ಪುತ್ತೂರು (www.vknews.in) : ಕೆಲದಿನಗಳ ಹಿಂದೆ ಕೇಂದ್ರಸರಕಾರದ ವಕ್ತಾರರೊಬ್ಬರು ಪ್ರವಾದಿಯವರ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆಯು ಪ್ರತಿಯೊಬ್ಬ ಮುಸ್ಲಿಮನಿಗೂ ನೋವು ತರುವ ಸಂಗತಿಯಾಗಿದ್ದು,ಮುಸಲ್ಮಾನರ ಧಾರ್ಮಿಕ ಭಾವನೆಗಳ ಮೇಲೆ ಸಮರ ಸಾರಿರುವುದು ಖಂಡನಾರ್ಹ ಎಂದು ಸಮಸ್ತ ಜಂಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಅಭಿಪ್ರಾಯ ಪಟ್ಟಿದೆ.
ಪ್ರವಾದಿಯನ್ನು ನಿಂದಿಸಿ ಕೋಟ್ಯಂತರ ಮುಸಲ್ಮಾನರ ಭಾವನೆಗೆ ನೋವುಂಟು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು.ಭವಿಷ್ಯದಲ್ಲಿ ಆಳುವವರಿಂದ ಇಂತಹ ಬೇಜವಬ್ದಾರಿ ಹೇಳಿಕೆಗಳು ಬಾರದಂತೆ ತಡೆಯಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷರಾದ ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಹಾಗೂ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.