MSS ಪಕ್ಷದ ದಕ್ಷಿಣ ಭಾರತ ಘಟಕದ ಅಧ್ಯಕ್ಷರಾಗಿ ಧಾರ್ಮಿಕ ವಿದ್ವಾಂಸ ಮುಫ್ತಿ ಅಬ್ದುಸ್ಸಲಾಂ ಖಾದ್ರಿ ನಿಝಾಮಿ ಮುಂಬೈ, ಕಾರ್ಯಾಧ್ಯಕ್ಷರಾಗಿ ಈ. ಬಸವರಾಜು ಬೆಂಗಳೂರು ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಹಾಜಿ ಅಬ್ದುಲ್ ರಹಮಾನ್ ಸುನ್ನೀ ಅಲೀಂ ಶಿರಾ (ಸೆಸ್ಮಾ ರಾಷ್ಟ್ರೀಯ ಅಧ್ಯಕ್ಷರು) & ರಾಜ್ಯ ಪ್ರಧಾನ ಸಂಚಾಲಕರಾಗಿ ಬೆಂಗಳೂರಿನ ಖ್ಯಾತ ಚಿಂತಕ-ಸಾಹಿತಿ, ಪಾದಯಾತ್ರೆ ಖ್ಯಾತಿಯ ಹೆಚ್’ಕೆ ವಿವೇಕಾನಂದ ಆಯ್ಕೆ
ದಕ್ಷಿಣ ಭಾರತದ 6 ರಾಜ್ಯಗಳಲ್ಲಿ ಜಾತ್ಯತೀತ ಪ್ರಾದೇಶಿಕ ಪಕ್ಷಗಳನ್ನು ಚುನಾವಣಾ ಸಂದರ್ಭಗಳಲ್ಲಿ ಬೆಂಬಲಿಸಲು MSS (Maardani Social Service Party) ನಿರ್ಧಾರ
ಸೆಸ್ಮಾ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ
ಹಾಸನ (www.vknews.in) : ಸೆಸ್ಮಾ (ವರದಕ್ಷಿಣೆ ವಿರೋಧಿ & ಸರಳ ವಿವಾಹ ಉತ್ತೇಜನ ಸಂಸ್ಥೆ) ಹಾಗೂ ಎಮ್ಮೆಸ್ಸೆಸ್ (ಮಾರ್ದನಿ ಸಮಾಜ ಸೇವಾ ಪಕ್ಷ) ರಾಜ್ಯ ಮಹಾಸಭೆ & ರಾಷ್ಟ್ರೀಯ ಮುಖ್ಯಸ್ಥರ ಸಭೆಯು ನಗರದ ಶರೀಫ್ ಕಾಲೊನಿಯಲ್ಲಿರುವ ಸೆಸ್ಮಾ ಮುಖಂಡ ಹಾಜಿ ಬಶೀರ್ ಅಹ್ಮದ್ ಅವರ ನಿವಾಸದಲ್ಲಿ ಜರುಗಿತು. ಸೆಸ್ಮಾ ರಾಷ್ಟ್ರೀಯ ಅಧ್ಯಕ್ಷ & MSS ರಾಜ್ಯಾಧ್ಯಕ್ಷ ಅಲ್ಹಾಜ್ ಅಬ್ದುಲ್ ರಹಮಾನ್ ಸುನ್ನೀ ಅಲೀಂ ಶಿರಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಮಹಾಸಭೆಯನ್ನು MSS ದಕ್ಷಿಣ ಭಾರತ ಘಟಕದ ಅಧ್ಯಕ್ಷ ಮುಫ್ತಿ ಅಬ್ದುಸ್ಸಲಾಂ ಖಾದ್ರಿ ನಿಝಾಮಿ ಮುಂಬೈ ಉದ್ಘಾಟಿಸಿದರು. ಸೆಸ್ಮಾ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ, MSS ದಕ್ಷಿಣ ಭಾರತ ಮಂಡಳಿ ಮಹಾಪ್ರಧಾನ ಕಾರ್ಯದರ್ಶಿ & ಮಾರ್ದನಿ ಸಾಮಾಜಿಕ ಧ್ವನಿ ಮಾಸಿಕದ ಪ್ರಧಾನ ಸಂಪಾದಕ ಎ.ಕೆ. ಉಮರುಲ್ ಫಾರೂಖ್ ಬಿಕ್ಕೋಡು, ಹಾಸನ ಸ್ವಾಗತಿಸಿ, ವಿಷಯ ಮಂಡಿಸಿದರೆ, ಸೆಸ್ಮಾ ರಾಜ್ಯ ಮಹಿಳಾ ಘಟಕದ ಕಾರ್ಯನಿರ್ವಹಣಾ ಸಂಚಾಲಕಿ & MSS ರಾಜ್ಯ ಮಹಿಳಾ ವಿಭಾಗದ ಪ್ರಧಾನ ಸಂಚಾಲಕಿ ಕೆಎಸ್ ಅರ್ಚನಾ ಅಮೀನ್ ಹಾಸನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೆಸ್ಮಾ ರಾಜ್ಯ ಮಹಿಳಾ ಘಟಕದ ಪ್ರಧಾನ ಸಂಚಾಲಕಿ & ಎಮ್ಮೆಸ್ಸೆಸ್ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಲೀಲಾವತಿ ಅಶೋಕ್ ಧನ್ಯವಾದಗೈದರು. ಇದಕ್ಕೂ ಮುನ್ನ ನಗರದ ಹಝರತ್ ಗುಜರಾತಿ ಬಾದ್’ಶಾ ದರ್ಗಾ ಸನ್ನಿಧಿಯಲ್ಲಿ ನೂತನ MSS (ಮಾರ್ದನಿ ಸಮಾಜ ಸೇವಾ ಪಕ್ಷ) NGO ಬದಲಿಗೆ ರಾಜಕೀಯ ಪಕ್ಷವಾಗಿ ಮಾರ್ಪಾಡಾಗಿರುವುದನ್ನು ಅಧಿಕೃತವಾಗಿ ಘೋಷಿಸಲಾಯಿತು. ಖಾಝಿ ಅಬ್ದುಲ್ ಸುಬ್ಹಾನ್ ಹಾಸನ ಪ್ರಾರ್ಥನೆಗೈದರೆ, ಎ.ಕೆ. ಉಮರುಲ್ ಫಾರೂಖ್ ಬಿಕ್ಕೋಡು ಉದ್ಘೋಷಿಸಿದರು.
ದಿನಾಂಕ 13-06-2022ನೇ ಸೋಮವಾರದಂದು ಜರುಗಿದ ಹಾಸನ ಮಹಾಸಭೆಯಲ್ಲಿ ಅಂಗೀಕೃತಗೊಂಡ 1 ಡಝನ್ ಪ್ರಮುಖ ನಿರ್ಣಯಗಳು ಇಂತಿವೆ;
1. MSS (Maardani Social Service Party) South India ಘಟಕದ 8 ಮಂದಿ ಮುಖ್ಯ ಪದಾಧಿಕಾರಿಗಳ ವಿವರ ಇಂತಿವೆ. President (ಅಧ್ಯಕ್ಷರು) : Mr. Mufthi Abdul Salaam Qadri Nizami, Mumbai, Maharashtra Secretary-general):(ಮಹಾಪ್ರಧಾನ ಕಾರ್ಯದರ್ಶಿ): Journalist A.K. ಉಮರುಲ್ ಫಾರೂಖ್ ಬಿಕ್ಕೋಡು, ಹಾಸನ Working President (ಕಾರ್ಯಾಧ್ಯಕ್ಷರು): ಈ. ಬಸವರಾಜು, ಬೆಂಗಳೂರು Vice President (ಉಪಾಧ್ಯಕ್ಷರು): Journalist ಆರ್’ಹೆಚ್ ಸಾವರಪ್ಪ ಡೇವಿಡ್ ರಾಯದುರ್ಗಂ, ಅನಂತಪುರ, ಆಂಧ್ರಪ್ರದೇಶ General Secretary (ಪ್ರಧಾನ ಕಾರ್ಯದರ್ಶಿ): ರತೀಶ್ ಇರಿಟ್ಟಿ, ಮುಝಕ್ಕುನ್ನು, ಕಣ್ಣೂರು, ಕೇರಳ Organising Secretary:(ಸಂಘಟನಾ ಕಾರ್ಯದರ್ಶಿ): ಜೆ. ಪ್ರೇಮ್ ಅರಕೋಣಂ, ರಾಣಿಪೇಟೆ, ತಮಿಳುನಾಡು Media In-Charge:(ಮಾಧ್ಯಮ ಉಸ್ತುವಾರಿ): ಅಬ್ದುರ್ರಹ್ಮಾನ್ ವಾಣಪರ್ತಿ, ಮೆಹಬೂಬ್’ನಗರ ಜಿಲ್ಲೆ, ತೆಲಂಗಾಣ ಮಹಿಳಾ ವಿಭಾಗದ ಮುಖ್ಯಸ್ಥೆ (Women’s Wing Chief): ಡಾ. ಗೌಸಿಯಾಬಿ, M.A, B.Ed, ಅದೋನಿ, ಕರ್ನೂಲ್, ಆಂಧ್ರಪ್ರದೇಶ ಮೇಲ್ಕಂಡಂತೆ, ದಕ್ಷಿಣ ಭಾರತದ 6 ರಾಜ್ಯಗಳಿಂದ ತಲಾ 8 ಮಂದಿಗೆ ಮೊದಲ ಹಂತದಲ್ಲಿ ಸ್ಥಾನ ಕಲ್ಪಿಸಲಾಗಿದೆ.
2. MSS (Maardani Social Service Party) ಕರ್ನಾಟಕ ರಾಜ್ಯ ಘಟಕಕ್ಕೆ ಮೊದಲ ಹಂತದಲ್ಲಿ 9 ಮಂದಿ ನಿಯೋಜನೆಗೊಂಡಿದ್ದಾರೆ. ಅಧ್ಯಕ್ಷರಾಗಿ ಹಿರಿತನದ ಆಧಾರದ ಮೇಲೆ ಸೆಸ್ಮಾ ರಾಷ್ಟ್ರೀಯ ಅಧ್ಯಕ್ಷ ಅಲ್ಹಾಜ್ ಅಬ್ದುಲ್ ರಹಮಾನ್ ಸುನ್ನೀ ಅಲೀಂ ಶಿರಾ, ತುಮಕೂರು ಅವರನ್ನು ಆರಿಸಲಾಯಿತು. ಸಾಮಾಜಿಕ ಚಿಂತಕ, ಆಕರ್ಷಕ ಬರಹಗಾರ, ಇತಿಹಾಸದಲ್ಲಿ ಎಂಎ ಸ್ನಾತಕೋತ್ತರ ಪದವಿ ಹೊಂದಿರುವ, ರಾಜ್ಯದಾದ್ಯಂತ ಮ್ಯಾರಥಾನ್ ಕಾಲ್ನಡಿಗೆ ಪಾದಯಾತ್ರೆ ನಡೆಸಿದ ಹೆಗ್ಗಳಿಕೆಯುಳ್ಳ ಬೆಂಗಳೂರಿನ ಯಲಹಂಕದ ಹೆಚ್’ಕೆ ವಿವೇಕಾನಂದ ಪ್ರಧಾನ ಸಂಚಾಲಕರಾಗಿ ಆಯ್ಕೆಗೊಂಡರೆ, ಕಾರ್ಯಾಧ್ಯಕ್ಷರಾಗಿ ಬಿಎಂ ಹೇಮಂತ್ ಕುಮಾರ್ ಬೊಮ್ಮನಕೆರೆ, ಸಕಲೇಶಪುರ, ಮಹಾಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಆದಿಲ್ ಪಾಷಾ ದೊಡ್ಡಬಳ್ಳಾಪುರ, ಸಂಘಟನಾ ಸಂಚಾಲಕರಾಗಿ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಜೀವನ್ ಪೌಲ್ ಡಿ’ಕುನ್ಹೋ & ಮಾಧ್ಯಮ ಉಸ್ತುವಾರಿಯಾಗಿ ಡಾ. ರಾಜಶೇಖರ ಮಠಪತಿ ಧಾರವಾಡ ಆಯ್ಕೆ.
& MSS (ಮಾರ್ದನಿ ಸಮಾಜ ಸೇವಾ ಪಕ್ಷ) ರಾಜ್ಯ ಮಹಿಳಾ ವಿಭಾಗದ ಮುಖ್ಯಸ್ಥರು: ಅಧ್ಯಕ್ಷೆ: ಲೀಲಾವತಿ ಅಶೋಕ್ ತುಮಕೂರು, ಪ್ರಧಾನ ಸಂಚಾಲಕಿ: ಕೆಎಸ್ ಅರ್ಚನಾ ಕೆಎಸ್ ಅಮೀನ್ ಹಾಸನ & ಸಂಘಟನಾ ಸಂಚಾಲಕಿ: ಶ್ವೇತಾ ಗಂಗಾಧರ್ ಬೆಂಗಳೂರು
3. ಎಮ್ಮೆಸ್ಸೆಸ್ ಪಕ್ಷವು ಸದೃಢಗೊಳ್ಳುವವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದೆ, ದಕ್ಷಿಣ ಭಾರತದ 7ರಲ್ಲಿ 6 ರಾಜ್ಯಗಳ ಪೈಕಿ ಆಯಾ ರಾಜ್ಯಗಳಲ್ಲಿ ಪ್ರಬಲವಾಗಿರುವ ಜಾತ್ಯತೀತ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲಿಸಲು ನಿರ್ಧಾರ. ಅದರಂತೆ, ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ, ತಮಿಳುನಾಡಿನಲ್ಲಿ ಡಿಎಂಕೆ, ಮಹಾರಾಷ್ಟ್ರದಲ್ಲಿ ಎನ್’ಸಿಪಿ, ತೆಲಂಗಾಣದಲ್ಲಿ ಟಿಆರ್’ಎಸ್, ಆಂಧ್ರಪ್ರದೇಶದಲ್ಲಿ ವೈಎಸ್’ಆರ್ ಕಾಂಗ್ರೆಸ್ ಹಾಗೂ ಕೇರಳದಲ್ಲಿ ಎಲ್’ಡಿಎಫ್ ಮೈತ್ರಿಕೂಟಕ್ಕೆ ಬೆಂಬಲಿಸಲಿರುವ ಮಾರ್ದನಿ ಸಮಾಜ ಸೇವಾ ಪಕ್ಷ.
4. MSS ಪಕ್ಷದ ಆಕರ್ಷಕ, ಉತ್ತೇಜನಕಾರಿ ಪ್ರೇರಣಾ ವಾಕ್ಯ: “ಜಾರ್ಖಂಡ್’ನಲ್ಲಿ ಪಕ್ಷೇತರ ಶಾಸಕರೊಬ್ಬರು (ಮಧು ಖೋಡಾ) ಅನಿರೀಕ್ಷಿತವಾಗಿ ಮುಖ್ಯಮಂತ್ರಿಯಾಗಿ ಹೊರಹೊಮ್ಮಿರುವ ಇತಿಹಾಸ ದಾಖಲಾಗಿರಬೇಕಾದರೆ, ಕರ್ನಾಟಕದಲ್ಲೇಕೆ ಮುಂದಿನ ದಿನಗಳಲ್ಲಿ MSS ಪಕ್ಷದವರು ಸಿಎಂ ಗದ್ದುಗೆ ಹೊಂದುವ ಮುಖೇನ ಆದರ್ಶ-ನೀತಿಯುತ ಆಡಳಿತದ ಮೂಲಕ ಕರುನಾಡನ್ನು ಸಮಗ್ರ ಕಲ್ಯಾಣಗೊಳಿಸಲು ಸಾಧ್ಯವಾಗಬಾರದು?”
5. MSS ಪಕ್ಷದ ತತ್ವ ಸಿದ್ದಾಂತಗಳು, ಧ್ಯೇಯೋದ್ದೇಶಗಳು, ಚಿಹ್ನೆ, ಧ್ವಜ ಮುಂತಾದವುಗಳನ್ನು ಸಿದ್ದಪಡಿಸುವ ಹೊಣೆಗಾರಿಕೆಯನ್ನು ಎಮ್ಮೆಸ್ಸೆಸ್ ದಕ್ಷಿಣ ಭಾರತ ಘಟಕದ ಮಹಾಪ್ರಧಾನ ಕಾರ್ಯದರ್ಶಿ Journalist ಎ.ಕೆ. ಉಮರುಲ್ ಫಾರೂಖ್ ಬಿಕ್ಕೋಡು ಅವರಿಗೆ ವಹಿಸಲಾಯಿತು.
6. ಇಂದಿನ ಕಾರ್ಯದೊತ್ತಡದ ನಡುವೆ ಆಗಾಗ್ಗೆ ಸಭೆ-ಸಮಾರಂಭಗಳನ್ನು ನಡೆಸುವುದು ಕಷ್ಟಕರವಾಗಿರುವುದರಿಂದ ಹಾಗೂ ಬಹುತೇಕ ಸದಸ್ಯರುಗಳು ಗೈರು ಹಾಜರಾಗುವ ಸಂಭವವಿರುವುದರಿಂದ ಬಹುತೇಕವಾಗಿ ಅಂತರ್ಜಾಲ ಮಾಧ್ಯಮಗಳನ್ನೇ ಬಳಸಿಕೊಂಡು ಪಕ್ಷ-ಸಂಸ್ಥೆಗಳನ್ನು ಬಲಪಡಿಸುವುದು. ಕೇವಲ ಸಮಾವೇಶ & ಮಹಾಸಭೆಗಳನ್ನಷ್ಟೇ ಮೌಖಿಕ ರೂಪದಲ್ಲಿ ಏರ್ಪಡಿಸಬಹುದೆಂದು ತೀರ್ಮಾನಿಸಲಾಯಿತು.
7. ಪ್ರವಾದಿ (ಸ.ಅ)ರವರನ್ನು ನಿಂದಿಸಿರುವ ಇಬ್ಬರು ಬಿಜೆಪಿ ಮುಖಂಡರ ವಿರುದ್ದ SESMA-MSSಗಳ ವತಿಯಿಂದ ಜಂಟಿ ಖಂಡನಾ ನಿರ್ಣಯ ಮಂಡನೆ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಅವರಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ನೀಡುವುದು. ಇವರನ್ನು ಬೆಂಬಲಿಸಿರುವ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಹಾಗೂ ಇತರರಿಗೆ ಕನಿಷ್ಠ 5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸುವುದು. ವಿವಾದಿತ ವ್ಯಕ್ತಿಗಳಿಗೆ ಪರೋಕ್ಷ ಪ್ರೇರಣೆ, ಕುಮ್ಮಕ್ಕು ನೀಡುತ್ತಿರುವ ಹಾಗೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸುತ್ತಿರುವ ಬಿಜೆಪಿಯ ಅಸಹಿಷ್ಣುತಾ-ಆತಂಕಕಾರಿ ನಿಲುವನ್ನು ಖಂಡಿಸಲಾಯಿತು.
8. ಪಠ್ಯ ಪುಸ್ತಕ ಪರಿಷ್ಕರಣೆಯ ಅವಾಂತರಗಳ ವಿರುದ್ಧದ ಪ್ರಗತಿಪರ-ಜಾತ್ಯತೀತ-ಕನ್ನಡಪರ ಸಂಘಟನೆಗಳ ಹೋರಾಟಕ್ಕೆ MSS-SESMAಗಳ ವತಿಯಿಂದ ನೈತಿಕ-ಕ್ರಿಯಾತ್ಮಕ ಬೆಂಬಲ ನೀಡಲು ನಿರ್ಧಾರ
9. ಇತ್ತೀಚೆಗೆ ಅಗಲಿದ ಡಾ. ಅಣ್ಣಾ ಪರಮೇಶ್ ಹಿರಿಯೂರು ಅವರ ಬದಲಿಗೆ SESMA ರಾಜ್ಯ ಹಿರಿಯ ಉಪಾಧ್ಯಕ್ಷ ಹುದ್ದೆಗೆ ನಿಯೋಜನೆಗೊಂಡ ಮಾಜಿ ಪ್ರಧಾನಿಯವರ ಮೊಮ್ಮಗ & ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಶ್ರೀ ಪ್ರಜ್ವಲ್ ರೇವಣ್ಣ
10. SESMA-MSS ಮುಖವಾಣಿ ಮಾರ್ದನಿ ಸಾಮಾಜಿಕ ಧ್ವನಿ ಮಾಸಿಕದ ವಚನ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ ಶ್ರೀ ಮುಗಳಿಕಟ್ಟೆ ಲೋಕೇಶ್ ಕಡೂರು, ಚಿಕ್ಕಮಗಳೂರು ಜಿಲ್ಲೆ ಅವರನ್ನು ನಿಯೋಜಿಸಲಾಯಿತು.*
11. ಕರ್ನಾಟಕ & ಕೇರಳದ 5 ಜಿಲ್ಲೆಗಳಿಗೆ SESMA ಮಹಿಳಾ ಉಸ್ತುವಾರಿಗಳ ನಿಯೋಜನೆ 1. ಧಾರವಾಡ: ಭವಾನಿ ಗೌಡ ಪ್ರಭು, M.A, B.Ed. (ಶಿಕ್ಷಕಿ), ಹುಬ್ಬಳ್ಳಿ 2. ಉಡುಪಿ: ಬದ್ರುನ್ನಿಸಾ ಅಜ್ಮಲ್, ಕಳಿಹಿತ್ಲು, ಶಿರೂರು, ಕುಂದಾಪುರ ತಾಲ್ಲೂಕು 3. ಮಲಪ್ಪುರಂ: ಝೈನಬ ನೌಶಾದ್, ವಲ್ಲುವಂಬ್ರಂ 4. ಕಾಸರಗೋಡು: ಫಾತಿಮ ಆಶೂರ ಇರ್ಶಾದ್ ಪೆರ್ದನೆ, ಶೇನಿ, ಮಾಯಿರೆ 6. ಕಣ್ಣೂರು: ನಸೀಮಾ ಮಶೂದ್, ಮಟ್ಟನ್ನೂರು
12. ಸೆಸ್ಮಾ ಹಾಸನ ಜಿಲ್ಲಾ ಉಸ್ತುವಾರಿಯಾಗಿ ಮಾರ್ದನಿ ಸಾಮಾಜಿಕ ಧ್ವನಿ ಮಾಸಿಕದ ಪೋಷಕ ಜಾಹೀರಾತುದಾರರಾದ ಹಾಜಿ ಅಬ್ದುಲ್ ಗಫ್ಫಾರ್ (ನ್ಯೂಸ್ಟಾರ್) ಅವರನ್ನು ಆರಿಸಲಾಯಿತು. ಹಾಸನ ನಗರ ಸೆಸ್ಮಾ ಗೌರವ ಉಸ್ತುವಾರಿಯಾಗಿ ಹಾಜಿ ಬಶೀರ್ ಅಹ್ಮದ್ ಹಾಗೂ ಉಸ್ತುವಾರಿಯಾಗಿ ನಸೀರುದ್ದೀನ್ MS ಅವರನ್ನು ಆರಿಸಲಾಯಿತು.
ವರದಿ: Journalist A.K ಉಮರುಲ್ ಫಾರೂಖ್ ಬಿಕ್ಕೋಡು, ಹಾಸನ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.