(www.vknews.com) : ಕೋರೋಣ ಲಾಕ್ ಡೌನ್ ಕಾಲದಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟಗಳನ್ನು ಅನುಭವಿಸುತ್ತಿರುವ ಸಮುದಾಯದ ಅತ್ಯಂತ ಶ್ರೇಷ್ಠ ಗೌರವಾನ್ವಿತ ಸ್ಥಾನದಲ್ಲಿರುವ ಮುಅಲ್ಲಿಂ ಖತೀಬ್ ಉಸ್ತಾದರಿಗೆ ಒಂದು ಹಂತದ ಭದ್ರತೆಯನ್ನು ನೀಡುವ ಉದ್ದೇಶದಿಂದ ಮುಅಲ್ಲಿಂ ಸಾಂತ್ವನ ಫಂಡ್ ರೂಪುಗೊಂಡಿತು. ಜೀವನವು ಬದಲಾಗಿ ದಿಕ್ಕುತೋಚದೆ ಕಂಗಾಲಾಗಿದ್ದ ಮದ್ರಸಾ ಅಧ್ಯಾಪಕರಿಗೆ ಸಣ್ಣಮಟ್ಟದ ಆರ್ಥಿಕ ಸಹಾಯವನ್ನು ನೀಡುವ ಗುರಿಯಿಟ್ಟು ಅರ್ಶದೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆಯ ಗೌರವಾನ್ವಿತ ಖಾಝಿಗಾಳಾಗಿ ಜಿಲ್ಲೆಯ ಜನ ಮಾನಸ ಗಳಲ್ಲಿ ಸಂಚಲನ ಮೂಡಿಸಿದ ಶೈಖುನಾ ಕೋಟ ಉಸ್ತಾದ್ , ಶೈಖುನಾ ಸಿಯಂ ಉಸ್ತಾದ್ (ಖ ಸಿ) ರವರ ಸ್ಮರಣೆಗಾಗಿ ಅರ್ಶದೀಸ್ ಸಾಂತ್ವನ ಫಂಡ್ ರೂಪಿಕರಿಸಿದ್ದು ಸರಿಸುಮಾರು 100 ಉಸ್ತಾದರಿಗೆ ಧನಸಹಾಯ ಹಾಗೂ ನೂರು ಉಸ್ತಾದರಿಗೆ ಕಿಟ್ ವಿತರಿಸಲಾಯಿತು.
ದಾನಿಗಳ ವ್ಯಾಪಕ ಬೆಂಬಲ
ಅನಿವಾಸಿಗಳ ಸಹಕಾರದಿಂದ ಜಿಲ್ಲೆಯ 200 ಅರ್ಹ ಮದ್ರಸಾ ಅಧ್ಯಾಪಕರಿಗೆ ನೆರವು ನೀಡಿದ್ದು ಈ ಆಶಾದಾಯಕ ಬೆಳವಣಿಗೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಷರತ್ತು ಬದ್ಧವಾಗಿ ಅರ್ಹರಾದ ಸುಮಾರು ಇನ್ನೂರಕ್ಕೂ ಅಧಿಕ ಅಧ್ಯಾಪಕರಿಗೆ ಸಹಾಯಧನವನ್ನು ವಿತರಿಸುವ ಮಹತ್ತರವಾದ ಕಾರುಣ್ಯ ಸೇವೆಗೆ ಮಂಗಳೂರು ,ಉಪ್ಪಿನಂಗಡಿ, ಕಡಬ ಬಂಟ್ವಾಳ ತಾಲೂಕಿನ ವಿವಿಧ ಸ್ಥಳಗಳಲ್ಲಿ ಸರಳ ವಿತರಣೆ ಕಾರ್ಯಕ್ರಮಕ್ಕೆ, ಪುತ್ತೂರು ಬಪ್ಪಳಿಗೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.
ಅರ್ಶದೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷರಾದ ಕೆ.ಯು ಖಲೀಲ್ ರಹ್ಮಾನ್ ಅರ್ಶದಿ ಕೋಲ್ಪೆ ಇವರ ಅಧ್ಯಕ್ಷತೆಯಲ್ಲಿ ಸೆಯ್ಯದ್ ಅಕ್ರಂ ಅಲೀ ತಂಙ್ಙಳ್ ಪುತ್ತೂರು ಉದ್ಘಾಟಿಸಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ ಪ್ರಸ್ತುತ ಸಮಾಜ ಸೇವೆಗೆ ಸ್ಪೂರ್ತಿ ಹಾಗೂ ಬಲ ತುಂಬುವುದು ನಮ್ಮ ಕರ್ತವ್ಯ ಧಾರ್ಮಿಕ ಕ್ಷೇತ್ರದಲ್ಲಿರುವವರೇ ತಮ್ಮಸಹಜೀವಿಗಳೊಂದಿಗೆ ಸಹಕರಿಸಿದ ಈ ಸೇವೆಯು ನಮಗೆ ಮಾದರಿ. ದಾನಿಗಳು ಅನಿವಾಸಿಗಳು ಎಲ್ಲರೂ ಈ ಮಹತ್ತರವಾದ ಕಾರ್ಯಕ್ಕೆ ಬೆಂಬಲ ನೀಡಬೇಕು ಎಂದರು. ಬಪ್ಪಳಿಗೆ ಖತೀಬ್ ಉಸ್ತಾದ್ ಅಹ್ಮದ್ ನಈಮ್ ಫೈಝಿ ಮುಕ್ವೆ ಮುಖ್ಯ ಪ್ರಭಾಷಣ ಗೈದರು .ಬಪ್ಪಳಿಗೆ ಜುಮಾ ಮಸೀದಿ ಅಧ್ಯಕ್ಷರಾದ ಬಿ ಎಚ್ ಮೋಹಮ್ಮದ್ ಹಾಜಿ ಶೈಖುನಾ ಸಿಎಂ ಉಸ್ತಾದ್ ಅವಾರ್ಡ್ ದೆಮ್ಮಲೆ ಖತೀಬ್ ಸಲೀಂ ಅರ್ಶದೀ ಕಜೆಮಾರ್ ಅವರಿಗೆ ನೀಡಿದರು. ಅಬ್ದುಲ್ ಹಮೀದ್ ಹಾಜಿ ,ಶಹೀಂ ಅಬ್ದುಲ್ ಹಮೀದ್ , ಮುಹಮ್ಮದ್ ಫಾರೂಖ್ ರವರು ತಲಾ ಖಲೀಲ್ ರಹ್ಮಾನ್ ಅರ್ಶದೀ ಕೋಲ್ಪೆ, ಹಸನ್ ಅರ್ಶದೀ ಬೆಳ್ಳಾರೆ, ನಝೀರ್ ಅರ್ಶದೀ ಅಜ್ಜಿಕಟ್ಪೇ, ಜಲೀಲ್ ಅರ್ಶದೀ ಕಟ್ಟತ್ತಾರ್ , ಶರೀಫ್ ಅರ್ಶದೀ ಈಶ್ವರಮಂಗಳ , ಇಲ್ಯಾಸ್ ಅರ್ಶದೀ ಆತೂರ್, ಅಬ್ದುಲ್ ರಹಿಮಾನ್ ಅರ್ಶದೀ ಉಪ್ಪಿನಂಗಡಿ, ಅಬ್ದುಲ್ ಮಜೀದ್ ಅರ್ಶದೀ ಮುಕ್ವೆ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಪ್ರಧಾನ ಕಾರ್ಯದರ್ಶಿ ನಝೀರ್ ಅರ್ಶದೀ ಸ್ವಾಗತಿಸಿ ಜಲೀಲ್ ಅರ್ಶದೀ ವಂದಿಸಿದರು .
ಲಾಕ್ ಡೌನ್ ಹಲವರನ್ನು ಸಂಕಷ್ಟಕ್ಕೆ ತಳ್ಳಿದೆ. ಪ್ರತ್ಯೇಕವಾಗಿ ಧಾರ್ಮಿಕ ವಿದ್ವಾಂಸರಿಗೆ ಜೀವನದ ಹಾದಿಯನ್ನೇ ತಪ್ಪಿಸಿದಂತಾಗಿದೆ. ಸಂಕಷ್ಟಗಳು ಮನುಷ್ಯನಿಗೆ ಸಹಜ. ಆದರೆ ಗೌರವಾನ್ವಿತ ಸ್ಥಾನದಲ್ಲಿರುವ ಉಸ್ತಾದರಿಗೆ ಇದು ಎದುರಿಸಲು ಕಷ್ಟವಾಗುತ್ತದೆ. ಸಮಾಜದ ಸ್ಥಿತಿಗತಿಗಳಿಗೆ ನಿರ್ದೇಶನವನ್ನು ನೀಡುವ ಉಸ್ತಾದರಿಗೆ ತನ್ನ ದುಃಖವನ್ನು ಹಂಚಿಕೊಳ್ಳಲು ಕೆಲವೊಮ್ಮೆ ಆಗುತ್ತಿಲ್ಲ ಇದನ್ನು ಮನಗೊಂಡು ಕೋ-ಆರ್ಡಿನೇಟರ್ ಗಳ ಸಹಾಯದಿಂದ ಸುಮಾರು 5 ಲಕ್ಷ ರೂಪಾಯಿ ಈ ವರೆಗೆ ನೆರವನ್ನು ನೀಡಿದ್ದೇವೆ. ಮುಂದೆಯೂ ಮಿಗಿಲಾದ ಗುರಿ ಇದೆ ಸಹಕಾರದ ಅಗತ್ಯವಿದೆ
ಕೆ ಯೂ ಖಲೀಲ್ ರಹ್ಮಾನ್ ಅರ್ಶದೀ ಕೋಲ್ಪೆ ( ಅಧ್ಯಕ್ಷರು ಅರ್ಷದೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ )
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.