ಆತೂರು (www.vknews.in) : ಸಮುದಾಯದ ಉನ್ನತಿಗೆ ಶಿಕ್ಷಣ ಮುಖ್ಯವಾಗಿದ್ದು ಅದರ ಅಭಿವೃದ್ಧಿಗೆ ಒಗ್ಗಟ್ಟಿನ ಪರಿಶ್ರಮ ಬೇಕೆಂದು ಜಮಾಅತ್ ಗೌರವಾಧ್ಯಕ್ಷರಾದ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳವರು ಸನದುದಾನ ಪ್ರಧಾನ ಮಾಡಿ ಮಾತನಾಡಿದರು.
ಬದ್ರಿಯಾ ಜುಮಾ ಮಸೀದಿ ಇದರ ಅಧೀನ ಸಂಸ್ಥೆಯಾದ ಡಾ|| ಶಾಹ್ ಉಸ್ತಾದ್ ಮೆಮೋರಿಯಲ್ ಬದ್ರಿಯಾ ಮಹಿಳಾ ಶರೀಅತ್ ಕಾಲೇಜು ಇದರ ಮೂರನೇ ವಾರ್ಷಿಕ ಹಾಗೂ ಪ್ರಥಮ ಸನದುದಾನ ಸಮ್ಮೇಳನ ಸುಲ್ತಾನುಲ್ ಹಿಂದ್ ವೇದಿಕೆಯಲ್ಲಿ ದಿನಾಂಕ 6 ಜೂನ್ 2022 ಸೋಮವಾರದಂದು ನಡೆಯಿತು.
ಮಗರಿಬ್ ನಮಾಝಿನ ನಂತರ ನಡೆದ ಸನದು ಸಮಾರಂಭದಲ್ಲಿ ಜಮಾಅತ್ ಅಧ್ಯಕ್ಷರಾದ ಅಹ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಪಾಣಕ್ಕಾಡ್ ಶಮೀರಲಿ ಶಿಹಾಬ್ ತಂಙಳ್ ಸಮಾರಂಭವನ್ನು ಉದ್ಘಾಟಿಸಿದರು.ಸನದು ವಸ್ತ್ರ ಕಾಲೇಜು ಪ್ರಾಂಶುಪಾಲರಾದ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಆತೂರು ವಿತರಿಸಿದರು.
ಜಗತ್ತಿಗೆ ಶಿಕ್ಷಣ ಪರಿಚಯಿಸಿದ ಮುಸ್ಲಿಂ ತಙ್ಞರನ್ನು ಪರಿಚಯಿಸಿ ಬಗ್ಗೆ ಮುಖ್ಯ ಪ್ರಭಾಷಣ ಮಾಡಿದ SKSSF ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಸತ್ತಾರ್ ಪಂದಲ್ಲೂರು, ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ, ಪರಿಹಾರ ಮಾರ್ಗಗಳನ್ನು ಸೂಚಿಸಿದರು.
ಸಮಾರಂಭದಲ್ಲಿ ಅಬ್ದುಲ್ ರಝಾಕ್ ಬಿ.ಕೆ, ಆದಂ ಹಾಜಿ ಪಿಲಿಕುಡೇಲು, ಹಂಝ ಸಖಾಫಿ ಆತೂರು, ಶೌಖತ್ತಲಿ ಫೈಝಿ, ಅಬ್ದುಲ್ ಅಝೀಝ್ ಬಿ.ಕೆ, ಅಬ್ದುಲ್ ಖಾದರ್ ಬಿ.ಆರ್, ಸಿದ್ದೀಕ್ .ಎನ್, ಝಕರಿಯ್ಯಾ ಮುಸ್ಲಿಯಾರ್, ಮುಹಮ್ಮದ್ ಹಾಜಿ ಬಿ.ಕೆ, ಎನ್.ಎ.ಇಸ್ಹಾಕ್, ಪೊಡಿಂಞಿ ನೀರಾಜೆ, ಆದಂ ಹಾಜಿ ಪೂರಿಂಗ, ಮುಹಮ್ಮದ್ ರಫೀಕ್ ಗಂಡಿಬಾಗಿಲು, ಯೂಸುಫ್ ನೀರಾಜೆ, ಫಲುಳುದ್ದೀನ್ ಹೇಂತಾರ್, ಅಬ್ದುಲ್ ಹಮೀದ್ ಕುಂಡಾಜೆ, ಇಸ್ಮಾಯಿಲ್ ಕೆ.ವೈ , ಅಶ್ರಫ್ ಶೇಡಿಕಗುಂಡಿ, ಇಸ್ಮಾಯಿಲ್ ಕುದ್ಲೂರು, ಅನ್ಸಾರ್ ಅಝ್ಹರಿ, ಇಸ್ಮಾಯಿಲ್ ದಾರಿಮಿ, ಜಮಾಅತ್ ಪದಾಧಿಕಾರಿಗಳು ಹಾಗು ಸಂಘ ಸಂಸ್ಥೆಗಳ ನಾಯಕರು ಉಪಸ್ಥಿತರಿದ್ದರು.
ಕೆ.ಯಸ್.ಆಟಕೋಯ ತಂಙಳ್ ಕುಂಬೋಳ್, ಪಾಣಕ್ಕಾಡ್ ಶಮೀರಲಿ ಶಿಹಾಬ್ ತಂಙಳ್, SKSSF ಕೇಂದ್ರ ಸಮಿತಿ ಉಪಾಧ್ಯಕ್ಷ ರಾದ ಅಬ್ದುಲ್ ಸತ್ತಾರ್ ಪಂದಲ್ಲೂರು ಹಾಗು ಆತೂರು ಮುಹಮ್ಮದ್ ಜುನೈದ್ ಜಿಫ್ರಿ ತಂಙಳವರಿಗೆ ಜಮಾಅತ್ ಮಂಡಳಿ ಹಾಗೂ SKSSF ಆತೂರು ಶಾಖೆ ವತಿಯಿಂದ ಸನ್ಮಾನಿಸಲಾಯಿತು. ಸನದು ಪಡೆದ ವಿದ್ಯಾರ್ಥಿನಿಗಳಿಗೆ ಸರ್ಟಿಫಿಕೇಟ್ ಹಾಗೂ ಪುರಸ್ಕಾರ ನೀಡಲಾಯಿತು. ವಿವಿಧ ದಾನಿಗಳಿಂದ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಅಸರ್ ನಮಾಝಿನ ನಂತರ ಶೈಖುನಾ ಶಂಸುಲ್ ಉಲಮಾ (ರ) ಮೌಲೀದ್ ಮಜ್ಲಿಸ್ ಗೆ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಆತೂರು ನೇತೃತ್ವದಲ್ಲಿ ನಡೆಯಿತು. ಶರೀಅತ್ ಮ್ಯಾನೇಜರ್ ಕೆ.ಯಂ.ಯಸ್.ಫೈಝಿ ಕರಾಯ ಸ್ವಾಗತಿಸಿ, ಕಾರ್ಯದರ್ಶಿ ಸಿರಾಜ್ ಬಡ್ಡಮೆ ವಂದಿಸಿದರು. ಕಾರ್ಯಕ್ರಮ ವನ್ನು ರಫೀಕ್ ಗೋಳಿತ್ತಡಿ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.