ದುಬೈ (www.vknews.in) : ಹೃಸ್ವ ಸಂದರ್ಶನಾರ್ಥ ದುಬೈಗೆ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಕ್ಯಾರಿಯರ್ ಗೈಡೆನ್ಸ್ ಮೂಲಕ ನೂರಾರು ಮಕ್ಕಳ ಬಾಳಿಗೆ ಬೆಳಕನ್ನು ಚೆಲ್ಲಲು ಪ್ರಯತ್ನಿಸುತ್ತಿರುವ ಜನಾಬ್ ರಫೀಕ್ ಮಾಸ್ಟರ್ ಆತೂರ್ ರವರಿಗೆ ಆತೂರ್ ವೆಲ್ಫೇರ್ ಕಮಿಟಿ ದುಬೈ ಇದರ ವತಿಯಿಂದ ದಿನಾಂಕ 27/03/2024 ನೇ ಬುಧವಾರದಂದು ದುಬೈ ಅಲ್ ಬರ್ಶಾ ಸೈನ್ಸ್ ಪಾರ್ಕ್ ನಲ್ಲಿರುವ ದ ಯಸ್ ಹೋಟೆಲ್ ನಲ್ಲಿ ಇಫ್ತಾರ್ ಮತ್ತು ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮಕ್ಕೆ ಆತೂರ್ ವೆಲ್ಫೇರ್ ಕಮಿಟಿ ಇದರ ಮುಖ್ಯ ಉಪದೇಶಕ ಜನಾಬ್ ಬದ್ರುದ್ದೀನ್ ಹೆಂತಾರ್ , ಗೌರವಾದ್ಯಕ್ಷರಾದ ಜನಾಬ್ ಬದ್ರುದ್ದೀನ್ ಅಬೂಬಕ್ಕರ್ ಕುಂಡಾಜೆ, ಅದ್ಯಕ್ಷರಾದ ಜನಾಬ್ ಬಿ. ಕೆ ಇಕ್ಬಾಲ್ , ಉಪಾದ್ಯಕ್ಷರಾದ ಜನಾಬ್ ಆನ್ವರ್ ಆತೂರ್ ( ಎಂ. ಡಿ ಆತೂರ್ ಈವೆನ್ಟ್ಸ್ ) ಪ್ರಧಾನ ಕಾರ್ಯದರ್ಶಿ ಜನಾಬ್ ತಾಹೀರ್ ಹೆಂತಾರ್, ಕೋಶಾಧಿಕಾರಿ ಜನಾಬ್ ಇಬ್ರಾಹಿಂ ಅಬೂಬಕ್ಕರ್ ಕುಂಡಾಜೆ, ಸಮಿತಿ ಪ್ರಮುಖರಾದ ಜನಾಬ್ ಝುಬೈರ್ ಬಿ ಕೆ , ಜನಾಬ್ ನಾಸಿರ್ ಬಿ.ಕೆ, ಜನಾಬ್ ಶಂಶೀರ್ ಸಿ ಕೆ , ಜನಾಬ್ ಸಾಬಿತ್ ಎ.ಯಸ್ , ಜನಾಬ್ ನೌಫಾಲ್ ಹೆಂತಾರ್ ಮೊದಲಾದವರು ಉಪಸ್ಥಿತರಿದ್ದರು .
ಇಫ್ತಾರ್ ಬಳಿಕ ಹೃಸ್ವ ರೂಪದಲ್ಲಿ ಕಾರ್ಯಕ್ರಮವನ್ನು ಸಂಯೋಜಿಸಲಾಯಿತು. ಸ್ವಾಗತವನ್ನು ಜನಾಬ್ ಇಬ್ರಾಹಿಂ ಅಬೂಬಕ್ಕರ್ ರವರು ಕೋರಿದರು.ಈ ಸಂದರ್ಭ ರಫೀಕ್ ಮಾಸ್ಟರ್ ರವರ ಬಗ್ಗೆ ವ್ಯಕ್ತಿ ಪರಿಚಯ ನೀಡಿ ಅವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು. ಬಳಿಕ ಉದ್ಘಾಟನೆಯನ್ನು ಜನಾಬ್ ಬದ್ರುದ್ದೀನ್ ಹೆಂತಾರ್ ರವರು ನಿರ್ವಹಿಸಿದರು.ಈ ಸಂದರ್ಭ ಆತೂರಿನ ಹಿರಿಮೆಯನ್ನು ದೇಶ ವಿದೇಶಗಳಲ್ಲಿ ಪಸರಿಸಲು ಮತ್ತು ತನ್ನದೇ ಆದ ವಿಶೇಷ ಜ್ಞಾನದಿಂದ ನೂರಾರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಕ್ಯಾರಿಯರ್ ಗೈಡೆನ್ಸ್ ತರಬೇತಿ ನೀಡುತ್ತಿರುವ ಜನಾಬ್ ರಫೀಕ್ ಮಾಸ್ಟರ್ ರವರ ಪರಿಶ್ರಮವನ್ನು ಕೊಂಡಾಡಿದರು. ಕೈತುಂಬಾ ಸಂಬಳ ದೊರಕುವ ಸರಕಾರಿ ಉದ್ಯೋಗವನ್ನು ಬಿಟ್ಟು ಜನಸೇವೆಯಿಂದ ನೆಮ್ಮದಿ ಕಾಣುತ್ತಿರುವ ರಫೀಕ್ ಮಾಸ್ಟರ್ ರವರ ವಿಶೇಷ ಗುಣವನ್ನು ಹೊಗಳಿದರು.
ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಅತಿಥಿಯಾಗಿ ಆಗಮಿಸದ್ದ ಜನಾಬ್ ರಫೀಕ್ ಮಾಸ್ಟರ್ ರವರ ಬಾಲ್ಯ ಮತ್ತು ವಿದ್ಯಾಭ್ಯಾಸ ಆತೂರಿನಲ್ಲೇ ನಡೆದಿದ್ದುದರಿಂದ ಎಲ್ಲರೂ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಈ ಸಂದರ್ಭ ಆತೂರ್ ವೆಲ್ಫೇರ್ ಕಮಿಟಿ ದುಬೈ 1996 ರಿಂದ 2024 ರ ವರೆಗಿನ ಧೀರ್ಘ ಸುಮಾರು 28 ವರ್ಷಗಳಿಂದ ಆತೂರಿನ ಬದ್ರಿಯಾ ಜುಮಾ ಮಸೀದಿ ಮತ್ತು ಮುಹಿಯ್ಯಿದ್ದೀನ್ ಜುಮಾ ಮಸೀದಿಯ ಜಮಾಅತ್ ಪರಿಸರದಲ್ಲಿ ಮಾಡಿದ ಸಮಾಜ ಸೇವೆಯನ್ನು ವಿವರಿಸಿ ಹೇಳಿದರು. ಸಾಮಾಜಿಕ , ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಆತೂರ್ ವೆಲ್ಫೇರ್ ಕಮಿಟಿ ದುಬೈ ಯಿಂದ ಉತ್ತಮ ಸೇವೆಯನ್ನು ಕಾಣಿಕೆ ನೀಡಲು ಸಾಧ್ಯವಾಗಿದೆ ಎಂದು ಹೇಳುತ್ತಾ ಅದಕ್ಕಾಗಿ ಸಹಕರಿಸುತ್ತಿರುವ ನಮ್ಮ ಪರಿಸರದ ಯುವಕರ ಸಹಕಾರವನ್ನು ಈ ಸಂದರ್ಭ ಕೊಂಡಾಡಿದರು.
ಅಲ್ಲದೆ ಆರಂಭ ಕಾಲದಲ್ಲಿ ಇದಕ್ಕಾಗಿ ಶ್ರಮಿಸಿ ಈಗ ತಾಯ್ನಾಡಿನಲ್ಲಿರುವ ಎಲ್ಲಾ ಸಹೋದರರ ಸಹಕಾರವನ್ನು ನೆನಪಿಸಿದರು. ಬಳಿಕ ಅದ್ಯಕ್ಷರಾದ ಜನಾಬ್ ಬಿ ಕೆ ಇಕ್ಬಾಲ್ ರವರು ಮಾತನಾಡಿ ರಫೀಕ್ ಮಾಸ್ಟರ್ ರವರ ವಿಶೇಷ ಗುಣ ಸ್ವಭಾವಗಳನ್ನು ಹೊಗಳಿ ಮಾತನಾಡಿದರು. ಈ ಸಂದರ್ಭ ಇಫ್ತಾರ್ ವ್ಯವಸ್ಥೆಯನ್ನು ಏರ್ಪಡಿಸಿದ ಜನಾಬ್ ಆನ್ವರ್ ಆತೂರ್ ರವರಿಗೆ ಕೃತಜ್ಞತೆ ಅರ್ಪಿಸಿದರು.
ಬಳಿಕ ಜನಾಬ್ ರಫೀಕ್ ಮಾಸ್ಟರ್ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಆತೂರ್ ವೆಲ್ಫೇರ್ ಸಮಿತಿ ಕಳೆದ 28 ವರ್ಷಗಳಿಂದ ಜನಸೇವೆಯಲ್ಲಿ ನಿರತರಾಗಿದ್ದುದನ್ನು ಶ್ಲಾಘಿಸಿ ಇದು ನಮ್ಮ ಊರಿನ ಯುವಕರ ಮಾನವವೀಯತೆಯ ಮೌಲ್ಯವನ್ನು ಎತ್ತಿ ತೋರಿಸುತ್ತದೆ. ಅದೆಷ್ಟೋ ಜನರು ಏನನ್ನೂ ಮಾಡದೆ ಕೊನೆಗೆ ವಿಷಾದ ವ್ಯಕ್ತಪಡಿಸುವುದು ನಮ್ಮ ಗಮನಕ್ಕೆ ಬರುತ್ತದೆ. ಆದರೆ ಆತೂರ್ ವೆಲ್ಫೇರ್ ಕಮಿಟಿಯ ಸಹೋದರರು ಈ ವಿಷಯದಲ್ಲಿ ಭಾಗ್ಯವಂತರು ಮತ್ತು ಹೆಮ್ಮೆ ಪಡುವ ಕೆಲಸಗಳಿಂದ ಅಲ್ಲಾಹನಿಂದ ಪುಣ್ಯ ಮತ್ತು ಜನ ಸಾಮಾನ್ಯರಿಂದ ದುಆ ಎರಡನ್ನೂ ಸಂಪಾದಿಸಿದ್ದಾರೆ ಎಂದು ಹೊಗಳಿ ಮಾತನಾಡಿದರು. ಅವರ ಜೀವನದಲ್ಲಿ ನಡೆದ ಕೆಲವು ಅನುಭವಗಳನ್ನು ಹಂಚಿಕೊಂಡು ಮಾಡಿದ ಸನ್ಮಾನಕ್ಕೆ ಕೃತಜ್ಞತೆ ಅರ್ಪಿಸಿದರು. ಬಳಿಕ ಆತೂರ್ ವೆಲ್ಫೇರ್ ಕಮಿಟಿಯ ಉಪಾದ್ಯಕ್ಷ ಜನಾಬ್ ಆನ್ವರ್ ಆತೂರ್ ರವರ ಸೇವೆ ಮತ್ತು ಸಹಕಾರವನ್ನು ಪರಿಗಣಿಸಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಜನಾಬ್ ತಾಹಿರ್ ಹೆಂತಾರ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.