(www.vknews.com) : ಆಧುನಿಕ ಯುಗದಲ್ಲಿ ಬೆರಳ ತುದಿಯಲ್ಲಿ ಪ್ರಪಂಚ ನೋಡಲು ವಿಜ್ಞಾನ ಯಶಸ್ವಿಯಾದರೂ ಕೊರೋನಾದಂತ ಭೀಕರತೆ ಸರ್ವವಲಯವನ್ನೂ ನಿಶ್ಶಬ್ದಗೊಳಿಸಿಬಿಟ್ಟಿದೆ. ವ್ಯಾಪಾರ ಮತ್ತು ಉದ್ಯೋಗವಿಲ್ಲದೆ ಅದೆಷ್ಟೋ ಕುಟುಂಬಗಳು ಹಸಿವಿನಿಂದ ಸಂಕಷ್ಟಗಳನ್ನು ಎದುರಿಸುತ್ತಿವೆ. ಶಿಕ್ಷಣವು ಕೂಡ ರೋಗದ ಭೀತಿಗೆ ಧಾಳಿಯಾಗುತ್ತಿವೆ. ಶಾಲಾ ಕಾಲೇಜಿಗೆ ಹಾಜರಾಗಲು ಅಸಾಧ್ಯವಾಗದೆ ವಿದ್ಯಾರ್ಥಿಗಳ ಕಲಿಕೆಯ ಸ್ಪರ್ಶವೇ ನಿಂತುಹೋಗಿವೆ. ವಿಧ್ಯಾರ್ಥಿಗಳ ಶೈಕ್ಷಣಿಕ ವರ್ಷವೇ ನಷ್ಟವಾಗಿವೆ. ಮನೆಯಲ್ಲೇ ಕುಳಿತು ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ಪಡೆಯುವ ಉದ್ದೇಶದಿಂದ ಆನ್-ಲೈನ್ ಶಿಕ್ಷಣ ಎಂಬ ಶಿಕ್ಷಣ ಪದ್ಧತಿ ಅನಿವಾರ್ಯವೋ ಸಾಮಾನ್ಯವೋ ಇಲ್ಲೊಂದು ಪ್ರಶ್ನೆ ಮೂಡುತ್ತಿದೆ. ಈ ಆನ್-ಲೈನ್ ಶಿಕ್ಷಣ ಪದ್ಧತಿಯ ಸಾಧಕ ಬಾಧಕಗಳ ಬಗ್ಗೆ ಗಂಬೀರವಾಗಿ ನಾವೆಲ್ಲರೂ ಚಿಂತಿಸಬೇಕಾಗಿದೆ.
ಒಂದು ಪ್ರಾಯದ ಹಸುಳೆಗೆ ಎತ್ತು,ನಾಯಿ,ಬೆಕ್ಕು,ಚಂದ್ರಗಳನ್ನು ತೋರಿಸಿ ಆಹಾರ ಉಣ್ಣಿಸುವ ಕಾಲದಲ್ಲಿದ್ದಂತಹ ಆರೋಗ್ಯ ಹಾಗೂ ನೆಮ್ಮದಿ ಮೊಬೈಲ್ ಫೋನ್ ತೋರಿಸಿ ತಿನ್ನಿಸುವ ಪ್ರಸಕ್ತ ಕಾಲದಲ್ಲಿಲ್ಲ.ಇದೊಂದು ಸಣ್ಣ ವಿಚಾರವಾದರೂ ಇದರ ದುಷ್ಪರಿಣಾಮವನ್ನು ಮನುಷ್ಯ ಈಗ ಶಾರೀರಿಕ ಹಾಗೂ ಮಾನಸಿಕವಾಗಿ ಅನುಭವಿಸುತ್ತಿದ್ದಾನೆ. ಈಗ ಮನುಷ್ಯನ ಪ್ರತಿಯೊಂದು ಕಾರ್ಯದಲ್ಲೂ ಮೊಬೈಲ್ ಪರಾವಲಂಬಿಯಾಗಿರುವ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ.
ಆನ್-ಲೈನ್ ಶಿಕ್ಷಣಕ್ಕೆ ಮೊಬೈಲ್ ಅನಿವಾರ್ಯವಾದ ಕಾರಣ ಮೊಬೈಲ್ ಬಳಕೆಯ ದುಷ್ಪರಿಣಾಮಗಳನ್ನೂ ತಿಳಿಸಬೇಕಾಗುತ್ತದೆ. ಈಗಾಗಲೇ ಮೊಬೈಲ್ ಗೀಳಿಗೆ ತುತ್ತಾದ ಮಕ್ಕಳಿಗೆ ಆನ್-ಲೈನ್ ಶಿಕ್ಶಣವೆಂಬ ಹೆಸರಲಿ ಇನ್ನಷ್ಟು ಮೊಬೈಲ್ ಬಳಸುವ ಶಿಕ್ಷಣ ಪದ್ಧತಿಯ ಕುರಿತು ಪೋಷಕರು ಚಿಂತಿತರಾಗಿದ್ದಾರೆ. ತಮ್ಮ ಮಕ್ಕಳನ್ನು ಆರೋಗ್ಯದ ದೃಷ್ಟಿಯ ಕಾರಣ ಮೊಬೈಲ್ ಬಳಕೆಯಿಂದ ಅಂತರ ಕಾಪಾಡಿಕೊಂಡಿ ಬಂದಿರುವ ಬಹಳಷ್ಟು ಪೊಷಕರಿಗೆ ಆನ್-ಲೈನ್ ಶಿಕ್ಷಣದ ದುಷ್ಪರಿಣಾಮದ ಚಿಂತೆ ಕಾಡತೊಡಗಿದೆ.
ಮಕ್ಕಳಿಗೆ ಆನ್-ಲೈನ್ ಶಿಕ್ಷಣ ಪದ್ಧತಿಯ ಪರ ವಾದಿಸುವವರಿಗೆ ಅದರ ವೈಫಲ್ಯಗಳನ್ನು ಅವಲೋಕಿಸುವ ಸಮಯ ಅಥವಾ ಅನುಭವ ಆಗಿರಲಿಕ್ಕಿಲ್ಲ ಎಂದು ತೀರ್ಮಾನಿಸಬಹುದು. ಈಗಾಗಲೇ ಆನ್-ಲೈನ್ ಶಿಕ್ಷಣ ಜಾರಿಗೊಳಿಸುವ ಸಂದೇಶಗಳು ವಿದ್ಯಾಸಂಸ್ಥೆಯಿಂದ ಬಂದ ಮೇಲೆ ಪೋಷಕರು ಗೊಂದಲವನ್ನು ಎದುರಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಯು ಈಗ ವಾಣಿಜ್ಯೀಕರಣಗೊಂಡು ಸೇವೆ ಮರೆತು ಆದಾಯದ ಗುರಿಯಿನ್ನಟ್ಟಿರುವ ಪ್ರಮುಖ ಕಾರಣಗಳು ಕೂಡ ಇದರಲ್ಲಿದೆ.
ಕಲಿಕೆಗಾಗಿ ನೇರವಾಗಿ ಶಾಲಾ ಕಾಲೇಜಿಗೆ ಹಾಜರಾಗಿ ಅಧ್ಯಾಪಕರಿಂದ ಶಿಕ್ಷಣ ಪಡೆಯುವ ಮಕ್ಕಳೇ ಶಿಕ್ಷಣವನ್ನು ಪಡೆಯಲು ಹರಸಾಹಸ ಪಡೆಯುತ್ತಿರುವಾಗ ಆನ್-ಲೈನ್ ಶಿಕ್ಷಣ ಎಷ್ಟರ ಮಟ್ಟಿಗೆ ಉಪಕಾರಿಯಾಗಬಹುದು. ಈಗಾಗಲೇ ಅತಿ ಭಾರ ಹಾಗೂ ಪಠ್ಯಕ್ರಮದ ಹೊರೆಯಿಂದ ಒತ್ತಡ ಎದುರಿಸುತ್ತಿರುವ ವಿದ್ಯಾರ್ಥಿ ಹಾಗೂ ಪೋಷಕರಿಗೆ ಆನ್-ಲೈನ್ ಶಿಕ್ಷಣ ಪಧ್ಧತಿಯನ್ನು ನಿರ್ವಹಿಸುವುದು ಸಾಧ್ಯವೇ?
ಆನ್-ಲೈನ್ ಶಿಕ್ಷಣ ಪದ್ಧತಿ ಎಂದು ಸುಲಭವಾಗಿ ಓದಿ ಮುಗಿಸಿ ಕರಗತಮಾಡಿಸಲಾಗದು, ಅದು ಪ್ರಾಯೋಗಿಕವಾಗಿ ಲಾಭವಾಗಬೇಕಾದರೆ ಪೋಷಕರು ತಮ್ಮ ಸಮಯವನ್ನು ಮಕ್ಕಳೊಂದಿಗೆ ವ್ಯಯಿಸಿ ಅವರನ್ನು ತರಬೇತುಗೊಳಿಸಿ ಅವರ ಪಠ್ಯ ಮತ್ತು ಮನೆ ಕೆಲಸಗಳ ಹಿಂದೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ, ಅಧ್ಯಾಪಕರ ಬಳಿಯಿಂದ ಲಭಿಸುವ ಧ್ಯಾನವನ್ನು ಆನ್-ಲೈನ್ ಶಿಕ್ಷಣದಿಂದ ಪ್ರಾಪ್ತವಾಗಲಾರದು. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಪಳಗಿಸಲು ಅಸಾಧ್ಯವಾಗಿ ಪೋಷಕರು ವೈಫಲ್ಯರಾಗುತ್ತಾರೆ. ಅದರಲ್ಲಿಯೂ ಅವಿದ್ಯಾವಂತರಾದ ಪೊಷಕರಿಗೆ ಪರರನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿಂದ ಕೀಳರಿಮೆಯೂ ಉಂಟಾಗುತ್ತಿದೆ.
ವಿದ್ಯಾಲಯಗಳಲ್ಲಿ ವಿಧ್ಯಾರ್ಥಿಗಳ ಜೊತೆಗೂಡಿ,ಆಟೋಟದಂತಹ ಇನ್ನಿತರ ಚಟುವಟಿಕೆಗಳಲ್ಲಿ ಬೆರೆತು, ಅಧ್ಯಾಪಕರ ನೇರ ಬೋಧನೆಯೇ ಶಿಕ್ಷಣದ ಸರಿಯಾದ ಕ್ರಮ ಮತ್ತು ಪದ್ಧತಿ. .ಆನ್-ಲೈನ್ ಶಿಕ್ಷಣವು ಬಂಧಿತ ಮತ್ತು ಒತ್ತಡದ ಪದ್ಧತಿಯಾಗಿರುತ್ತದೆ. ಆನ್-ಲೈನ್ ಶಿಕ್ಷಣದ ಪದ್ಧತಿಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ಸಾಕಷ್ಟು ಮೊಬೈಲ್ ಬಳಕೆಗೆ ವಿಧ್ಯಾರ್ಥಿಗಳಿಗೆ ದಾರಿಯಾಗುತ್ತಿದೆ. ಆರೋಗ್ಯದ ಮೇಲೆ ಉಂಟಾಗುವ ಭೀತಿಯಿಂದ ವಿದ್ಯಾರ್ಥಿಗಳು ಫೋಮೋ ಸಿಂಡ್ರೋಮ್, ನಿದ್ರಾಹೀನತೆ, ಡಿಜಿಟಲ್ ಅಮ್ನೇಷಿಯಾ,ಉದ್ವೇಗ, ಖಿನ್ನತೆ ಮತ್ತು ಒತ್ತಡಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆನ್-ಲೈನ್ ಶಿಕ್ಷಣದಿಂದ ಕಾಟಾಚಾರಕ್ಕೆ ವಿದ್ಯಾರ್ಥಿಗಳು ಸಕ್ರಿಯರಾಗಿರಬಹುದು ಆದರೆ ಸಂಪೂರ್ಣ ಸದುಪಯೋಗಪಡೆಯಲಾಗದು. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವೂ ಬೀರುತ್ತದೆ. ಶಿಕ್ಷಣದ ಗುಣಮಟ್ಟ, ಪಠ್ಯಕ್ರಮ ಸುಧಾರಣೆಯಾಗಬೇಕೇ ಹೊರತು ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಪೀಡಿಸುವುದು ಸರಿ ಎನಿಸುವುದಿಲ್ಲ. ಒಂದು ವೇಳೆ ಅನಿವಾರ್ಯತೆ ಎನಿಸಿದರೆ ಕಾಲೇಜು ವಿದ್ಯಾರ್ಥಿಗಳಿಗೆ ಆನ್-ಲೈನ್ ಶಿಕ್ಷಣದಿಂದ ಪ್ರಯೋಜನವಿರಲೂಬಹುದು. ಕಾರಣ ಅವರ ಪಕ್ವತೆ ಅವರಿಗೆ ಸಹಾಯವಾಗುತ್ತದೆ. ಆಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನದ ಜೊತೆ ನಾವು ಸಾಗಬೇಕಾದರೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆಯೂ ಗಂಭೀರವಾಗಿ ಚಿಂತಿಸುವುದು ನಾಗರಿಕ ಸಮಾಜದ ಜವಾಬ್ದಾರಿಯೂ ಆಗಿರುತ್ತದೆ.
ಈ ನಿಟ್ಟಿನಲ್ಲಿ ಸರಕಾರ ಭವಿಷ್ಯ ಭಾರತದ ಆಸ್ತಿಗಳಾದ ವಿದ್ಯಾರ್ಥಿಗಳ ಕಲಿಕೆಯ ಕಡೆ ಇನ್ನಷ್ಟು ಗಮನ ಮತ್ತು ಒಲವು ನೀಡಿ ವಿದ್ಯಾರ್ಥಿಗಳ ಮುಂದಿನ ವಿದ್ಯೆಯ ಹೆಜ್ಜೆಗೆ ಸಂಪೂರ್ಣ ಚಿತ್ತ ನೀಡಬೇಕೆಂಬುವುದು ಸಾರ್ವಜನಿಕ ಅಭಿಪ್ರಾಯ.
ನವಾಝ್ ತುಂಬೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.