(www.vknews.in) ಬದಿಯಡ್ಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸಜ್ಜನ ವ್ಯಕ್ತಿ ಪುತ್ತೂರು ಮೂಲದ ಡಾ : ಕೃಷ್ಣ ಮೂರ್ತಿ ಯವರ ಶವವು ಉಡುಪಿ ಜಿಲ್ಲೆಯ ಕುಂದಾಪುರದ ಕುತಲ್ಲೂರು ಎಂಬಲ್ಲಿ ರೈಲ್ವೆ ಹಳಿಯ ಪಕ್ಕ ಪತ್ತೆಯಾಗಿದ್ದು, ಇವರ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ, ಇದು ಕೊಲೆಯೇ ಅಥವಾ ಆತ್ಮಹತ್ಯೆಯೇ ಎಂಬುದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕಾಗಿದೆ, ಆದ್ದರಿಂದ ಈ ಪ್ರಕರಣದ ತನಿಖೆಯನ್ನು ಸಿ ಐ ಡಿ ಗೆ ಒಪ್ಪಿಸ ಬೇಕೆಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ,
ಡಾ : ಕೃಷ್ಣಮೂರ್ತಿಯವರ ಸಹೋದರರಾದ ಡಾ :ರಾಮಮೋಹನ್ ಹಾಗೂ ಡಾ :ಅರವಿಂದರವರು ಪುತ್ತೂರಿನ ವೈದ್ಯರಾಗಿದ್ದು,ಇವರಿಬ್ಬರು ಸರಳ ಸಜ್ಜನಿಕೆಯ ವ್ಯಕ್ತಿಗಳಾಗಿದ್ದು, ತಮ್ಮ ಪ್ರಾಮಾಣಿಕ ಸೇವೆಯಿಂದ ಪುತ್ತೂರಿನಲ್ಲಿ ಜನಪ್ರಿಯ ವೈದ್ಯರಾಗಿ ಹೆಸರು ವಾಸಿಯಾಗಿರುತ್ತಾರೆ
ಇವರ ಒಡಹುಟ್ಟಿದ ಸಹೋದರರಾಗಿರುವ ಡಾ : ಕೃಷ್ಣಮೂರ್ತಿಯವರು ಕೂಡ ವೈದ್ಯರಾಗಿ ಜನಪ್ರಿಯರಾಗಿದ್ದವರು ಇವರ ಈ ದುರಂತ ಸಾವು ನಮಗೆಲ್ಲರಿಗೂ ಅಘಾತ ತಂದಿರುತ್ತದೆ, ಇವರ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡುವಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಮ್ಮದ್ ಅಲಿ ಯವರು ಸರಕಾರವನ್ನು ಕೋರಿರುತ್ತಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.