ಕೋಲಾರ ( ವಿಶ್ವಕನ್ನಡಿಗ ನ್ಯೂಸ್ ): – ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷರೂ , ಜಿಲ್ಲೆಯ ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿದ್ದ ಸದಾ ಹಸನ್ಮುಖಿ , ಸ್ನೇಹಜೀವಿ ಆರ್.ಗೋಪಾಲ್ ಅವರ ಪ್ರಥಮ ವರ್ಷದ ಪುಣ್ಯತಿಥಿ ಅಂಗವಾಗಿ ನಗರದ ನಲ್ಲೂರಮ್ಮ ಅನಾಥಾಶ್ರಮದಲ್ಲಿ ಮಕ್ಕಳಿಗೆ ತಿಂಡಿ ನೀಡಿ , ಶ್ರದ್ಧಾಂಜಲಿ ಅರ್ಪಿಸಲಾಯಿತು.
ನಗರದಲ್ಲಿ ಮೊದಲ ಡ್ರೈವಿಂಗ್ ಸ್ಕೂಲ್ ಆರಂಭಿಸಿದ ಕೀರ್ತಿಗೆ ಭಾಜನರಾಗಿದ್ದ ಗೋಪಾಲ್ ಅವರ ಕೋಲಾರಮ್ಮ ಡ್ರೈವಿಂಗ್ ಸ್ಕೂಲ್ ಜಿಲ್ಲೆಯ ಅನೇಕ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿಗೆ ಚಾಲನಾ ತರಬೇತಿ ನೀಡಿದ್ದರು. ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷರಾಗಿದ್ದ ಅವರು ಸಮುದಾಯದ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಆರ್.ಗೋಪಾಲ್ ಅವರನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ , ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ , ಪ್ರಿಯಾ ಪತ್ರಿಕೆಯ ಸಂಪಾದಕರು ಕೋ.ನಾ. ಮಂಜುನಾಥ್ , ಕೋಲಾರ ಕಿರಣ ಪತ್ರಿಕೆಯ ಸಂಪಾದಕರು ಚಾಂದ್ ಪಾಷ ,ಕೋಲಾರ ಕುಸುಮಾ ಪತ್ರಿಕೆಯ ಸಂಪಾದಕರು ವೆಂಕಟೇಶ್ಬಾಬಾ , ಗೋಕುಲ ಮಿತಬಳಗದ ಮುನಿವೆಂಕಟಯಾದವ್ , ಕೃಷ್ಣ , ಮಣಿ , ಚಲಪತಿ , ಯಲ್ಲಪ್ಪ , ಪಿಡಿಓ ನಾಗರಾಜ್ , ಚಂದು , ದಿವಂಗತ ಗೋಪಾಲ್ ಪುತ್ರ ನಿತೇಶ್ ಯಾದವ್ , ಕೃಷ್ಣಮೂರ್ತಿ , ಅಮರನಾಥಸ್ವಾಮಿ.ಗೋಪಾಲಕೃಷ್ಣ , ಡೆಕೋರೇಷನ್ ಶಂಕರ್ , ಸರ್ವೋದಯ , ಕ್ಯಾಪ್ಟನ್ ಮತ್ತಿತರರು ಸ್ಮರಿಸಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.