ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಿಸಲು ಯತ್ನಿಸಿದ 846 ಗ್ರಾಂ ಚಿನ್ನಾಭರಣದೊಂದಿಗೆ ಶಿವಮೊಗ್ಗ ಮೂಲದವರನ್ನು ಬಂಧಿಸಲಾಗಿದೆ. ಶಿವಮೊಗ್ಗ ಅಂಬೇಡ್ಕರ್ ನಗರ ಮೊದಲ ಅಡ್ಡ ರಸ್ತೆಯ ಅಬ್ದುಲ್ ರಹೀಮ್ (27) ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದವರು.
ಚಿನ್ನವನ್ನು ಕೆಮಿಕಲ್ ಬೆರೆಸಿ ಪೇಸ್ಟ್ ತಯಾರಿಸಿ, ನಂತರ ಉಂಡೆಗಳನ್ನಾಗಿ ಮಾಡಿ ದೇಹದೊಳಗೆ ಹಾಗೂ ಜೀನ್ಸ್ ಪ್ಯಾಂಟ್ ನಲ್ಲಿ ಕಳ್ಳಸಾಗಣೆ ಮಾಡಲು ಯತ್ನಿಸಿದ್ದಾರೆ. ವಶಪಡಿಸಿಕೊಂಡ ಚಿನ್ನವು ಭಾರತೀಯ ಮಾರುಕಟ್ಟೆಯಲ್ಲಿ 43.39 ಲಕ್ಷ ರೂ.
ಸೋಮವಾರ ಬೆಳಗ್ಗೆ ದುಬೈನಿಂದ ಬಂದಿಳಿದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಅಬ್ದುಲ್ ರಹೀಮ್ ಒಬ್ಬ ಪ್ರಯಾಣಿಕನಾಗಿದ್ದ. ಕಸ್ಟಮ್ಸ್ ಅಧೀಕ್ಷಕರಾದ ಮೊಹಮ್ಮದ್ ಖಾದರ್, ದೇವೇಂದ್ರ ಪ್ರತಾಪ್ ಸಿಂಗ್, ಮುಖೇಶ್, ಪ್ರತಿಭಾ ಹಾಗೂ ಇನ್ಸ್ ಪೆಕ್ಟರ್ ಹರಿಮೋಹನ್ ಅವರನ್ನೊಳಗೊಂಡ ತಂಡ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.