(www.vknews.com) :
1. ಲೋಕದ ದಿಗಿಲುಗಳಿಗೆ ದಗ್ಗೆಂಡು ಹೊತ್ತಿಸು ಲೋಕಕಲ್ಯಾಣದ ಬೆಂಕಿ, ಹಸುಗೂಸುಗಳ ಶಿಶುಗಳು, ಹೆಣ್ಣುಕೂಸುಗಳಿಗೆ ಯಾವ ಪಾಡು ಕಾಡದಿರುವಂತೆ ಮಾಡಬಾರದೆ ನೀ ಎನ್ನ ಕೋರಿಕೆ ಮನ್ನಿಸಿ ಕಾಡುಮಲ್ಲಿಕಾರ್ಜುನ.
2. ಚಿಂತೆಯಲಿ ಕೊರಗುವ ಮನ ಅನ್ಯರ ಕಣ್ಣೀರಿಗೆ ಕರಗುವ ಮನ ಕಷ್ಟಗಳ ತಾಳಲಾರದೆ ಮರುಗುವ ಜನ, ಎಣಿಸೆಣಿಸಿ ಕಳೆವ ದಿನ. ಹಂತಕೆ ನೀನಿಟ್ಟ ಅಂತ್ಯವ ಯಾರಾದರೂ ನೆನೆಸಿರಲುಂಟೆ ಕಾಡುಮಲ್ಲಿಕಾರ್ಜುನನ ಚಿತ್ತದಂತೆ.
3. ಕರ್ತವ್ಯವೆಂಬುದೇ ತಂದೆ, ನಿರ್ವಹಣೆಯೇ ತಯಿ, ತಾಯಿ-ತಂದೆಯೇ ನೀನಾಗಿ, ಗಂಜಿಗೆ ಗೊತ್ತುಮಾಡಿರುವಷ್ಟನೇ ಅಂಜದೆ ಹೀರುವೆ. ಚಿರದಾನಿ ನಿನ್ನಹೊರತು ಯಾರೊಂದಿಗೂ ಬೇಡದ ಸ್ವಾಭಿಮಾನಿ ಬದುಕಾಗಿಸು ಕಾಡುಮಲ್ಲಿಕಾರ್ಜುನ.
4. ತುತ್ತು ಅನ್ನದ ಹಸಿವೆಯಲ್ಲಾ, ಬದುಕ ನಡೆಸುವ ಇರ್ಷೆಯಲ್ಲಾ, ಒಲಿದವರ ಕಿತ್ತುತಿಂದು ಕೊಲ್ಲುವ ಬದಲಾಗುತ್ತಲೇ ಇರುವ ಕಾಲಮಾನವ ನಿಭಾಯಿಸಲಾರದೆ ಹೊರಳುವ ಸಾಮಾನ್ಯ ನಾನಿನ್ನು ಅಸಾಮಾನ್ಯ ನನ್ನ ಕಾಡುಮಲ್ಲಿಕಾರ್ಜುನ.
5. ಮಾಯೆಯೋ ನಿಜವೋ ನಾನೆಂಬುದು ದಿಟ ಅಹಂ ಆಗಿ ಸೆಟೆದದ್ದು ದಿಟ ಬಯಲೆಂದು ಹಿಡಿಯಹೋದರೆ, ಬೆಟ್ಟವಾಯಿತು ಬೆಟ್ಟವ ಹತ್ತ ಹೋದರೆ, ಹುತ್ತವಾಗಿಸುತ್ತಿ ಸೆಣೆಸಿತು. ನಿನ್ನತ್ತ ಮನ ನೆಲೆನಿಂತ ಮೇಲೆ ಕರುಣೆಯ ಬೆಳಕು ಚೆಲ್ಲಿ ಬೆಂಗಡೊಳು ಹೂ ಅರಳಿ ಕಾಡುಮಲ್ಲಿಕಾರ್ಜುನನ ಸಿರಿಪಾದಕೆ ಅರ್ಪಿತವಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.