ಮಂಗಳೂರು (www.vknews.in) ; ಇಡೀ ದೇಶವನ್ನೇ ತಲ್ಲಣ ಗೊಳಿಸಿದ್ದ ಗುಜರಾತ್ ಗಲಭೆಯ ಸಂಧರ್ಭದಲ್ಲಿ ನಡೆದ ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣದ ಕುಖ್ಯಾತ ಅಪರಾಧಿಗಳನ್ನು ಬಿಡುಗಡೆ ಗೊಳಿಸಿದ ಗುಜರಾತ್ ಸರಕಾರದ ಕ್ರಮ ಮತ್ತು ಅವರಿಗೆ ಧರ್ಮ ರಕ್ಷಣೆಯ ಸೋಗಿನ ಸಂಘಟನೆಯೊಂದು ಹೂಹಾರ ಹಾಕಿ ಸ್ವಾಗತಿಸಿದ್ದು ದೇಶ ಯಾವ ಕಡೆ ಸಾಗುತ್ತಿದೆ ಎಂಬುದಕ್ಕೆ ದುರಂತ ಸಾಕ್ಷಿಯಾಗಿದೆ.ಇಂತಹ ಅಘಾತಕಾರಿ ಬೆಳವಣಿಗೆಗಳು ದೇಶವನ್ನು ನೈತಿಕ ಅದಃಪತನದತ್ತ ಕೊಂಡೊಯ್ಯಲು ಮಾತ್ರ ಸಹಕಾರಿಯಾಗಲಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.
ನಗರದ ಖಾಸಗಿ ರೆಸಿಡೆನ್ಸಿನಲ್ಲಿ ಸೇರಿದ ಒಕ್ಕೂಟದ ಪಧಾದಿಕಾರಿಗಳ ಸಭೆಯು ಈ ದುರ್ಘಟನೆಯನ್ನು ಕಟುವಾಗಿ ವಿಮರ್ಶಿಸುವುದರೊಂದಿಗೆ ಸರಕಾರವು ಸಂತ್ರಸ್ತೆ ಬಿಲ್ಖೀಸ್ ರ ನಿಯಮಾನುಸಾರ ಇರುವ ಹಕ್ಕನ್ನು ಕಸಿದುಕೊಂಡು ಅನ್ಯಾಯವೆಸಗಿದೆ ಎಂದು ಅಭಿಪ್ರಾಯ ಪಟ್ಟಿದೆ. ಕೇಂದ್ರ ಸಂಸದೀಯ ಮಂಡಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಅಪರಾಧಿಗಳನ್ನು ಕೂಡಲೇ ಜೈಲಿಗೆ ಕಳುಹಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿದೆ.
ಧರ್ಮಗುರು ಮೇಲೆ ಹಲ್ಲೆ ಖಂಡನೀಯ
ಕೊಡಗಿನ ಧರ್ಮಗುರುಗಳಾದ ಹಾರಿಸ್ ಮುಸ್ಲಿಯಾರ್ ಎಂಬವರು ತಮ್ಮ ಪತ್ನಿ,ಮಕ್ಕಳ ಜೊತೆ ವಿರಾಜಪೇಟೆಯಿಂದ ಕಬಡಕ್ಕೇರಿ ಮಸೀದಿಗೆ ತೆರಳುವಾಗ ಕಾಕೋಟುಪರಂಬು ಮೈತಾಡಿ ಜಂಕ್ಷನ್ ನಲ್ಲಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿ, ಪತ್ನಿ, ಮಕ್ಕಳ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಇದು ಅತ್ಯಂತ ಖಂಡನೀಯ ಕೃತ್ಯವಾಗಿದೆ ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.