ಯದರ್ಶಿ ಶಹೀದ್ ಮತ್ತು ಸತ್ತಾರ್ ಕಡಂಬು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.