(www.vknews.in) ; ಜನರು ಹಾಸ್ಯಮಾಡಿ ವ್ಯಂಗ್ಯ ಗೇಲಿ ಮಾಡಿ ಡಿಜೆ ಎಂದು ಬಿರುದು ಕಟ್ಟಿದ ವ್ಯಕ್ತಿ ಅಲ್ಲಾಹನ ಅಪಾರ ಅನುಗ್ರಹದಿಂದ ಪವಿತ್ರ ಉಮ್ರ ಹಾಗೂ ಮುತ್ತು ರಸೂಲರ ಸಂರ್ದಶನದ ಬಾಗ್ಯ ಮುಸ್ತಾಕ್ ಅವರಿಗೆ ದೊರಕಿದೆ. ಅವರು ಊರಿನಿಂದ ಬಂದು ಉಮ್ರ ನಿರ್ವಹಿಸಿ ಮರಳುವ ತನಕ ಎಲ್ಲಾ ಕರ್ಚು ವೆಚ್ಚಗಳು ಸೌದಿ ಪ್ರೀಮಿಯರ್ ಲೀಗ್ ವತಿಯಿಂದ ಭರಿಸಲಾಯಿತು.
ಸೌದಿ ಪ್ರೀಮಿಯರ್ ಲೀಗ್ ಗಾಗಿ ಮುಸ್ತಾಕ್ ಬರುವ ವಿಷಯ ತಿಳಿದಂತೆ ಅದಷ್ಟು ಮಂದಿ ಪ್ರಶ್ನೆ ಮಾಡಿದ್ದರು ಕೆಲವರು ಪ್ರಶಂಶಿಸಿದ್ದರು. ಆದರೆ ಮುಸ್ಸಾಕ್ ಬಾಯಿ ಸೌದಿಗೆ ಬಂದು ಅವರ ಸಂಪೂರ್ಣ ಜೀವನ ಶೈಲಿ ಬದಲಾಯಿತು. ಸೌದಿಗೆ ಬರುವ ವಿಷಯ ದೃಡವಾದಂತೆ ಮನೆಯವರು ಸಂತೋಷದಿಂದ ಕಳುಹಿಕೊಟ್ಟರು. ಇಲ್ಲಿಗೆ ಬಂದಾಗ ಅವರಿಗೆ ಅಲ್ಫಾಹ್ ಮೈದಾನದಲ್ಲಿ ಭರ್ಜರಿ ಸ್ವಾಗತ ನೀಡಲಾಯಿತು. ಮೊದಲ ದಿನ ಅಭಿಮಾನಿಗಳ ಕೋರಿಕೆ ಮೇರಗೆ ಒಂದು ಹಾಡಿಗೆ ಅವಕಾಶ ಕಲ್ಪಿಸಲಾಯಿತು. ಒಂದು ವಾರ ಮುಗಿದಂತೆ ಮುಸ್ತಾಕ್ ಅವರನ್ನು ಉಮ್ರ ಕಳುಹಿಸಲಾಯಿತು. ಉಮ್ರ ಬಸ್ ಹತ್ತುವ ಮುಂಚಿತವಾಗಿ ಅವರಿಗೆ ಅವರ ಬದುಕಿನ ಹಾಗು ಹೊಗುಗಗಳ ಬಗ್ಗೆ ಅರಿವು ಮೂಡಿಸಲಾಯಿತು. ವಿಷಯ ಎಲ್ಲವೂ ಮನದಟ್ಟಾದಂತೆಯೇ ಸಮಾಜಕ್ಕೂ ಹಿತೈಶಿಗಳಿಗೂ ನಾನು ಮುಸ್ತಾಕ್ ಅಹ್ಮದ್ ಕಾರ್ಕಳ ಎಂದೇ ಸಂದೇಶ ರವಾನಿಸಿದರು. ಅಲ್ಲಾಹನ ಅಪಾರ ಅನುಗ್ರಹದಿಂದ ಅವರು ಉಮ್ರ ಹಾಗೂ ಮದೀನ ಭೇಟಿ ಬಹಳ ಅಚ್ಚು ಕಟ್ಟಾಗಿ ಮುಗಿಸಿದರು.
ಜುಬೈಲ್ ನ ವಿವಿದ ಕಂಪೆನಿಯ ವ್ಯವಹಾರ ಸಲಹೆಗಾರರು, ಹಿತೈಶಿಗಳು ಹಾಗೂ ಅಭಿಮಾನಿಗಳು ನೀಡಿದ ಹಣದಿಂದ ಒಂದು ಸಾವಿರದ ಒಂಬೈನೂರ ಐವತ್ತು ರಿಯಾಲ್ ಹಣದಲ್ಲಿ ಮುಸ್ತಾಕ್ ಅವರ ತಾಯಿಗೆ ಕಿವಿಯೋಲೆ ಹಾಗೂ ಉಂಗುರ ಖರೀದಿಸಿ ನೀಡಲಾಯಿತು. ಅದಲ್ಲದೆ ಒಂದು ಲಕ್ಷದ ಎಂಭತ್ತೆಂಟು ಸಾವಿರದ ಹಣ ಅವರ ತಾಯಿಯ ಕೈಯಲ್ಲಿ ನೀಡಿಲಾಯಿತು ಹಾಗೂ ಅವರ ತಮ್ಮನ ಖಾತೆಗೆ ಹತ್ತು ಸಾವಿಕ ರೂ ಜಮೆಯೂ ಮಾಡಲಾಯಿತು (1950 SR Gold and 198000 Rupees). ಸೌದಿಯಿಂದ ನಿರ್ಗಮನದ ವೇಳೆ ಅವರ ಮನೆಯವರಿಗಾಗಿ ಡ್ರೆ ಫ್ರೂರ್ಟ್ಸ್ ಹಾಗೂ ಚಾಕಲೆಟು ಇನ್ನಿತರ ವಸ್ತು ನೀಡಲಾಯಿತು.
ಸೌದಿ ಪ್ರೀಮಿಯರ್ ಲೀಗ್ ಗಾಗಿ ಬಂದಾಗ ಅದೆಷ್ಟೊ ಜನರು ಪ್ರಶಂಸಿದರು. ಇನ್ನೂ ಕೆಲವರು ಅವರವರ ವೈಯುಕ್ತಿಕ ಅಭಿಪ್ರಾಯ ಹೊರ ಹಾಕಿದರು. ಇದೆಲ್ಲವನ್ನು ಲೆಕ್ಕಿಸದೆ ಎಸ್ಪಿಎಲ್ ಕಮೀಟಿ ತೆಗೆದ ನಿರ್ಧಾರವನ್ನು ನಿಭಾಯಿಸುವ ಕಡೆಗೆ ಗಮನ ಹರಿಸಿತು. ಯಾವ ಬರಹಗಳಿಗೂ ಉತ್ತರಿಸದೆ ತಾವು ತೆಗೆದ ದೃಡ ನಿರ್ದಾರವನ್ನು ಪೂರೈಸಿಯೇ ಬಿಟ್ಟರು. ಡಿಜೆ ಮುಸ್ತಾಕ್ ಎಂಬ ವ್ಯಕ್ತಿಯನ್ನು ಮುಸ್ತಾಕ್ ಅಹ್ಮದ್ ಕಾರ್ಕಳ ಎಂಬ ಸಂದೇಶ ಸಮಾಜಕ್ಕೆ ರವಾನಿಸಿದರು. ಇದರೆಲ್ಲದರ ಹಿಂದಿನ ಶ್ರಮ ಹೆಳಿ ಮುಗಿಸಲಾಗದು. ಇಷ್ಟಲ್ಲ ಎಸ್ಪಿಎಲ್ ನ ವತಿಯಿಂದ ಮಾಡಲಾಯಿತು. ಇನ್ನು ಮುಂದಕ್ಕಿರುವ ಅವರ ಜೀವನ ಶೈಲಿ ಅವರ ಕೈಯಲ್ಲಿದೆ. ಮುಂದಕ್ಕೆ ಆವರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುವ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.