ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್) : ತನ್ನ ಗಂಡನ ಮನೆಯಲ್ಲಿ ಬಕ್ರೀದ್ ಹಬ್ಬದ ಸಡಗರದಂದೇ ಅನುಮಾನಾಸ್ಪದವಾಗಿ ಸಾವಿಗೀಡಾದ ಜಂಶೀರ(24) ಎಂಬ ಮಹಿಳೆಯ ಗಂಡ ಇರ್ಫಾನ್ ಎಂಬಾತನ ಪ್ರಾಥಮಿಕ ತನಿಖಾ ವರದಿಯ ವಿಡಿಯೋ ವೈರಲ್ ಆಗಿದೆ.
ಪತ್ನಿ ಮೃತಪಟ್ಟರೂ ಒಂದಿಷ್ಟು ಪಶ್ಚಾತಾಪ ಆತನಲ್ಲಿ ಕಾಣುವುದಿಲ್ಲ, ಪತ್ನಿಗೆ ಏನಾದರೂ ತೊಂದರೆ ಇತ್ತಾ ಎಂಬ ಪೊಲೀಸರ ಪ್ರಶ್ನೆಗೆ ಇರ್ಫಾನ್ ಕೊಡುವ ಉತ್ತರ ಪತ್ನಿಗೆ ಅಸೂಯೆ ಇತ್ತು ಎಂದಾಗಿದೆ. ಇದು ಆತ್ಮಹತ್ಯೆ ಅಲ್ಲ ಕೊಲೆ ಅನ್ನೋದು ನೆರೆ ಹೊರೆಯವರ ಅಭಿಪ್ರಾಯವಾಗಿದೆ.
ಪೊಲೀಸ್ ಅಧಿಕಾರಿಗಳ ತನಿಖೆಯಿಂದ ನಿಜಾಂಶ ಹೊರಬಂದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.