(ವಿಶ್ವ ಕನ್ನಡಿಗ ನ್ಯೂಸ್)ದಲಿತರ ಧ್ವನಿ ದಲಿತರ ನೋವಿಗೆ ಹಾಡಾಗಿ ಊರು ಕೇರಿಗಳ ಸುತ್ತಿ ನನ್ನ ಜನಗಳ ಹರುಷಕ್ಕೆ ಕವಿತೆಯಾದ ಡಾ. ಸಿದ್ದಲಿಂಗಯ್ಯ ಅಣ್ಣನವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಾವಪೂರ್ಣವಾಗಿ ಈ ಕವಿತೆ ಸಮರ್ಪಿಸುವೆ
ಕಾಣದಾಯಿತು ಸಾವಿರ ನದಿಗಳು ಕೇಳದಾಯಿತು ಹಸಿವಿನ ಗೋಳು ನನ್ನ ಜನಗಳ ಹೇಳಿಗೆಗೆ ಕವಿತೆಯಾದ ಇವರು ನನ್ನ ಜನಗಳ ಬದುಕಿಗೆ ಬರಹವಾದರಿವರು
ಸಾವಿರ ನದಿಗಳು ಕಣ್ಣೀರಿಟ್ಟವು ಕೋಟಿ ದಲಿತರ ಧ್ವನಿ ಕೂಗುತ್ತಿಹವು ನನ್ನ ಜನಗಳ ಕ್ರಾಂತಿಕಾರಕನ ಎಲ್ಲೆಂದು. ಹುಡುಕುತ ಕಾಂತಿ ಧ್ವನಿಯ ಜನರಿಂದು
ಅಂದಿನ ಕವಿತೆ ರಾಶಿಗಳು ಜನರ ಕೂಗುತಲಿತ್ತು ನಮ್ಮ ದಲಿತರ ನೋವೇನೆಂದು ಹೇಳುತಲಿತ್ತು ಬರೆಯುವ ಕವಿತೆಗಳು ಬೆಂಕಿ ಚೆಂಡಿನಂತೆ ದಲಿತರ ಮನಸುಗಳ ಅಸನಾಗಿಸಿವೆಯಂತೆ
ಸುಡುತ್ತಿದ್ದವು ಶೋಷಣೆಯಲ್ಲಿ ನನ್ನ ಜನಗಳು ಹಗಲು ರಾತ್ರಿ ಕಣ್ಣೀರು ತೊಳೆದರು ನನ್ನ ಜನಗಳು ಚಾಟಿಯೇಟಂತೆ ಬಿರುಸು ಬಾಣಗಳು ನನ್ನವರು ದಿನ ಕೂಲಿಗೆ ಬೆಂದ ನೊಂದರು ನನ್ನ ಜನರು
ಭೋರ್ಗರೆವ ಮಳೆ ಹನಿಯಂತೆ ತೊರೆಗಳು ತೂರತ್ತ ಹಾರುತ್ತ ಹಿಡಿದ ದಲಿತ ಹಾಡುಗಳು ನನ್ನಜನರ ನೋವುಗಳು ಪಂಜುಗಳಾಗಿರು ಬೆಳಕನ್ನು ಕೊಡುವ ಸೂರ್ಯನ ಹುಡುಕುವರು
ನನ್ನವರ ದೇಹದಲ್ಲಿ ಸುರಿವ ನೋವಿನ ಬೆವರು ಪದಗಳ ಬರೆವ ಪೆನ್ನಿನ ಮಸಿಯಾಗುವುದು ನನ್ನ ಜನಗಳು ದಿನವು ಅನ್ನಕ್ಕೆ ದುಡಿವರು ತುತ್ತು ಕೂಳಿಗೆ ಮಣ್ಣು ಸೈಜು ಗಲ್ಲು ಹೊತ್ತವರು
ನ್ಯಾಯವಿಲ್ಲದ ಸ್ವಾತಂತ್ರ್ಯ ಯಾರಿಗೆ ಬಂತು ದೌರ್ಜನ್ಯ ದಬ್ಬಾಳಿಕೆ ಬಡವರನ್ನು ಕೊಂದಿತು ನನ್ನ ಅಕ್ಕ ತಂಗಿಯರ ರಕ್ಷಣೆಯ ಕೂಗು ಎದೆಯ ಒಳಗಿನ ನೋವಿನ ಕವಿತೆಯ ಕೂಗು
ರಚನೆ:- ಜಿ ಟಿ ಆರ್ ದುರ್ಗ. ಬಂಗಾರಪೇಟೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.