12 ವರ್ಷಗಳ ಹಿಂದೆ ಕಬ್ಬಿಣದ ಕಡಲೆಯಂಹ ಕೆಲಸಕ್ಕೆ ಕೈ ಹಾಕಿದ ವಿಕೆ ನ್ಯೂಸ್ ಬಳಗಕ್ಕೆ ಸೆಲ್ಯೂಟ್..
ನನಗೆ ಈಗಲೂ ನೆನಪಿದೆ ಊರಿನ ವಿಶೇಷಗಳನ್ನು ಹೊತ್ತು ಕೊಂಡು ಬರುವ ಕನ್ನಡ ದಿನಪತ್ರಿಕೆಯನ್ನು ನೋಡಬೇಕಾದರೆ ದುಬೈ ದೇರಾದ ಮಂಗಳೂರು ಸೆಲೂನ್ ಅಥವಾ ಭಟ್ಕಳ್ ರೆಸ್ಟೋರೆಂಟ್ ಗೆ ಭೇಟಿ ನೀಡಬೇಕಾಗಿತ್ತು.
ಆದರೆ ಅಲ್ಲಿ ಕೂಡಾ ಅನಿವಾಸಿ ಕನ್ನಡಿಗರ ದಂಡೇ ಪತ್ರಕ್ಕಾಗಿ ಕಾಯುತ್ತಿತ್ತು, ಕೊನೆಗೆ ಹನ್ನೆರಡು ಪುಟಗಳ ಆರು ತುಂಡು ಹರಿಹಂಚಾಗಿ ಒಬ್ಬೊಬ್ಬರ ಕೈ ಸೇರುತಿತ್ತು! ಅದೂ ಕೂಡಾ ಬರೋಬ್ಬರಿ ಎರಡು ದಿನ ಮುಂಚಿನ ಪತ್ರಿಕೆ, ಡೇಟ್ ಎಕ್ಷೆಪಯರ್ ಎಂದರ್ಥ..
ಇಂತಹ ಸಂದಿಗ್ಗತೆಗೆ ಅನಿವಾಸಿ ಕನ್ನಡಿಗರು ಸಿಲುಕಿದ ಸಮಯದಲ್ಲಾಗಿತ್ತು ಅಂತರ್ಜಾಲದಲ್ಲಿ ‘ವಿಶ್ವ ಕನ್ನಡಿಗ ನ್ಯೂಸ್” ಎಂಬ ಹೆಸರಿನಲ್ಲಿ ದಮನಿತರ ಧ್ವನಿ ಯಾಗಿ ಒಂದು ಪತ್ರಿಕೆ ಲಗ್ಗೆಯಿಟ್ಟದ್ದು, ಅದು ಅನಿವಾಸಿ ಕನ್ನಡಿಗರ ಪಾಲಿಗೆ ಮರುಭೂಮಿಯ ಓಯಸಿಸ್ ಆದ್ದದ್ದು ಸುಳ್ಳಲ್ಲ.
ಅಂತರ್ಜಾಲದಲ್ಲಿ ಅಂತಹದೊಂದು ಪತ್ರಿಕೆ ಆರಂಭ ಮಾಡುವುದು ಅಷ್ಟೊಂದು ಸುಲಭದ ಸಂಗತಿಯಲ್ಲ, ಕಬ್ಬಿಣದ ಕಡಲೆಯಂಹ ತ್ರಾಸದಾಯಕ ಕಾರ್ಯಕ್ಕೆ ಕೈ ಹಾಕಿದ ಸಂಪಾದಕ ಸಿ,ಎಚ್ ಹಮೀದ್ ಕಾವು ಮತ್ತು ಬಳಗಕ್ಕೆ ಸೆಲ್ಯೂಟ್ ಹೇಳಲೇಬೇಕು, ಕಾರಣ ಇಂತಹ ಸಾಹಸಕ್ಕೆ ಧುಮುಕಿದ ಹಲವರು ಕೈ ಸುಟ್ಟುಕೊಂಡು ತೆಪ್ಪಗೆ ಕುಳಿತು ಕೊಂಡದ್ದು ಚರಿತ್ರೆ, ಅದೇ ಸಮಯ ಎಲ್ಲಾ ಅಡೆತಡೆಗಳನ್ನು ಎದುರಿಸಿ ಸಮರ್ಥವಾಗಿ ಹನ್ನೆರಡು ವರ್ಷಗಳನ್ನು ಪತ್ರಿಕೆ ಪೂರ್ತಿಮಾಡಿದ್ದು ಅದೊಂದು ಸಾಹಸವೇ ಸರಿ,
ಅದೇ ರೀತಿ ಈಗೀಗ ಪತ್ರಿಕಾ ಮಾಧ್ಯಮಗಳು ಕಾರ್ಪೊರೇಟ್ ಗಳ ಹಾಗೂ ವಸಾಹತುಶಾಹಿಗಳ ಕೈಗೊಂಬೆಯಾಗಿ ಕಾರ್ಯಾಚರಿಸುತ್ತಿರುವುದು ಸರ್ವೆ ಸಾಮಾನ್ಯವಾಗಿದ್ದರೂ “ವಿಶ್ವ ಕನ್ನಡಿಗ ನ್ಯೂಸ್” ಮಾತ್ರ ದಮನಿತರ ಧ್ವನಿಯಾಗಿಯೇ ಮುಂದುವರಿಯುತ್ತಿರುವುದು ಪ್ರಶಂಸನೀಯ ಸಂಗತಿ.
ಎಲ್ಲಾ ರೀತಿಯ ವಾರ್ತೆಗಳನ್ನು ಸ್ಪಷ್ಟ ಮತ್ತು ನೈಜವಾಗಿ ಬಿತ್ತರಿಸಿ ಎಲ್ಲಾ ಸಂಘ ಸಂಸ್ಥೆಗಳ ವರದಿಗಳನ್ನು ಪ್ರಕಟ ಮಾಡುತ್ತಿರುವುದು ಶ್ಲಾಘನೀಯ, ಅದರಲ್ಲೂ ವಿಶೇಷವಾಗಿ ಗಲ್ಫ್ ರಾಷ್ಟ್ರದ ಅನಿವಾಸಿ ಸಂಘಟನೆಯಾದ ”ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ನ ಎಲ್ಲಾ ಕಾರ್ಯಚಟುವಟಿಕೆಗಳ ವರದಿಗಳನ್ನು ಅತ್ಯುತ್ತಮ ರೀತಿಯಲ್ಲಿ ವರದಿ ಮಾಡಿ ಸಂಘಟನೆಯ ಪ್ರಚಾರ ಎಲ್ಲರಿಗೂ ತಲುಪಿಸುವಲ್ಲಿ ವಿಕೆ ನ್ಯೂಸ್ ಪ್ರಮುಖ ಪಾತ್ರವಹಿಸಿದೆ ಎಂಬುವುದನ್ನು ಸ್ಮರಿಸುತ್ತಾ, ಪತ್ರಿಕೆಗೆ ಮತ್ತು ಸಂಪಾದಕೀಯ ಬಳಗಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಪತ್ರಿಕೆ ಇನ್ನೂ ಕೂಡ ಅಭಿವೃದ್ಧಿಯ ಹೊಸ ಹೊಸ ಮೈಲುಗಲ್ಲುಗಳನ್ನು ದಾಟಲಿ ಎಂದು ಹಾರೈಸುತ್ತೇನೆ.
– ಕಲಂದರ್, ಕಬಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.