(www.vknews.in) ; ದಿನಾಂಕ24.03.2023 ರಂದು ಅಡಕ್ಕಲ್ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ನಮ್ಮ ಹೆಮ್ಮೆಯ ಹಿರಿಯ ವಿದ್ಯಾರ್ಥಿನಿಯಾದ ಕು. ಮಾನ್ಯ ಇವರು ವಿಶೇಷ ಮಕ್ಕಳ ಕ್ರೀಡಾಕೂಟದಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿ ನಮ್ಮ ಶಾಲೆಯ ಹಾಗೂ ಊರಿನ ಹೆಸರಿಗೆ ಕೀರ್ತಿ ತಂದಿರುತ್ತಾರೆ.ಅವರ ಈ ಸಾಧನೆಯನ್ನು ಗುರುತಿಸಿ ನಮ್ಮ ಶಾಲೆಯ ಎಸ್ ಡಿ ಎಮ್ ಸಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘವು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭಕ್ಕೆ ಹಿರೆಬಂಡಾಡಿ ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀಯುತ ಸದಾನಂದ ಶೆಟ್ಟಿ ಹಾಗೂ ಶ್ರೀಮತಿ ಶಾಂಭವಿ,ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಿಣಿತಾಕ್ಸಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀಯುತ ರಮಾನಂದ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಹಸೈನಾರ್ ಪಿ, ಪ್ರಧಾನ ಕಾರ್ಯದರ್ಶಿ ಯಾದ ಶ್ರೀ ಹೈದರ್ ಅಡೆಕ್ಕಲ್, ಸಹ ಕಾರ್ಯದರ್ಶಿ ಶ್ರೀ ಸನತ್ ಶೆಟ್ಟಿ, ಎಸ್ ಡಿ ಎಮ್ ಸಿ ಯ ಉಪಾಧ್ಯಕ್ಷರು ಹಾಗೂ ಸದಸ್ಯರು, ಶಾಲಾ ಶಿಕ್ಷಕರು, ಪೋಷಕರು, ವಿದ್ಯಾರ್ಥಿ ಸಮುದಾಯ ಹಾಗೂ ಊರಿನ ಹಿರಿಯರು ಸಾಕ್ಷಿ ಯಾದರು. ಈ ಸಂದರ್ಭದಲ್ಲಿ ಶಾಲೆಯಲ್ಲಿ ವಿಶೇಷ ಭೋಜನೆಯಡಿಯಲ್ಲಿ ಬಾಳೆ ಎಲೆಯಭೋಜನ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ನಿರ್ವಹಣೆ- . ಇಸ್ತಿಫಾ ಫಾತಿಮ (6ನೇ),ಸ್ವಾಗತ- ಮು.ಹಾಶಿಂ ಕೆ(5ನೇ), ಫಾಯಿಜ್ ವಂದನಾರ್ಪಣೆ ಗೈದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.