ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ನ್ಯಾಯಾಂಗ ವ್ಯವಸ್ಥೆಯ ಏರುಪೇರಿನಲ್ಲಿ, ದಿಕ್ಕು ಬದಲಾಯಿಸುತ್ತಿರುವ ವ್ಯಾಘ್ರ ಚಿಂತನೆಯ ನಪುಂಸಕ ರಾಜಕೀಯದಲ್ಲಿ, ಪತ್ರಿಕೋದ್ಯಮವೆಂಬ ಕರಾಳ ಕೈಗಳು ದೇಶವನ್ನು ಯಾವತ್ತು ಆಳಲು ತೊಡಗಿತ್ತೋ ಅಂದು ದೇಶದ ಸಂವಿಧಾನಕ್ಕೆ ಯಾವುದೇ ಮಹತ್ವವಿಲ್ಲ ಎಂಬ ಮಾನಸಿಕತೆ ಅಕ್ಷರಸ್ತರಿಂದ ಹಿಡಿದು ಅನಕ್ಷರಸ್ಥರಿಗೂ ಮನಸ್ಸಿನಲ್ಲಿ ಹುದುಗಿಯಾಗಿದೆ…
ಭ್ರಷ್ಟ ನೀತಿಗೆದುರಾಗಿ ಹೇಗೆ ಹೋರಾಡಬಲ್ಲಿರಿ ಎಂಬ ಪ್ರಶ್ನೆಗೆ ಸಮಾಜದ ಮುಂದೆ, ಅಲ್ಪ ಸಂಖ್ಯಾತ ವರ್ಗದ ಮುಂದೆ ಉತ್ತರವಿಲ್ಲ!!!.. ಏಕೆಂದರೆ ನ್ಯಾಯಯುತವಾಗಿ ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಿ ನೀಡಿದ ಏಳು ನೂರಕ್ಕೂ ಅಧಿಕ ಕೇಸುಗಳು ಬರೀ ಕಸದ ತೊಟ್ಟಿಗೆ ಸೇರಿದವು… ಇನ್ನು ಯಾವ ವ್ಯವಸ್ಥೆಗೆ ಕಾಯಲಿ ಎಂದು ಇಂದು ಜನರೇ ಭ್ರಷ್ಟ ನೀತಿಯೊಂದಿಗಿನ ಹೋರಾಟಕ್ಕೆ ಸ್ವಂತ ಪ್ರಾಣವನ್ನೂ ಬಲಿಯರ್ಪಿಸಿ ಮುಂದಾಗಿದ್ದಾರೆ…
ಆದರೆ ಜನರು ಕಾನೂನನ್ನು ಕೈಗೆತ್ತಿಕೊಂಡಾಗ ಇಷ್ಟು ದಿನ ಇರದೇ ಹೋಗಿದ್ದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಅನುಕಂಪವು ಕೆಲವೊಂದು ನಾಮಾರ್ಧ ಚಿಂತಕರಲ್ಲೂ, ಕಪಟ ಜಾತ್ಯತೀತವಾದಿ ರಾಜಕೀಯ ಧುರೀಣರಲ್ಲೂ ಕಟ್ಟೆಯೊಡೆದಿದ್ದು ದುರಂತವೇ ಸರಿ !!” ನ್ಯಾಯ ಕೊಡಿ ನ್ಯಾಯ ಕೊಡಿ ಎಂದು ಲಕ್ಷಾಂತರ ಪತ್ರಗಳು ಎಲ್ಲಾ ಪೊಲೀಸ್ ಸ್ಟೇಷನ್ ಗಳಲ್ಲೂ ತಿಂಗಳುಗಟ್ಟಲೆ ಅಲೆದಾಡಿದ್ದು ಇದೇ ಜಾತ್ಯಾತೀತವಾದಿಗಳು ಮರೆತು ಹೋದಂತಿದೆ.. ಹತ್ತು ವರುಷಗಳ ಹಿಂದಿನ ಒಂದು ಇತಿಹಾಸವನ್ನು ತಿರುಚಿ ನೋಡುವುದಾದರೆ, ಕರ್ನಾಟಕದ ಸಹಿತ ದೇಶದೆಲ್ಲೆಡೆ ಕೆಲವೊಂದು ಕೋಮುವಾದಿ ತತ್ವಗಳ ನಡುವೆ ಬೆಂದು ಹೋದ ಹಲವಾರು ಘಟನೆಗಳು ಇಂದಿಗೂ ನಮ್ಮ ಮನಸ್ಸಿನಾಳದಲ್ಲಿ ಕಾಡ್ಗಿಚ್ಚಿನಂತೆ ಬೇರೂರಿ ನಿಂತಿದೆ, ಆದರೂ ಯಾವನೇ ಒಬ್ಬ ಕಾನೂನನ್ನು ಕೈಗೆತ್ತಿಕೊಂಡಿರಲಿಲ್ಲ, ಯಾರನ್ನೂ ಆಕ್ರಮಿಸಲು ಹೋಗಿರಲಿಲ್ಲ, ಭಯಭೀತರಾಗಿದ್ದ ಅಲ್ಪ ಸಂಖ್ಯಾತ ಸಮಾಜದ ನಡುವೆ ಭಯಮುಕ್ತ ಭಾರತವೆಂಬ ಧ್ಯೇಯ ವಾಕ್ಯದೊಂದಿಗೆ ಮೊಳಕೆಯೊಡೆದು ಇಂದು ಹೆಮ್ಮರವಾಗಿ ಕೋಮುವಾದಿ ತತ್ವಗಳನ್ನು ತಮ್ಮದೇ ನ್ಯಾಯಯುತವಾದ ಸಿದ್ದಂತಗಳೊಂದಿಗೆ ಹಿಮ್ಮೆಟ್ಟಿಸುವಷ್ಟು ಬಲಿಷ್ಠ ವಾಗಿ ಬೆಳೆದು ನಿಂತಾಗ, ಎದೆಯಲ್ಲಿ ನಡುಕವೆಂಬುದು, ಭ್ರಷ್ಟ ನ್ಯಾಯಾಂಗ ವ್ಯವಸ್ಥೆಯಲ್ಲೂ, ಹಲವಾರು ವರ್ಷಗಳಿಂದ ಕಪಟ ಜಾತ್ಯಾತೀತ ನಾಟಕ ಕಂಪನಿ ನಡೆಸುತ್ತಿದ್ದ ನಾಮಾರ್ಧ ರಾಜಕೀಯ ನಾಯಕರಲ್ಲೂ ಮೂಡುವುದು ಸಹಜಾನೆ !!!!!…
ನ್ಯಾಯಕ್ಕಾಗಿನ ಹೋರಾಟದಲ್ಲಿ, ನ್ಯಾಯ ನಿರಾಕರಣೆಯ ಪರಿಸ್ಥಿಯಲ್ಲಿ ಜನರು ಉದ್ರೇಕಗೊಳ್ಳುವುದು ಇದೇ ಮೊದಲಲ್ಲ, ಆದರೆ ಅಲ್ಪ ಸಂಖ್ಯಾತರಾದ ಮುಸಲ್ಮಾನ್ ಸಮುದಾಯ ಇದೇ ಮೊದಲು ಎನ್ನಬಹುದು, ಬೆಂಗಳೂರಿನ ಘಟನೆಗೆ ಸಂಭಂದಿಸಿದಂತೆ, ಪ್ರವಾದಿ ನಿಂದನೆ ಆರೋಪದಲ್ಲಿ ಆ ಕೋಮುವಾದಿಯನ್ನು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದರೆ, ಮುಸಲ್ಮಾನರ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಪ್ರವಾದಿ ಪೈಗಂಬರರ ಹೆಸರಿನಲ್ಲಿ ಬೆಂಗಳೂರು ಗಲಭೆ ನಡೆಯದಿತ್ತೋ ಏನೋ !!!.
ಈ ಗಲಭೆಯು ಮೊದಲೇ ನಡೆದಂತಹ ಷಡ್ಯಂತ್ರವೆಂಬಂತೆ ಚಿತ್ರೀಕರಿಸಿದ ನಾಲಾಯಕ್ ನಾಯಕರಿಗೂ , ಮಾಧ್ಯಮಗಳಿಗೂ ತಮ್ಮ ಮುಂದೆ ಬಹಿಷ್ಕರಿಸಲು ಸಿಕ್ಕಿದ್ದು ಪಿ ಎಫ್ ಐ ಮತ್ತು SDPI ಎನ್ನುವುದೇ ದೊಡ್ಡ ದುರಂತ….. ಈ ಹೇಳಿದ ಸಂಘಟನೆಗಳು ಈ ಮೊದಲು ನನ್ನ ವಿಮರ್ಶನೆಯ ಬರವಣಿಗೆಗಳಿಗೆ ಬಲಿಯಾಗಿದ್ದವು, ಕಾರಣ ನಾನು ಗೌರವಿಸುತ್ತಿದ್ದ, ಕಾರ್ಯಾಚರಿಸುತ್ತಿದ್ದ ನನ್ನ ಸಂಘಟನೆಗಳು ಎದುರುಹಾಕಿಕೊಂಡ ಒಂದೇ ಕಾರಣಕ್ಕೆ ನಾನೂ ಬಲವಾಗಿ ನಿಷೇದಿಸಿದ್ದೆ….
ರಾಜಕೀಯವಾಗಿ ಒಂದು ಪಕ್ಷದ ಗುಲಾಮರಾಗಿ ಕಾರ್ಯಾಚರಿಸಲಾರೆ ಎಂದು ಯಾವತ್ತು ಮಾನವರಿಕೆಯಾಯಿತೋ ಅಂದು ತಿಳಿಯಿತು, ಇದು ಜಾತ್ಯತೀತತೆಯಲ್ಲ, ಬರೀ ಗುಲಾಮಗಿರಿತನ ಅನ್ನೋದು… SDPI ಎಲ್ಲಿಯವರೆಗೆ ಬೆಳೆಯುತ್ತೋ ಅಲ್ಲಿಯವರೆಗೆ ವೋಟ್ ಬ್ಯಾಂಕ್ ಅಸಾಧ್ಯ ಎಂಬುವುದನ್ನು ಮನಗಂಡ ಕೆಲವೊಂದು ಜಾತ್ಯತೀತ ರಾಜಕೀಯ ಪಕ್ಷಗಳು, ಅಲ್ಪ ಸಂಖ್ಯಾತರ ಹೋರಾಟದ ಕಿಚ್ಚನ್ನು ಆರಿಸುವ ದುರುದ್ದೇಶದೊಂದಿಗೆ ಕೋಮುವಾದಿ ಪಕ್ಷಗಳ ಅದೇ ಅಜೆಂಡಾ ವನ್ನು ತನ್ನಲ್ಲೂ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ, ಅದಕ್ಕಾಗಿ ಕಂಡು ಕೊಂಡ ಮಾರ್ಗವಾಗಿದೆ SDPI / PFI ನಿಷೇಧ !!!!
ನಮ್ಮ ಮೌನ ನಮ್ಮನ್ನೇ ಸುಡಬಲ್ಲದು, ಇನ್ನೂ ಮುತ್ತಾತನ ಚಿಂತನೆಯಲ್ಲೇ ಕಾಲ ಕಳೆಯದೆ ಮುಂದಿನ ಪೀಳಿಗೆಯಾದರೂ ಜಾತ್ಯತೀತತೆಯೆಂಬ ನಾಟಕಕ್ಕೆ ಬಲಿಯಾಗದಿರಲಿ, ಎಂಬ ಕಿರು ಸಂದೇಶದೊಂದಿಗೆ, “ಸರ್ವೇ ಜನ ಸುಖಿನೋಭವಂತು” ಎಂದು ಸಮಾಜಕ್ಕಾಗಿ, ಅಭಿವೃದ್ಧಿಗಾಗಿ ಪಣ ತೊಟ್ಟಿರುವ ಕಾಪಟ್ಯವಿಲ್ಲದ, ಹೆಚ್ಚೇನೂ ಇತಿಹಾಸವೂ ಇಲ್ಲದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಯ ಜೊತೆ ಗೆ ಕೈಜೋಡಿಸಿ… ಕಾರಣವಿಷ್ಟೇ ಜೊತೆ ನಿಂತರೆ ಕೈಬಿಡಲಾರರು ಎಂಬ ಅಛಲವಾದ ವಿಶ್ವಾಸ !!!!!
-ಸಿದ್ದೀಕ್ ಶರವು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.