ರಾಜ್ಯದ ಎನ್.ಆರ್.ಐ ಫೋರಂ ನ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಿಯೂ,ವಿದೇಶಾಂಗ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿಯೂ ಅನುಭವ ಇರುವ ಡಾ.ಆರತಿ ಕೃಷ್ಣರಂತಹ ಒಬ್ಬೊಬ್ಬರು ನಮ್ಮ ದೇಶದ ಪ್ರತೀ ರಾಜ್ಯದಲ್ಲಿರುತ್ತಿದ್ದರೆ ಇಂದು ದೇಶದ ಚಿತ್ರಣವೇ ಬದಲಾಗುತ್ತಿತ್ತು. ಇವರ ಉತ್ಸಾಹ, ಆಸಕ್ತಿ, ಅಶಕ್ತರಿಗಾಗಿ ತುಡಿಯುವ ಮನಸ್ಸು, ಕೆಲಸ ಮಾಡುವ ಹುಮ್ಮಸ್ಸು ಇವತ್ತಿನ ಬಹುತೇಕ ರಾಜಕಾರಣಿಗಳಿಗಿಲ್ಲದಿರುವುದೇ ಪ್ರಜೆಗಳ ಪಾಲಿಗೆ ಕಂಠಕವಾಗಿದೆ.ಕೋವಿಡ್ ಸಂದರ್ಭದಲ್ಲಿ ಅನಿವಾಸಿಗಳನ್ನು ಮರಳಿ ಕರೆ ತರುವ ಕೈಂಕರ್ಯದಲ್ಲಿ ಇವರು ನಡೆಸಿರುವ ಭಗೀರಥ ಪ್ರಯತ್ನ ಅತ್ಯಧ್ಬುತವಾದುದು. ನನಗೆ ಅವರ ಪರಿಚಯವಾಗಿ ಸುಮಾರು ಐದಾರು ವರ್ಷಗಳಾಗಿರಬಹುದು. ಅವತ್ತಿನಿಂದ ಇವತ್ತಿನ ತನಕ ಅವರ ಕಾರ್ಯವೈಖರಿಯನ್ನು ನೋಡುತ್ತಾ ಬಂದಿದ್ದೇನೆ. ಅಧಿಕಾರ ಇರಲಿ, ಇಲ್ಲದೇ ಇರಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಸದಾ ಜನರಿಗಾಗಿ ಮಿಡಿಯುತ್ತಿರುತ್ತಾರೆ. ಜನರಿಗಾಗಿ ಕೆಲಸ ಮಾಡುತ್ತಿರುವ ಅಪರೂಪದ ವ್ಯಕ್ತಿತ್ವ.ಇವರನ್ನು ಪಡೆದ ನಮ್ಮ ನಾಡು ಧನ್ಯ. ಶುಭವಾಗಲಿ.ಸಾವಿರಾರು ಅಶಕ್ತ ಜನರ ಕಣ್ಣೀರಿನ ಪ್ರಾರ್ಥನೆ ಸದಾ ಇವರ ಜೊತೆಗಿದೆ. ಸೃಷ್ಟಿಕರ್ತನು ಇವರಿಗೆ ಆಯುರಾರೋಗ್ಯ, ಸುಖ, ಸಂಪತ್ತು, ಸಮೃದ್ಧಿ, ನೆಮ್ಮದಿ ನೀಡಿ ಅನುಗ್ರಹಿಸಲಿ. -ರಶೀದ್ ವಿಟ್ಲ, ಸ್ಥಾಪಕರು, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.