(www.vknews.com) : ಸುಲ್ತಾನ್ ಮುರಾದ್ -V ಉಸ್ಮಾನಿಯಾ ಸಾಮ್ರಾಜ್ಯದ 33ನೆಯ ಸುಲ್ತಾನ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. {Sign خليل سراج}
ಕಾಕತಾಳೀಯ ಎಂಬಂತೆ ನನಗೆ ಆಶ್ಚರ್ಯವಾದ ಸಂಗತಿ ಎಂದರೆ, ಈ ಫ್ರೀ ಮೇಸನ್ (ಫ್ರೀ ಮೇಸನ್ ಬಗ್ಗೆ ವಿವರವಾಗಿ ಚಾಪ್ಟರ್ ೧ ರಲ್ಲಿ ತಿಳಿಸಿದ್ದೇನೆ) ನ ಉನ್ನತ ಪದವಿಗೆ ”’33 ಡಿಗ್ರಿ”’ ಅಂತಾರೆ ಗ್ರೇಟ್ ಗ್ರ್ಯಾಂಡ್ ಮಾಸ್ಟರ್ ಎಂದು ಹೇಳಬಹುದು, ಸುಲ್ತಾನ್ ಮುರಾದ ಕೂಡ 33 ನೆಯ ಸುಲ್ತಾನ್, ಮತ್ತು ಮೊದಲ ಒಟ್ಟೋಮನ್ ಫ್ರೀ ಮೇಸನ್ ಮೆಂಬರ್ , ಈ ಫ್ರೀ ಮೇಸನ್ ಗೆ ಸೇರೂದು ಅಂದ್ರೆ ಆತ್ಮವನ್ನು ಶೈತಾನ್ ಗೆ ಒಪ್ಪಿಸುದೂ ಅಂತ ಅರ್ಥ, ಒಟ್ಟೋಮನ್ ಶತ್ರುಗಳಾದ ಪಾಶ್ಚಾತ್ಯ ದೇಶಗಳಲ್ಲಿ ‘ಅರ್ಧ ಒಟ್ಟೋಮನ್ ಸಾಮ್ರಾಜ್ಯ ಗೆದ್ದ ಖುಷಿ’ 1876 ಮೇ, ಹಲವಾರು ಒಪ್ಪಂದಗಳ ಮೂಲಕ ಒಟ್ಟೋಮನ್ ಎಂಬ ದೈತ್ಯ ಸಾಮ್ರಾಜ್ಯವನ್ನು ದುರ್ಬಲ ಗೊಳಿಸಲು ಬ್ರಿಟಿಷ್, ಫ್ರಾನ್ಸ್, ರಷ್ಯಾ , ಫ್ರೀ ಮೇಸನ್ ಮೂಲಕ ಸಂಚಿನ ಯೋಜನೆ ರೆಡಿ ಮಾಡುತ್ತದೆ.
ಈ ಬ್ರಿಟಿಷರ ಪಿತೂರಿ ಯಾರಿಗೆ ತಾನೇ ಗೊತ್ತಿಲ್ಲ, ಮಿರ್ ಸಾದಿಕ್ ರಂತಹ “ರಾಜ್ಯ ದ್ರೋಹಿ” ಗಳ ಮೂಲಕ ಕುತಂತ್ರ ರಚಿಸುವ ಶೈಲಿ, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಅಪ್ಪಟ ದೇಶ ಭಕ್ತ, ವೀರ, ಹಝ್ರತ್ ಟಿಪ್ಪು ಸುಲ್ತಾನ್ ತನ್ನ ತಾಯಿ ನಾಡಿಗಾಗಿ ಹೋರಾಡಿ ಹುತಾತ್ಮರಾದರು, ನಿಮಗೆಲ್ಲ ಗೊತ್ತೇ ಇದೆ ಈ ವಿಷಯ, ಅಂದು ಮೊತ್ತ ಮೊದಲ ಬಾರಿಗೆ ಕ್ರೂರ ಬ್ರಿಟಿಷರಿಗೆ ಇಡೀ ಭಾರತ ಗೆದ್ದ ಖುಷಿ, ಕಾರಣ “ಅರಣ್ಯದಲ್ಲಿ ಹುಲಿಯೇ ಇಲ್ಲ ಅಂದ ಮೇಲೆ ನರಿಗಳೇ ಹುಲಿಗಳು,” ಅವರಿಗೆ ಸಪೋರ್ಟ್ ಮಾಡಲು ಅಶ್ರಫ್ ಶಾ, ಮಿರ್ ಆಲಂ ರಂತಹ ಚಿಕ್ಕ ಚಿಕ್ಕ ಪುಡಿ ರಾಜರುಗಳು ಇದ್ದವು, ದೇಶ ದ್ರೋಹಿ ಗಳು, ಬ್ರಿಟಿಷರ ಚಮ್ಚಗಳಿಗೆ ಕೊನೆಗೆ ಸಿಕ್ಕಿದ್ದು ಬರೀ ಕೊರಂಟಿ (ನಮ್ಮ ಊರಲ್ಲಿ ಇಂತಹ ಪ್ರಯೋಗ ಸಹಜ, ಕೊರಂಟಿ ಅಂದ್ರೆ ಮಾವಿನ ಒಳಗೆ ಇರ್ತವೆ ಅಲ್ವಾ ಅದರ ಬೀಜ)…. ಇದೇ ಕುತಂತ್ರ ಒಟ್ಟೋಮನ್ ಗೂ ರೂಪಿಸುತ್ತಾರೆ ಬ್ರಿಟಿಷರು.
ಒಟ್ಟೋಮನ್ ಪ್ರಜೆಗಳಿಗೆ ಸುಲ್ತಾನ್ ಯಾರೇ ಇರಲಿ ತುಂಬಾ ಪ್ರೀತಿ ಮತ್ತು ಗೌರವ, ರಾಜ್ಯಕ್ಕೊಸ್ಕರ ಪ್ರಾಣ ಕೊಡಲು ಹಿಂಜರಿಯದ ಜನಗಳೆ ಜಾಸ್ತಿ ಇದ್ದರು, ಒಂದು ರಾಜ್ಯನ್ನ ನಾಶ ಮಾಡಬೇಕಾದರೆ ಬರೀ ಅರಮನೆ ಯನ್ನ ಮಾತ್ರ ದುರ್ಬಲ ಮಾಡಿದರೆ ಸಾಲದು ಅಂತ ಫ್ರೀ ಮೇಸನ್, ಬ್ರಿಟೀಷ್, ಮತ್ತು ಪಾಶ್ಚಾತ್ಯ ಶಕ್ತಿ ಗಳಿಗೆ ಗೊತ್ತಿತ್ತು, ಪ್ರಜೆಗಳ ಯೋಚನೆ ಬದಲಾಗಬೇಕು, ಹಲವಾರು ಯೋಜನಗಳನ್ನು ರೂಪಿಸುತ್ತಾರೆ, ಮುಸ್ಲಿಮರ ಹದೀಸ್ ಗ್ರಂಥವಾದ “ಬುಖಾರಿ ಷರೀಫ್” ನಲ್ಲಿ ಬದಲಾವಣೆ ಮಾಡಿ ಹಂಚಿದ್ದು ಉಲ್ಲೇಖವಿದೆ, ಒಟ್ಟೋಮನ್ ಶಾಲೆಗಳಿಗೆ ಹೋಗಿ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಬ್ರೈನ್ ವಾಶ್ ಮಾಡಲು ಪ್ರಯತ್ನಿಸಿದ್ದು ಉಂಟು.
ಈ ಎಲ್ಲಾ ಘಟನೆ ಗುಪ್ತ ದಳ ಮತ್ತು ಆತ್ಮೀಯ ಗೆಳೆಯರ ಮೂಲಕ ಯುವರಾಜ ಅಬ್ದುಲ್ ಹಮೀದ್ ಗೆ ತಿಳಿಯುತ್ತದೆ, ಇದರ ಹಿಂದಿರುವ ಶಕ್ತಿಗಳ ಬಗ್ಗೆ ವಿಷಯ ಶೇಖರಿಸಿ, ತಮ್ಮ ಗುರು ವೃಂದಕ್ಕೆ ವಿಷಯ ತಲುಪಿಸುತ್ತಾರೆ, ಈ ಒಟ್ಟೋಮನ್ ರಾಜ ಮನೆತನಕ್ಕೆ ಒಂದು ವಿಶೇಷತೆ ಇದೆ, ಪಾರಂಪರಿಕ “ಸೂಫಿ ಸಂತರ ಸಂಘ” (ಬಿಳಿ ಗಡ್ಡದಾರಿಗಳು or white Beard people) ಯಾವತ್ತೂ ಬೆನ್ನೆಲುಬಾಗಿ ನಿಂತಿರುವ ಕಾರಣ , ಒಬ್ಬ ಸಾಮಾನ್ಯ ಯೋಧನ ಮಗ (ಸುಲ್ತಾನ್ ಉಸ್ಮಾನ್ ಬೇ) 1299 ರಲ್ಲಿ, ಇಷ್ಟು ದೊಡ್ಡ ಸಾಮ್ರಾಜ್ಯಕ್ಕೆ ಬುನಾದಿ ಹಾಕಲು ಸಾಧ್ಯ ವಾಯಿತು, ಇದರ ವಿವರ ಮುಂದಿನ ಕೆಲವು ಚಾಪ್ಟರ್ ನಲ್ಲಿ ವಿವರವಾಗಿ ಬರೆಯುತ್ತೇನೆ, انشا الله
ಯುವರಾಜ ಹಮೀದ್ ಆಧ್ಯಾತ್ಮಿಕತೆಯಲ್ಲಿ ತುಂಬಾ ಆಸಕ್ತಿ ಉಳ್ಳವರು, ತನ್ನ ಬಾಲ್ಯದಲ್ಲಿ ಹೆಚ್ಚಿನ ಕಾಲ ಧರ್ಮ ಗುರು, ಸೂಫಿ ಸಂತರ ಸಹವಾಸ ಇತ್ತು, ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ, ಅಬ್ದುಲ್ ಹಮೀದ್ ಒಬ್ಬ ಪಳಗಿದ ಬಡಗಿ (ಕಾರ್ಪೆಂಟರ್) ನಮ್ಮ ದೇಶದಲ್ಲಿ ಬಡಗಿ ವೃತ್ತಿ ಒಂದು ಜಾತಿಗೆ ಸೀಮಿತವಾಗಿದೆ, ಯಾವ ಕೆಲಸವೂ ಕೀಳಲ್ಲ ಎಂಬುದನ್ನು “ರಾಜಕುಮಾರ ಅಬ್ದುಲ್ ಹಮೀದ್” ಲೋಕಕ್ಕೆ ಸಂದೇಶ ನೀಡಿದ್ದಾರೆ, ಒಟ್ಟೋಮನ್ ನ ಹೆಚ್ಚಿನ ಎಲ್ಲಾ ರಾಜಕುಮಾರರು, ರಾಜ ವಿಧ್ಯೆ, ಖಡ್ಗ, ಬಿಲ್ವಿದ್ಯೆ, ಶಿಕ್ಷಣ ಹೊರತು ಕೆಲವು ಇತರ ಪ್ರತಿಭೆ ಹೊಂದಿದ್ದರು,ಎಲ್ಲದಕ್ಕೂ ಮಿಗಿಲಾಗಿ ಸುಲ್ತಾನ್ ಅಬ್ದುಲ್ ಹಮೀದ್ ಒಬ್ಬ ಅಪ್ಪಟ “ಆಶಿಖಿ ರಸೂಲ್” ಆಗಿದ್ದರು, ಮುಂದಿನ ಚಾಪ್ಟರ್ ಗಳಲ್ಲಿ ಕೆಲವು ರೋಚಕ ವಿಷಯಗಳು, ಅವರ ಪ್ರವಾದಿ ಪ್ರೇಮದ ಬಗ್ಗೆ ವಿವರವಾಗಿ ಬರೆಯುತ್ತೇನೆ, انشا الله.
ಹೈಸ್ಕೂಲ್ ನಲ್ಲಿ “ಜರ್ಮನಿಯ ಚಾನ್ಸೆಲರ್ ಬಿಸ್ಮಾರ್ಕ್” ಬಗ್ಗೆ ಓದಿದ್ದು ನೆನಪಿದೆ, ಆತ ತುಂಬಾ ಚತುರ ರಾಜಕಾರಣಿ, ಸುಲ್ತಾನ್ ಅಬ್ದುಲ್ ಹಮೀದ್ ಬಗ್ಗೆ ಮತ್ತು ಆತನ ಬುದ್ದಿವಂತಿಕೆ ಬಗ್ಗೆ ಈ ಬಿಸ್ಮಾರ್ಕ್ ಹೇಳೋ ಒಂದು ಮಾತಿದೆ ಯೂರೋಪಿನ ಬುದ್ಧಿಶಕ್ತಿಯ 90% ಅಬ್ದುಲ್ ಹಮೀದ್ ಬಳಿ, 5% ನನ್ನ ಬಳಿ ಉಳಿದ 5% ಇತೆರರ ಬಳಿ ಇದೆ ಇದೆ ಕಾರಣಕ್ಕೆ ಮುಂದೆ ಅಬ್ದುಲ್ ಹಮೀದ್, ಸುಲ್ತಾನ್ ಆಗಿ ಎಲ್ಲಾ ಪಿತೂರಿ ಗಳನ್ನೂ ಮೆಟ್ಟಿ ನಿಂತು 32 ವರ್ಷ ಅಧಿಕಾರ ಮಾಡ್ತಾರೆ.
1876 ರ ಜುಲೈ ನಲ್ಲಿ ರಾಜಕುಮಾರ ಅಬ್ದುಲ್ ಹಮೀದ್ ಗೆ ಆಧ್ಯಾತ್ಮಿಕ ಸಂಘದ (ಬಿಳಿ ಗಡ್ಡದಾರಿ) ಆಹ್ವಾನ ಬರುತ್ತದೆ, ಅಲ್ಲಿ ಸುಲ್ತಾನ್ ಮುರಾದ್ ಬಗ್ಗೆ ಮತ್ತು ಕುಂದುತ್ತಿರುವ ಸಾಮ್ರಾಜ್ಯದ ಬಗ್ಗೆ ಚರ್ಚೆ ನಡೆಯುತ್ತದೆ, ಒಬ್ಬ ಫ್ರೀ ಮೇಸನ್ ಮೆಂಬರ್ ಇಸ್ಲಾಮಿಕ್ ಸಾಮ್ರಾಜ್ಯದ ದೊರೆಯಾಗಲು ಸಾಧ್ಯವಿಲ್ಲ ಅಂತ ಒಂದು ತೀರ್ಮಾನಕ್ಕೆ ಬರುತ್ತಾರೆ, ಅಬ್ದುಲ್ ಹಮೀದ್ ಅವರನ್ನು ಮುಂದಿನ ಸುಲ್ತಾನ್ ಆಗಲು ಒತ್ತಾಯ ಮಾಡುತ್ತಾರೆ, ಆತನಿಗೆ ದೊರೆ ಆಗುವ ಆಸೆ ಇರಲಿಲ್ಲ, ನಾನು ಬೇಡ ಬೇರೆ ರಾಜಕುಮರನಿಗೆ ಅವಕಾಶ ಕೊಡಿ ಅಂತಾರೆ, ನೀವೇ ಸುಲ್ತಾನ್ ಆಗಲು ಸೂಕ್ತ ಅಂತ ಕೊನೆಗೂ ಒಪ್ಪಿಸಿ, ಸುಲ್ತಾನ್ ಮುರಾದ್-V ಅಧಿಕಾರದಿಂದ ಕೆಳಗಿಳಿಸಲು ತೀರ್ಮಾನ ಮಾಡುತ್ತಾರೆ.
ಅಷ್ಟೊತ್ತಿಗೆ ಫ್ರೀ ಮೇಸನ್ ಮತ್ತು ಬ್ರಿಟಿಷ್ ಚಮ್ಚಗಳು ವಿಷ ಸರ್ಪ ದಂತೆ ಅರಮನೆ ತುಂಬಾ ತುಂಬಿ ಹೋಗಿದ್ದವು, ಬರೀ 3-4 ತಿಂಗಳ ಅವಧಿಯಲ್ಲಿ ಸುಲ್ತಾನ್ ಮೂರಾದ್ ಒತ್ತಡದಲ್ಲಿ ಮಾನಸಿಕವಾಗಿ ಬಳಲಿ ಹೋಗಿದ್ದರು, ಒಂದು ಬಾಗದಲ್ಲಿ ಫ್ರೀ ಮೇಸನ್ ಯೋಜನೆ ಜಾರಿಗೆ ತರುವ ಒತ್ತಡ, ಇನ್ನೊಂದು ಕಡೆ ಒಟ್ಟೋಮನ್ ಪ್ರಜೆಗಳ ವಿಶ್ವಾಸ ಕಳೆದು ಕೊಳ್ಳುವ ಭಯ, ದಿನ ಕಳೆದಂತೆ ವಿಚಿತ್ರವಾಗಿ ವರ್ತಿಸಲು ಶುರು ವಾದರು ಸುಲ್ತಾನ್, “ಒಬ್ಬ ಮಾನಸಿಕ ಅಸ್ವಸ್ಥ ನಂತೆ ವರ್ತಿಸುವ ರಾಜ” ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯ ಇಲ್ಲ ಅಂತ, ರಾಜ ಮನೆತನದಲ್ಲಿ ಚರ್ಚೆ ಶುರವಾಯಿತು, ಇದೆ ಸೂಕ್ತ ಸಮಯ ಅಂತ ಅಬ್ದುಲ್ ಹಮೀದ್ ಮತ್ತು ಹಿತೈಷಿಗಳು ಆಗಸ್ಟ್ 1876 ರ ಒಂದು ದಿನ ಸೈನ್ಯದ ಸಂಪೂರ್ಣ ಸಹಕಾರ ದೊಂದಿಗೆ, ಮುರಾದ್ -೫ ಅವನ್ನು ಒಟ್ಟೋಮನ್ ಸಿಂಹಾಸನದಿಂದ ಉಚ್ಚಾಟಿಸಲಾಯ್ತು.
ಮುಂದಿನ ಚಾಪ್ಟರ್ ಸುಲ್ತಾನ್ ಅಬ್ದುಲ್ ಹಮೀದ್ -೨ ಮತ್ತು ಫ್ಯಾಲಸ್ತಿನ್ ನನ್ನ ಜೀವ.
– ಖಲೀಲ್ ಸೇರಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.