ಪುತ್ತೂರು(www.vknews.in): ಮಿತ್ತೂರು ಸಿರಾಜುಲ್ ಹುದಾ ಜುಮಾ ಮಸೀದಿಯ ವಾರ್ಷಿಕ ಮಹಾ ಸಭೆಯು ಗೌರವಾದ್ಯಕ್ಷರಾದ ಮೌಲಾನ ಅಬ್ದುಲ್ ರಜಾಕ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಗತ ವರ್ಷದ ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಹಮೀದ್ ಖಂದಕ್ ಮಂಡಿಸಿದರು. 2020/21 ರ ಸಾಲಿನ ಸದಸ್ಯರನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಹಮೀದ್ ಖಂದಕ್, ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಅಸ್ಬಾರ್ಕ್, ಆದಂ ಎಂ.ಎಂ.ಎಸ್. ಪ್ರಧಾನ ಕಾರ್ಯದರ್ಶಿ: ಕೆ.ಬಿ ಖಾಸಿಂ ಹಾಜಿ. ಜೊತೆ ಕಾರ್ಯದರ್ಶಿ: ಹಂಝ ಬಿ.ಎಸ್. ಕೊಶಾಧಿಕಾರಿಯಾಗಿ ಹಾಜಿ ಹಮೀದ್ ಅಲಿ. ಲೆಕ್ಕ ಪರಿಶೊಧಕರಾಗಿ ಕೆ.ಬಿ ಸಿರಾಜುದ್ದೀನ್ ಮುಂತಾದವರು ಆಯ್ಕೆ ಆದರು. 19 ಮಂದಿ ಸದಸ್ಯರನ್ನು ಸೇರಿಸಲಾಯಿತು. ಮಿತ್ತೂರು ಜುಮಾ ಮಸೀದಿಯ ಖತೀಬ್ ಬಹು ಆಸಿಫ್ ಅಝ್ಹರಿ ದುಆ ನೆರವೇರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.