(www.vknews.in) ; ದೇಶ ಬಿಟ್ಟು ಪರಾರಿಯಾದ ನಿರ್ಧಿಷ್ಟ ಸರ್ ನೇಮ್ ಹೊಂದಿರುವ ವ್ಯಕ್ತಿಗಳ ಬಗ್ಗೆ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಆಡಿದ ಮಾತನ್ನು ಜನಾಂಗ ನಿಂದನೆ ಎಂಬ ಆರೋಪ ಹೊರಿಸಿ ದಾಖಲಿಸಿದ ಪ್ರಕರಣದಲ್ಲಿ ರಾಹುಲ್ ಗಾಂಧಿಯನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದ ಬೆನ್ನಲ್ಲಿಯೇ ಅವಸರವಾಗಿ ಕೇಂದ್ರದ ಸ್ಪೀಕರ್ ರಾಹುಲ್ ಗಾಂಧಿಯ ಲೋಕ ಸಭಾ ಸ್ಥಾನವನ್ನು ಅನರ್ಹ ಗಳಿಸಿರುವ ಕ್ರಮ ಈ ದೇಶದಲ್ಲಿ ಪ್ರಜಾ ಪ್ರತಿನಿಧಿತ್ವ ದ ಮೇಲೆ ನಡೆಸಿದ ಸವಾರಿ ಆಗಿದೆ.
ಈ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಓರ್ವ ದೇಶೀಯ ಮಟ್ಟದ ರಾಜಕೀಯ ನಾಯಕನ ರಾಜಕೀಯ ಅಸ್ತಿತ್ವವನ್ನು ಇಲ್ಲದಾಗಿಸುವ, ಪ್ರತಿನಿಧಿತ್ವ ಹಕ್ಕಿನ ಸಂಪೂರ್ಣ ಉಲ್ಲಂಘನೆ ಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಇದು ಖಂಡನೀಯ. ರಾಜಕೀಯವಾಗಿ ಸ್ಪರ್ಧಿಸಿ ವಿಜಯಿಯಾದ ಓರ್ವ ನಾಯಕನನ್ನು ಕಾನೂನಿನ ನೆಪದಲ್ಲಿ ಅನರ್ಹ ಗೊಳಿಸಿದ ಕ್ರಮ ನೈತಿಕವಾಗಿ ಖಂಡಿಸುವಂತಾಗಿದೆ. ರಾಹುಲ್ ಗಾಂಧಿಯ ಅಂದಿನ ಹೇಳಿಕೆ ರಾಜಕೀಯ ಪ್ರೇರಿತ ಹೇಳಿಕೆ ಹೊರತು ಇನ್ನೇನಲ್ಲ. ಆದರೆ ಫ್ಯಾಸಿಸ್ಟ್ ಚಿಂತನೆಗಳಿಗೆ ಅದು ನಿಂದನೆಯಾಗಿ ಪರಿಗಣನೆ ಆದದ್ದು ವಿಪರ್ಯಾಸ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.