ಆ ಎರಡು ಸುದ್ದಿಗಳು ಬಹಳಷ್ಟು ಕಾಡಿದವು.
(www.vknews.com) : ಬಡವರಾದರೂ ಪರಿಶುದ್ಧ ಕಾಬಾಲಯವನ್ನು ದರ್ಶಿಸಬೇಕೆಂಬ ಅದಮ್ಯ ತುಡಿತದಿಂದ ಹಲವು ವರ್ಷಗಳಿಂದ ಸಂಗ್ರಹಿಸಿಟ್ಟ ಹಣ.ಆದರೆ,ಇಂದು ಮನುಕುಲವನ್ನೇ ಕಾಡುವ ಭಯಾನಕ ಪರಿಸ್ಥಿತಿಯಲ್ಲಿ ತನ್ನ ಹಜ್ ಯಾತ್ರೆಯ ಕನಸನ್ನು ತ್ಯಜಿಸಿ ಆ ಹಣದಲ್ಲಿ ತನ್ನ ಕುಟುಂಬದಲ್ಲಿ, ನೆರೆಹೊರೆಯಲ್ಲಿ ಸಂಕಷ್ಟಕ್ಕೀಡಾದವರಿಗೆ ಆಹಾರಪದಾರ್ಥಗಳನ್ನು ನೀಡಲು ತೀರ್ಮಾನಿಸಿರುವುದು….ನಿಜಕ್ಕೂ ಪ್ರಶಂಸನೀಯ.ಹಜ್ ಯಾತ್ರೆಯ ಪುಣ್ಯ ಅವರಿಗೆ ಖಂಡಿತ ಲಭ್ಯ.
“ನೀಯ್ಯತ್ ಗೆ ತಕ್ಕ ಬರ್ಕತ್ “ಎಂಬಂತೆ ಅವರ ಮುಂದಿನ ಹಜ್ ಯಾತ್ರೆಯ ವೆಚ್ಚಗಳನ್ನು ಭರಿಸಲು ಪಾಣಕ್ಕಾಡ್ ಸೈಯ್ಯದ್ ಕುಟುಂಬದವರೇ ಮುಂದೆ ಬಂದಿರುವುದು ಗೂಡಿನಬಳಿಯ ಆ ಸಾಮಾನ್ಯ ವ್ಯಕ್ತಿಗೈದ ಅಸಾಮಾನ್ಯ ಕಾರ್ಯಕ್ಕೆ ತಕ್ಷಣದ ಪ್ರತಿಫಲ ದೊರೆತಂತಾಯಿತು.
ಆ ಕುಬೇರನ ಆ ಮನೆ ಕಂಡಾಗ ಯಾರೂ ದಿಗಿಲುಗೊಳ್ಳಬಹುದು.ಕೋಟಿಗಳ ಸುರಿದು ನಿರ್ಮಿಸಿದ ಬಾರೀ ಗಾತ್ರದ ಭವ್ಯ ಬಂಗಲೆ.
ಕೋಟಿಗಳ ಒಡೆಯನಾದ ದುಬಾಯಿಯಲ್ಲಿದ್ದ ಕೇರಳದ ಆ ಉದ್ಯಮಿ ಜೀವನ ಶಾಶ್ವತ ಎಂದು ಭಾವಿಸಿ ಅರಮನೆಯಂತಹ ಮನೆಯನ್ನು ನಿರ್ಮಿಸಿಕೊಂಡ.ಅದರೆ, ಜೀವನದಲ್ಲಿ ಸುಖಿಸಲಾಗದೆ ಹೋದ.ಕೊನೆಗೆ ದುರಂತ ಅಂತ್ಯವನ್ನು ಕಂಡ.ಆತನ ಬಂಗಲೆಯಂಥ ಮನೆ ಅಣಕಿಸುತ್ತಿತ್ತು.
ಲೈಫು ಇಷ್ಟೇನೆ……!
ಹೃದಯವಂತಿಕೆಯನ್ನು ತೋರಿದ ಕೂಲಿಕಾರ್ಮಿಕ ಸರ್ವರ ಪ್ರಶಂಸಗೆ ಪಾತ್ರರಾದರೆ,ಭೂಮಿಯಲ್ಲೇ ಸ್ವರ್ಗ ಕಾಣಲೆಂದು ಕೋಟಿಗಳ ಬಂಗಲೆ ನಿರ್ಮಿಸಿದಾತ ಬದುಕು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ.
ಬಡತನ ಶಾಪವೂ ಅಲ್ಲ.ಸಿರಿತನ ವರವೂ ಅಲ್ಲ.ದಾರಿದ್ರ್ಯದಲ್ಲಿ ಸಹನೆ,ಶ್ರೀಮಂತಿಕೆಯಲ್ಲಿ ಉದಾರತೆ ತೋರಿದವರು ನಿಜವಾದ ವಿಜಯಿಗಳು.
ಯಾಕೆಂದರೆ, ಬಡತನ, ಸಿರಿತನಗಳಿಗೆ ಆ ಸೃಷ್ಟಿಕರ್ತನದೇ ಒಡೆತನ.
✍ ಹೈದರ್ ಆಲಿ ಐವತ್ತೊಕ್ಲು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.